Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಮಿತಾಬ್ ರಾಜಕೀಯ ಪ್ರವೇಶಕ್ಕೆ ಅವಕಾಶ...

ಅಮಿತಾಬ್ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ರಾಜೀವ್‌ಗಾಂಧಿಯನ್ನು ಎಚ್ಚರಿಸಿದ್ದ ಇಂದಿರಾ

ವಾರ್ತಾಭಾರತಿವಾರ್ತಾಭಾರತಿ23 Sept 2018 9:37 PM IST
share
ಅಮಿತಾಬ್ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ರಾಜೀವ್‌ಗಾಂಧಿಯನ್ನು ಎಚ್ಚರಿಸಿದ್ದ ಇಂದಿರಾ

ಹೊಸದಿಲ್ಲಿ, ಸೆ.23: ತಮ್ಮ ಕುಟುಂಬದೊಂದಿಗೆ ಆತ್ಮೀಯರಾಗಿದ್ದ ಮತ್ತು ಪುತ್ರ ರಾಜೀವ್ ಗಾಂಧಿಯ ನಿಕಟ ಮಿತ್ರನಾಗಿದ್ದ ಹಿಂದಿ ಸಿನಿಮಾ ರಂಗದ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ರಾಜಕೀಯ ಕ್ಷೇತ್ರ ಪ್ರವೇಶಿಸುವುದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಇಷ್ಟವಿರಲಿಲ್ಲ ಎಂದು ರಾಜೀವ್‌ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ.ಎಲ್.ಪೋತೆದಾರ್ ಹೇಳಿದ್ದಾರೆ. ರಶೀದ್ ಕಿದ್ವಾಯಿ ಬರೆದಿರುವ ‘ನೇತಾ ಅಭಿನೇತಾ: ಬಾಲಿವುಡ್ ಸ್ಟಾರ್ ಪವರ್ ಇನ್ ಇಂಡಿಯನ್ ಪೊಲಿಟಿಕ್ಸ್’ ಎಂಬ ಪುಸ್ತಕದಲ್ಲಿ ಈ ಕುರಿತ ವಿವರವಿದೆ. 

1984ರ ಅಕ್ಟೋಬರ್ 31ರಂದು ಇಂದಿರಾಗಾಂಧಿಯವರ ಹತ್ಯೆಯಾಗಿತ್ತು. ಇದಕ್ಕೆ ಕೆಲ ದಿನಗಳ ಮೊದಲು ಆಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ತನ್ನ ಪುತ್ರ ರಾಜೀವ್ ಗಾಂಧಿಯವರ ಜೊತೆ ಮುಂಬರುವ ಚುನಾವಣೆಯ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭ ಇಂದಿರಾ, ಯಾವತ್ತೂ ತೇಜಿ ಬಚ್ಚನ್ ಪುತ್ರ ಅಮಿತಾಬ್ ಬಚ್ಚನ್‌ನ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡ ಎಂದು ಎಚ್ಚರಿಸಿದ್ದರು. ಆಗ ಪೋತೆದಾರ್ ಕೂಡಾ ಅಲ್ಲಿದ್ದರು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ ಮಾಧವರಾವ್ ಸಿಂಧಿಯಾರನ್ನು ಸುರಕ್ಷಿತ ಅಂತರದಲ್ಲಿ ಇರಿಸಿಕೊಳ್ಳುವಂತೆ ಕೂಡಾ ಇಂದಿರಾ ಪುತ್ರನಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ ತಾಯಿಯ ಮಾತನ್ನು ಕೇಳಿಸಿಕೊಂಡ ರಾಜೀವ್ ತುಟಿ ಬಿಚ್ಚಲಿಲ್ಲ. ಬಳಿಕ ಇಂದಿರಾ ಹತ್ಯೆಯಾಯಿತು. ನಂತರದ ಚುನಾವಣೆಯಲ್ಲಿ ಅಮಿತಾಬ್‌ಗೆ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಟಿಕೆಟು ನೀಡಲಾಯಿತು ಮತ್ತು ಅವರು ಗೆದ್ದರು. ಆಗ ವಾಜಪೇಯಿ, ಎಚ್.ಎನ್.ಬಹುಗುಣರಂತಹ ಘಟಾನುಘಟಿಗಳ ಎದುರು ಜನಪ್ರಿಯ ಯುವನಾಯಕನೊಬ್ಬ ಸ್ಪರ್ಧಿಸಬೇಕು ಎಂಬ ಆಶಯ ರಾಜೀವ್ ಗಾಂಧಿಯವ ರ ಮನದಲ್ಲಿ ಇದ್ದಿರಬಹುದು ಎಂದು ಪೋತೆದಾರ್ ಹೇಳಿದ್ದಾರೆ.

