Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಣ್ಮನ ಸೆಳೆದ ಸೂರ್ಯನ ಸುತ್ತ ವೃತ್ತಾಕಾರದ...

ಕಣ್ಮನ ಸೆಳೆದ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲು: ಖಗೋಳ ವಿಸ್ಮಯಕ್ಕೆ ಬೆರಗಾದ ಶಿವಮೊಗ್ಗ ನಾಗರಿಕರು

ಬಿ.ರೇಣುಕೇಶ್ಬಿ.ರೇಣುಕೇಶ್24 Sept 2018 11:07 PM IST
share
ಕಣ್ಮನ ಸೆಳೆದ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲು: ಖಗೋಳ ವಿಸ್ಮಯಕ್ಕೆ ಬೆರಗಾದ ಶಿವಮೊಗ್ಗ ನಾಗರಿಕರು

ಶಿವಮೊಗ್ಗ, ಸೆ.24: ಆಕಾಶದಲ್ಲಿ ಸೋಮವಾರ ಸೂರ್ಯನ ಸುತ್ತ ಗೋಚರಿಸಿದ ಅಪರೂಪದ ‘ವೃತ್ತಾಕಾರದ ಕಾಮನಬಿಲ್ಲು’ (ವೈಜ್ಞಾನಿಕ ಹೆಸರು: 22 ಡಿಗ್ರಿ ಹ್ಯಾಲೋ) ಶಿವಮೊಗ್ಗ ನಗರದ ನಾಗರಿಕರನ್ನು ಅಕ್ಷರಶಃ ಚಕಿತಗೊಳಿಸಿತು. ಈ ಖಗೋಳ ವಿಸ್ಮಯವು ಅಚ್ಚರಿ, ಬೆರಗಿನ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಸರಿಸುಮಾರು ಬೆಳಗ್ಗೆ 11:40ರಿಂದಲೇ ಸೂರ್ಯನ ಸುತ್ತ ‘ವೃತ್ತಾಕಾರದ ಕಾಮನಬಿಲ್ಲು’ ನಾಗರಿಕರಿಗೆ ಗೋಚರಿಸಲಾರಂಭಿಸಿತ್ತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಈ ಖಗೋಳ ಚಮತ್ಕಾರ ಶಿವಮೊಗ್ಗ ನಗರದಲ್ಲಿ ಕಂಡುಬಂದಿತು. ಮಧ್ಯಾಹ್ನ 1:15ರ ನಂತರ ‘ವೃತ್ತಾಕಾರದ ಕಾಮನಬಿಲ್ಲು’ ಕ್ರಮೇಣ ಮರೆಯಾಯಿತು.

ಸಂಚಲನ: ಸೂರ್ಯನ ಸುತ್ತ ‘ವೃತ್ತಾಕಾರದ ಕಾಮನಬಿಲ್ಲು’ ಆವರಿಸಿದ್ದ ಸಂಗತಿಯು ನಗರದ ನಾಗರಿಕ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಹುತೇಕ ನಗರದೆಲ್ಲೆಡೆ ನಾಗರಿಕರು ಆಕಾಶದತ್ತ ಚಿತ್ತ ನೆಟ್ಟು, ಸೂರ್ಯನ ಸುತ್ತ ಆವರಿಸಿದ್ದ ಕಾಮನಬಿಲ್ಲು ವೀಕ್ಷಿಸುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಈ ಅಪರೂಪದ ವಿದ್ಯಮಾನ ವೀಕ್ಷಿಸುವಂತೆ ಕೆಲವರು ತಮ್ಮ ಸ್ನೇಹಿತರು, ಬಂಧುಗಳು, ಕುಟುಂಬ ಸದಸ್ಯರಿಗೆ ಫೋನ್ ಮೂಲಕ ಕರೆ ಮಾಡಿ, ಸಂದೇಶ ರವಾನಿಸಿ ತಿಳಿಸುತ್ತಿದ್ದರು.

ಸಾಮಾಜಿಕ ಸಂಪರ್ಕ ಜಾಲತಾಣ ವಾಟ್ಸ್ ಆ್ಯಪ್‌ನಲ್ಲಂತೂ ಈ ಕುರಿತಂತೆ ಭಾರೀ ಸಂಖ್ಯೆಯ ಫೋಟೋ-ಸಂದೇಶಗಳ ವಿನಿಮಯವಾಯಿತು. ವೈರಲ್ ಆಗಿತ್ತು. ನೆತ್ತಿ ಸುಡುವ ಬಿಸಿಲಿನ ನಡುವೆಯೂ ನಾಗರಿಕರು ಖಗೋಳ ವಿಸ್ಮಯವನ್ನು ಕಣ್ತುಂಬಿಕೊಂಡರು.

