Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಒಬ್ಬರ ಮನ

ಒಬ್ಬರ ಮನ

ವಾರ್ತಾಭಾರತಿವಾರ್ತಾಭಾರತಿ25 Sept 2018 12:00 AM IST
share
ಒಬ್ಬರ ಮನ

ಒಬ್ಬರ ಮನವ ನೋಯಿಸಿ,

ಒಬ್ಬರ ಮನವ ಘಾತವ ಮಾಡಿ,
ಗಂಗೆಯ ಮುಳುಗಿದಡೇನಾಗುವುದಯ್ಯ?
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತಯ್ಯ.
ಅದು ಕಾರಣ, ಮನವ ನೋಯಿಸದವನೆ,
ಒಬ್ಬರ ಘಾತವ ಮಾಡದವನೆ
ಪರಮಪಾವನ ನೋಡಾ ಕಪಿಲಸಿದ್ದಮಲ್ಲಿಕಾರ್ಜುನ.
                                         -ಸಿದ್ದರಾಮೇಶ್ವರ

ಜೀವದಯೆಯ ಪರವಾದ ಮತ್ತು ಮೂಢನಂಬಿಕೆಗೆ ವಿರುದ್ಧವಾದ ಚಿಂತನೆಗಳನ್ನು ಸಿದ್ದರಾಮೇಶ್ವರರ ಈ ವಚನದಲ್ಲಿ ಏಕಕಾಲಕ್ಕೆ ಅನುಭವಿಸುತ್ತೇವೆ. ಜನರ ಮನಸ್ಸನ್ನು ನೋಯಿಸಿ ಸಂತೋಷ ಪಡುವುದು ಮತ್ತು ಜನರ ಮನಸ್ಸಿಗೆ ಹಿಂಸೆಯನ್ನುಂಟು ಮಾಡುವುದು ವಿಘ್ನಸಂತೋಷಿಗಳ ಕುಕೃತ್ಯವಾಗಿದೆ. ಇಂಥ ನಿರ್ದಯಿಗಳು ನೂರೆಂಟು ಪಾಪಕೃತ್ಯಗಳನ್ನು ಎಸಗಿದ ನಂತರ ಪಾಪ ಪರಿಹಾರಕ್ಕಾಗಿ ಕಾಶಿಗೆ ಹೋಗಿ ಗಂಗಾನದಿಯಲ್ಲಿ ಮುಳುಗಿ ವಿಶ್ವನಾಥನ ದರ್ಶನ ಪಡೆದರೆ ತಾವು ಮಾಡಿದ ಹೀನ ಕಾರ್ಯಗಳಿಂದುಂಟಾದ ಪಾಪ ಪರಿಹಾರವಾಗುವುದೇ ಎಂದು ಸಿದ್ದರಾಮೇಶ್ವರರು ಪ್ರಶ್ನಿಸಿದ್ದಾರೆ. ಹುಣ್ಣಿಮೆ ದಿನ ಪೂರ್ಣಚಂದ್ರ ಗಂಗಾನದಿಯಲ್ಲಿ ಥಳಥಳ ಹೊಳೆಯುತ್ತಿರುತ್ತಾನೆ. ಆದರೆ ಚಂದ್ರನ ಜೊತೆ ಆತನ ಕಲೆಗಳೂ ಎದ್ದು ಕಾಣಿಸುತ್ತಿರುತ್ತವೆ. (ಗುರುಪತ್ನಿಯನ್ನು ಓಡಿಸಿಕೊಂಡು ಹೋದ ಎಂಬ ಕಳಂಕವೂ ಚಂದ್ರನ ಮೇಲಿದೆ.)

