Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಡಿ.16ರ ಸಾಮೂಹಿಕ ಅತ್ಯಾಚಾರಕ್ಕೆ...

ಡಿ.16ರ ಸಾಮೂಹಿಕ ಅತ್ಯಾಚಾರಕ್ಕೆ ಸಾಕ್ಷಿಯಾಗಿದ್ದ ಈ ಬಸ್‌ನ ಗತಿ ಏನಾಗಿದೆ ನೋಡಿ.........

ವಾರ್ತಾಭಾರತಿವಾರ್ತಾಭಾರತಿ26 Sept 2018 4:27 PM IST
share
ಡಿ.16ರ ಸಾಮೂಹಿಕ ಅತ್ಯಾಚಾರಕ್ಕೆ ಸಾಕ್ಷಿಯಾಗಿದ್ದ ಈ ಬಸ್‌ನ ಗತಿ ಏನಾಗಿದೆ ನೋಡಿ.........

ಡಿಎಲ್ 1ಪಿಸಿ 0149 ನೋಂದಣಿ ಸಂಖ್ಯೆಯನ್ನು ಹೊಂದಿರುವ ಈ ಬಸ್‌ನ ಓಡೊಮೀಟರ್ ಅದು 2,26,784 ಕೀ.ಮೀ.ಒಟ್ಟು ದೂರವನ್ನು ಕ್ರಮಿಸಿದೆ ಎನ್ನುವುದನ್ನು ತೋರಿಸುತ್ತಿದೆ. ಟೈರ್‌ಗಳು ಗಾಳಿಯಿಲ್ಲದೆ ಚಪ್ಪಟೆಯಾಗಿವೆ. ಡ್ಯಾಷ್‌ಬೋರ್ಡ್ ಮತ್ತು ಇಂಜಿನ್ ತುಕ್ಕು ಹಿಡಿದು ಹಾಳಾಗಿಹೋಗಿವೆ. ಡ್ಯಾಷ್‌ಬೋರ್ಡ್ ಬಳಿಯ ಸೀಟಿನಡಿ ತುಕ್ಕು ಹಿಡಿದ ಬೆಲ್ಟ್ ಬಕ್ಲ್ ಬಿದ್ದುಕೊಂಡಿದೆ. ದಿನೇಶ್ ಯಾದವ ಎಂಬಾತನ ಮಾಲಕತ್ವದ ಈ ಬಸ್ ವಸಂತ ವಿಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ 413/2012ರಲ್ಲಿ ವಶಪಡಿಸಿಕೊಂಡ ಆಸ್ತಿಯಾಗಿದ್ದು, 2012,ಡಿ.16ರಂದು ರಾತ್ರಿ ದಿಲ್ಲಿಯ ರಸ್ತೆಗಳಲ್ಲಿ ಚಲಿಸುತ್ತಿದ್ದ ಇದೇ ಬಸ್‌ನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ‘ನಿರ್ಭಯಾ’ಳ ಮೇಲೆ ಸಾಮೂಹಿಕ ಅತ್ಯಾಚಾರ ಆಕೆಯ ಸ್ನೇಹಿತನ ಕಣ್ಣುಗಳೆದುರೇ ನಡೆದಿತ್ತು. ಅತ್ಯಾಚಾರದ ಬಳಿಕ ಆರೋಪಿಗಳು ನಿರ್ಭಯಾಳನ್ನು ಕ್ರೂರ ಹಿಂಸೆಗೊಳಪಡಿಸಿದ್ದು, ವಾರಗಳ ಬಳಿಕ ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ಆಕೆ ಕೊನೆಯುಸಿರೆಳೆದಿದ್ದಳು.