ಶಾಲೆಗಳಲ್ಲಿ ಪಾಠ: ಹಲವು ಶಾಲಾ-ಕಾಲೇಜುಗಳಲ್ಲಿ, ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರ ಕರೆತಂದು ಸೂರ್ಯನ ಸುತ್ತ ಆವರಿಸಿದ್ದ ವೃತ್ತಾಕಾರದ ಕಾಮನಬಿಲ್ಲನ್ನು ಶಿಕ್ಷಕರು ತೋರಿಸುತ್ತಿದ್ದ ದೃಶ್ಯ ಕಂಡುಬಂದಿತು. ‘22 ಡಿಗ್ರಿ ಹ್ಯಾಲೋ’ಗೆ ಕಾರಣವಾಗುವ ಅಂಶಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಹಿತಿ ನೀಡುತ್ತಿದ್ದರು.

ಕುತೂಹಲ: ಸೂರ್ಯನ ಸುತ್ತ ಕಂಡುಬಂದ ಉಂಗುರದ ರೀತಿಯ ಬಣ್ಣದ ಪ್ರಭೆಗೆ ಕಾರಣವೇನೆಂಬ ಕುತೂಹಲ ಬಹುತೇಕ ನಾಗರಿಕರಲ್ಲಿ ಮನೆ ಮಾಡಿತ್ತು. ಕೆಲವರು ಸೂರ್ಯ ಗ್ರಹಣವೇನಾದರೂ ಸಂಭವಿಸಿದೆಯಾ? ಎಂಬ ಅನುಮಾನಗಳನ್ನು ಮುಂದಿಡುತ್ತಿದ್ದರು. ಮತ್ತೆ ಕೆಲವರು ಇದಕ್ಕೆ ತಮ್ಮದೇ ಆದ ವಿಶ್ಲೇಷಣೆ ಕೊಡುತ್ತಿದ್ದರು. ಆದರೆ ಬಹುತೇಕ ಜನಸಾಮಾನ್ಯರಿಗೆ ಈ ಖಗೋಳ ವಿಸ್ಮಯದ ಹಿನ್ನೆಲೆಯ ಕುರಿತಂತೆ ಸೂಕ್ತ ಮಾಹಿತಿ ಸಿಗಲಿಲ್ಲ.

ಒಟ್ಟಾರೆ ಶಿವಮೊಗ್ಗ ನಗರದಲ್ಲಿ ಸೋಮವಾರ ಸೂರ್ಯನ ಸುತ್ತ ಕಂಡುಬಂದ ವೃತ್ತಾಕಾರದ ಕಾಮನಬಿಲ್ಲು ಅರ್ಥಾತ್ 22 ಡಿಗ್ರಿ ಹ್ಯಾಲೋ ನಾಗರಿಕ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತು.

ಪ್ರಭೆಗೆ ವೈಜ್ಞಾನಿಕ ಕಾರಣವೇನು?

ಸೂರ್ಯನ ಕಿರಣಗಳು ಭೂಮಿಗೆ ಹಾಯ್ದು ಬರುವಾಗ ಹಾಗೂ ವಾತಾವರಣದಲ್ಲಿ ನೀರಿನ ಹನಿಗಳು ಹೆಚ್ಚಿದಾಗ, ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನವಾಗಿ ಸೂರ್ಯನ ಸುತ್ತ ಕಾಮನಬಿಲ್ಲು ಗೋಚರವಾಗುತ್ತದೆ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.

‘ಭೂಮಿಯಿಂದ ಸುಮಾರು 20 ಸಾವಿರ ಅಡಿಗಳ ಎತ್ತರದ ವಾತಾವರಣದಲ್ಲಿ (ಟ್ರೆಪೋಸ್ಪಿಯರ್) ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ಯೀಕರಣಗೊಂಡು ಮಂಜಿನ ಹರಳುಗಳಾಗುತ್ತವೆ. ಈ ಗೋಳಾಕಾರದ ಮಂಜಿನ ಹರಳುಗಳ ಮೂಲಕ ಸೂರ್ಯನ ಬಿಳಿಯ ಕಿರಣಗಳು ಹಲವು ಬಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದುರುವಿಕೆಗೆ ಕಾರಣವಾಗುತ್ತದೆ. ಇದರಿಂದ ಸೂರ್ಯನ ಸುತ್ತ 22 ಡಿಗ್ರಿ ವೃತ್ತಾಕಾರದಲ್ಲಿ ಅದ್ಭುತ ಕಾಮನಬಿಲ್ಲು ಮೂಡುತ್ತದೆ. ಒಮ್ಮೊಮ್ಮೆ ಚಂದ್ರನ ಸುತ್ತಲೂ ಇಂತಹ ಕಾಮನಬಿಲ್ಲು ಕಂಡುಬರುವುದುಂಟು’ ಎಂದು ಖಗೋಳ ತಜ್ಞರು ವಿವರಿಸುತ್ತಾರೆ. ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

share
ಬಿ.ರೇಣುಕೇಶ್
ಬಿ.ರೇಣುಕೇಶ್
Next Story
X