ಧರ್ಮ, ನೀತಿ, ತತ್ತ್ವಜ್ಞಾನ ಮುಂತಾದವು ಮಾನವರಿಗೆ ಸಂಸ್ಕಾರ ಕೊಟ್ಟು ನಿಜಮಾನವ ರನ್ನಾಗಿಸುವ ಗುರಿಯನ್ನೇ ಹೊಂದಿವೆ. ಆದರೆ ಧಾರ್ಮಿಕ ವಿಧಿ ವಿಧಾನಗಳು, ಸುಳ್ಳು ಜೋತಿಷಿಗಳು, ಭವಿಷ್ಯ ಹೇಳುವವರು ‘ಪಾಪ ಪರಿಹಾರ’ ಮಾಡುತ್ತೇವೆಂದು ಹೇಳಿ ಧರ್ಮದ ಹೆಸರಿನಲ್ಲಿ ಮೋಸ ಮಾಡುತ್ತಾರೆ. ಇದರಿಂದಾಗಿ ಅಪರಾಧಗಳು ಹೆಚ್ಚುತ್ತವೆ. ಪಾಪಕ್ಕೆ ಪರಿಹಾರ ಇದೆ ಎಂದ ಮೇಲೆ ಪಾಪ ಮಾಡುವುದಕ್ಕೆ ಜನರು ಹಿಂಜರಿಯುವುದಿಲ್ಲ. ವಿವಿಧ ಪಾಪಕಾರ್ಯಗಳಿಗೆ ತಕ್ಕಂತೆ ಪರಿಹಾರವನ್ನೂ ಹುಸಿ ಧರ್ಮಪಂಡಿತರು ಸೂಚಿಸುತ್ತಾರೆ. ನಿಜವಾದ ಧರ್ಮಜ್ಞಾನಿಗೆ ಈ ಅವನತಿ ಹೊಂದುತ್ತಿರುವ ವ್ಯವಸ್ಥೆಯಲ್ಲಿ ಸ್ಥಾನವೇ ಇಲ್ಲದಂಗಿದೆ.
ತನ್ನೊಳಗಿನ ಅಂತಃಸಾಕ್ಷಿ, ತನ್ನ ಹೊರಗಿನ ಜೀವಜಗತ್ತಿನ ಬಗೆಗಿನ ಭೂತದಯೆ (ಜೀವಿಗಳ ಬಗೆಗಿನ ಅನುಕಂಪ), ಧರ್ಮ, ದರ್ಶನ, ನೀತಿ, ಮೌಲ್ಯ ಮತ್ತು ಸಂಸ್ಕಾರದ ಮೂಲಕ ಪರಮಪಾವನನಾಗಿ, ಯಾರ ಮನಸ್ಸನ್ನೂ ನೋಯಿಸದೆ, ಯಾರ ಮನಸ್ಸಿಗೂ ಹಿಂಸೆಯನ್ನುಂಟು ವಾಡದೆ ಬದುಕುವವನೇ ನಿಜಮಾನವ.
ಎಲ್ಲ ಧರ್ಮಗಳೂ ಒಂದಿಲ್ಲೊಂದು ರೀತಿಯಲ್ಲಿ ಇದೇ ಸಂದೇಶವನ್ನು ಹೊಂದಿವೆ. ‘‘ಪರೋಪಕಾರವೇ ಪುಣ್ಯ ಪರಪೀಡನೆಯೆ ಪಾಪ’’ ಎಂದು ಮಹಾಭಾರತ ಹೇಳುತ್ತದೆ. ‘ಮನುರ್ಭವ’ (ಮನುಷ್ಯನಾಗು) ಎಂದು ಋಗ್ವೇದ ಸಾರುತ್ತದೆ. ‘‘ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದ ಹಾಗೆ’’ ಎಂದು ಕುರ್‌ಆನ್ ಹೇಳುತ್ತದೆ. ‘‘ಎಲ್ಲ ಮಾನವರು ಸಹೋದರರು’’ ಎಂಬ ಉದಾತ್ತಭಾವ, ಯೇಸು ಕ್ರಿಸ್ತರಿಂದಾಗಿ ಜಗತ್ತಿನ ಜನರಿಗೆ ತಲುಪಿದೆ. ಆದರೆ ಬದಲಾವಣೆ ಬೇಕೆನಿಸಿದಷ್ಟು ಆಗಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X