ಮೂಡುಬಿದಿರೆ, ಸೆ. 29: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಶೇಣಿ ನಿವಾಸಿ, ಕೃಷಿಕರಾಗಿದ್ದ ಸುಬ್ರಾಯ ನಾಯಕ್ (78) ಅಲ್ಪಕಾಲದ ಅನಾರೋಗ್ಯದಿಂದ ಸೆ. 29ರಂದು ನಿಧನ ಹೊಂದಿದರು. ಅವರು ಪತ್ನಿ, ಮೂಡಬಿದಿರೆಯ ಜವುಳಿ ಉದ್ಯಮಿ ಎಸ್. ಎನ್. ಬೋರ್ಕರ್ ಸಹಿತ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.