ಈ ಹೇಯ ಘಟನೆ ನಡೆದ ಬಳಿಕ ವಶಪಡಿಸಿಕೊಳ್ಳಲಾಗಿದ್ದ ಈ ಶ್ವೇತವರ್ಣದ ಐಷಾರಾಮಿ ಬಸ್ಸನ್ನು ಪೊಲೀಸ್ ಅಧಿಕಾರಿಗಳ ತಂಡವೊಂದು ದಿನದ 24 ಗಂಟೆಗಳ ಕಾಲವೂ ಕಾಯುತ್ತಿತ್ತು. ನಿರ್ಭಯಾಳ ಮೇಲಿನ ಸಾಮೂಹಿಕ ಅತ್ಯಾಚಾರವನು ವಿರೋಧಿಸಿ ಬೀದಿಗಿಳಿದಿದ್ದ ಸಹಸ್ರಾರು ಪ್ರತಿಭಟನಾಕಾರರು ಬಸ್ಸಿಗೆ ಬೆಂಕಿ ಹಚ್ಚಿ ನಾಶಗೊಳಿಸಲು ಬಯಸಿದ್ದರು. ಡಿ.16ರಂದು ರಾತ್ರಿ ಆರು ಜನ ದುಷ್ಕರ್ಮಿಗಳ ತಂಡವು ನಿರ್ಭಯಾಳ ಮೇಲೆಸಗಿದ್ದ ಕ್ರೌರ್ಯಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಅವರು ಹತಾಶ ಪ್ರಯತ್ನಗಳನ್ನು ನಡೆಸಿದ್ದರು.

ಕೆಲವು ತಿಂಗಳುಗಳ ಹಿಂದಿನವರೆಗೂ ಈ ಬಸ್ಸನ್ನು ದಿಲ್ಲಿಯ ಸಾಕೇತ್ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಲಾಗಿದ್ದು,ಪೊಲೀಸ್ ಕಾವಲನ್ನು ಏರ್ಪಡಿಸಲಾಗಿತ್ತು. ಯಾದವ ಗೆ ಈ ಬಸ್ ಕೊನೆಗೂ ವಾಪಸ್ ಸಿಕ್ಕಿಲ್ಲ. ಆತ ಬಸ್ಸನ್ನು ವಾಪಸ್ ಮಾಡುವಂತೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದನಾದರೂ ಪೊಲೀಸರು ಅದನ್ನು ಬಿಡುಗಡೆಗೊಳಿಸಲಿಲ್ಲ. ಪ್ರಕರಣ ಇನ್ನೂ ಹಸಿರಾಗಿರುವುದರಿಂದ ಈ ಬಸ್ ಮತ್ತೆ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ ಎನ್ನುವುದು ಪೊಲೀಸರ ಆತಂಕವಾಗಿತ್ತು.

 ಆರು ಆರೋಪಿಗಳ ಪೈಕಿ ನಾಲ್ವರು ವಾಸವಿದ್ದ ದಿಲ್ಲಿಯ ಸಂತ ರವಿದಾಸ್ ಕ್ಯಾಂಪ್‌ನಿಂದ ಡಿ.17ರಂದು ಈ ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಡಿ.16ರಂದು ಜಾಯ್‌ರೈಡ್‌ಗೆಂದು ಹೊರಟು ಅತ್ಯಂತ ಅಮಾನುಷ ಕೃತ್ಯವನ್ನು ನಡೆಸಿದ್ದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಸಾಕಷ್ಟು ಫಾರೆನ್ಸಿಕ್ ಸಾಕ್ಷಾಧಾರಗನ್ನು ಈ ಬಸ್ ಹೊಂದಿತ್ತು. ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ಬಸ್ಸಿಗೆ ಬೆಂಕಿ ಹಚ್ಚಿ ನಾಶಗೊಳಿಸಲು ಬಯಸಿದ್ದರಿಂದ ಪ್ರಮುಖ ಸಾಕ್ಷಿಯಾಗಿದ್ದ ಬಸ್ಸನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕಿತ್ತು. ಹೀಗಾಗಿ ಈ ಬಸ್ಸನ್ನು ರಹಸ್ಯವಾಗಿ ಸಾಗಿಸಿ ದಕ್ಷಿಣ ದಿಲ್ಲಿಯ ತ್ಯಾಗರಾಜ ಕ್ರೀಡಾಂಗಣದ ಬಳಿಯ ರಸ್ತೆಯೊಂದರಲ್ಲಿ ಹಲವಾರು ಬಸ್‌ಗಳ ನಡುವೆ ನಿಲ್ಲಿಸಲಾಗಿತ್ತು. ಬಸ್‌ಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಮಫ್ತಿಯಲ್ಲಿದ್ದ ಪೊಲೀಸರನ್ನು ಅಲ್ಲಿ ನಿಯೋಜಿಸಲಾಗಿತ್ತು. ಅಲ್ಲಿಯೇ ವಿಧಿವಿಜ್ಞಾನ ತಜ್ಞರು ಬಸ್ಸಿನಲ್ಲಿದ್ದ ಆರೋಪಿಗಳ ಬೆರಳಚ್ಚುಗಳನ್ನು ಮತ್ತು ಇತರ ನಿರ್ಣಾಯಕ ಸಾಕ್ಷಗಳನ್ನು ಸಂಗ್ರಹಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಸಾಕೇತ್ ನ್ಯಾಯಾಲಯ ಸಂಕೀರ್ಣದಲ್ಲಿದ್ದ ಬಸ್ಸನ್ನು ಬಳಿಕ ವಸಂತ ವಿಹಾರ ಪೊಲೀಸ್ ಠಾಣೆಯ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಪೊಲೀಸ್ ಠಾಣೆಗಳನ್ನು ಎಲ್ಲ ಹಳೆಯ ವಾಹನಗಳಿಂದ ಮುಕ್ತಗೊಳಿಸಿ,ಆವರಣಗಳನ್ನು ಸ್ವಚ್ಛವಾಗಿರಿಸುವಂತೆ ಕಳೆದ ಎಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶಿಸುವವರೆಗೂ ಪೊಲೀಸ್ ತಂಡವೊಂದು ಈ ಬಸ್ಸನ್ನು ಕಾಯುತ್ತಲೇ ಇತ್ತು.