 ಸಂಸತ್ ಸದಸ್ಯನಾಗಿ ಸುಮಾರು 2 ವರ್ಷದ ಅವಧಿಯಲ್ಲಿ (1985-87) ಅಮಿತಾಬ್ ಹಲವಾರು ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಸಚಿವರು ಆಕ್ಷೇಪಿಸುತ್ತಿದ್ದರು. ಸಚಿವಾಲಯದ ಅಧಿಕಾರಿಗಳ ನೇಮಕ ಅಥವಾ ವರ್ಗಾವಣೆಯಲ್ಲಿ ಅಮಿತಾಬ್ ಹಸ್ತಕ್ಷೇಪದ ಬಗ್ಗೆ ತನಗೆ ಹಲವಾರು ದೂರುಗಳು ಬಂದಿದ್ದವು ಎಂದು ಪೋತೆದಾರ್ ತಿಳಿಸಿದ್ದಾರೆ. ಆಗ ಕಾಂಗ್ರೆಸ್ ಆಡಳಿತವಿದ್ದ ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಸರಕಾರದ ಕಾರ್ಯನಿರ್ವಹಣೆಯಲ್ಲೂ ಅಮಿತಾಬ್ ಮೂಗು ತೂರಿಸುತ್ತಿದ್ದರು ಎಂಬ ದೂರು ಬಂದಿದ್ದರೂ ಇದನ್ನು ರಾಜೀವ್ ಗಾಂಧಿಯವರಿಗೆ ತಾನು ತಲುಪಿಸಿರಲಿಲ್ಲ ಎನ್ನುತ್ತಾರೆ ಪೋತೆದಾರ್. 1987ರಲ್ಲಿ ರಾಜೀವ್ ಮತ್ತು ಅಮಿತಾಬ್ ನಡುವಿನ ಸ್ನೇಹ ಸಂಬಂಧ ಹಳಸಿದಾಗ ಅಮಿತಾಬ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ರಾಜೀನಾಮೆ ನೀಡುವ ಮೊದಲು ಪ್ರಧಾನಿ ರಾಜೀವ್‌ಗಾಂಧಿಯವರ ನಿವಾಸಕ್ಕೆ ಅಮಿತಾಭ್ ಆಗಮಿಸಿದ್ದು ಅಲ್ಲಿ ಕೆಲ ಹೊತ್ತು ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಬಳಿಕ ರಾಜೀವ್ ತಮ್ಮ ರಾಜಕೀಯ ಕಾರ್ಯದರ್ಶಿ ಪೋತೆದಾರ್‌ರನ್ನೂ ಕರೆಸಿಕೊಂಡಿದ್ದಾರೆ. ನಂತರ ಅಮಿತಾಬ್‌ರತ್ತ ತಿರುಗಿ- ನೀವು ರಾಜೀನಾಮೆ ನೀಡಬೇಕೆಂದು ಪೋತೆದಾರ್‌ಜಿ ಹೇಳುತ್ತಿದ್ದಾರೆ ಎಂದರು. ಪೋತೆದಾರ್‌ಜಿ ನನ್ನ ರಾಜೀನಾಮೆ ಕೇಳುತ್ತಾರೆಂದರೆ ನಾನು ಈಗಲೇ ನೀಡಲು ಸಿದ್ದ, ಎಲ್ಲಿ ಒಂದು ಪೇಪರ್ ತನ್ನಿ ಎಂದರು ಅಮಿತಾಬ್. ನಿಮ್ಮ ಕೈಯಲ್ಲಿ ಸ್ಪೀಕರ್‌ರನ್ನು ಉದ್ದೇಶಿಸಿ ರಾಜೀನಾಮೆ ಪತ್ರ ಬರೆದುಕೊಡಿ ಎಂದು ಪೋತೆದಾರ್ ಹೇಳಿದಾಗ ಅದರಂತೆ ಅಮಿತಾಬ್ ಬರೆದುಕೊಟ್ಟರು. ಆದರೆ ನಿಜಕ್ಕೂ ಈ ವಿಷಯದ ಕುರಿತು ತಾನು ರಾಜೀವ್‌ರೊಂದಿಗೆ ಮಾತಾಡಿರಲಿಲ್ಲ, ಅಥವಾ ಅವರು ತನ್ನೊಂದಿಗೆ ಮಾತಾಡಿರಲಿಲ್ಲ. ಆದರೆ ಅವರು ತನ್ನ ಹೆಸರು ಯಾಕೆ ಹೇಳಿದರೆಂದು ಅರ್ಥವಾಗಲಿಲ್ಲ ಎಂದು ಪೋತೆದಾರ್ ಹೇಳಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಏಕಾಏಕಿ ಪ್ರಸಿದ್ಧಿಗೆ ಬಂದ ಅಮಿತಾಬ್ ಹೆಸರು ಅಷ್ಟೇ ಕ್ಷಿಪ್ರವಾಗಿ ತೆರೆಮರೆಗೆ ಸರಿಯಿತು ಎಂದು ಪೋತೆದಾರ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X