ಆರು ವರ್ಷಗಳ ಬಳಿಕ ಈ ಬಸ್ ಮತ್ತೆ ಡಿ.15ರ ರಾತ್ರಿಯ ಅದೇ ಮಾರ್ಗದಲ್ಲಿ ಸಾಗಿದೆ. ಆದರೆ ಈ ಬಾರಿ ಕ್ರೇನ್ ಮೂಲಕ ರಹಸ್ಯವಾಗಿ ಸಾಗಿಸಿ ಪಶ್ಚಿಮ ದಿಲ್ಲಿಯಲ್ಲಿನ ಡಂಪ್ ಯಾರ್ಡ್‌ನಲ್ಲಿ ನಿಲ್ಲಿಸಲಾಗಿದೆ.

ಬಸ್ಸಿನಲ್ಲಿಯ ಹಿಂದಿನಿಂದ ಎರಡನೇ ಆಸನದ ಮಟ್ಟವನ್ನು ತಗ್ಗಿಸಲಾಗಿದ್ದು,ಕೊನೆಯ ಆಸನದೊಂದಿಗೆ ಸೇರಿಕೊಂಡು ಅದು ಹಾಸಿಗೆಯ ರೂಪ ತಳೆದಿತ್ತು ಮತ್ತು ಈಗಲೂ ಹಾಗೆಯೇ ಇದೆ. ಇಲ್ಲಿಯೇ ನಿರ್ಭಯಾಳ ಮೇಲೆ ಘೋರ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಕಿಟಕಿಗಳ ಪರದೆಗಳು ಚಿಂದಿಯೆದ್ದಿವೆ, ಆಸನಗಳ ಹೊದಿಕೆಗಳು ಹಾಳಾಗಿಹೋಗಿವೆ. ಕಿಟಕಿಗಳ ಗಾಜುಗಳೇ ಇಲ್ಲ,ಅವುಗಳನ್ನು ಪ್ರಕರಣದ ವಿಚಾರಣೆಯ ಆರಂಭದಲ್ಲಿ ಬಸ್ ಸಾಕೇತ್ ನ್ಯಾಯಾಲಯದ ಆವರಣದಲ್ಲಿದ್ದಾಗ ಪ್ರತಿಭಟನಾಕಾರರು ಹುಡಿಗೊಳಿಸಿದ್ದರು.

ಈ ಬಸ್ಸನ್ನು ಈಗ ಯಾರೂ ಖರೀದಿಸುವುದಿಲ್ಲ. ಒಂದು ದಿನ ಅದು ಗುಜರಿಯವರ ಪಾಲಾಗಲಿದೆ. ಆರಂಭದಲ್ಲಿ ಬಸ್ಸನ್ನು ಮರಳಿ ಪಡೆಯಲು ಯಾದವ ಪ್ರಯತ್ನಿಸಿದ್ದ. ಆದರೆ ಮರಳಿ ಪಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಆತನಿಗೂ ಮನದಟ್ಟಾಗಿದೆ. ಗುಜರಿಯವರು ಈ ಬಸ್ಸಿಗೆ 5,000 ರೂ.ಕೊಟ್ಟರೆ ಅದೇ ದೊಡ್ಡದು ಎನ್ನುವುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X