ಮದ್ದೂರಿನಲ್ಲಿ ಭಾರೀ ಸ್ಫೋಟದ ಶಬ್ಧ: ನಾಗರಿಕರು ಆತಂಕ
ಮಂಡ್ಯ, ಸೆ.30: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ರವಿವಾರ ಬೆಳಗ್ಗೆ ಭಾರೀ ಸ್ಫೋಟದ ಶಬ್ಧ ಕೇಳಿಬಂದಿದ್ದು, ನಾಗರಿಕರು ಆತಂಕಗೊಂಡಿದ್ದಾರೆ.
ಸುಮಾರು 7.40ರ ವೇಳೆಯಲ್ಲಿ ಈ ಶಬ್ಧ ಕೇಳಿಬಂದಿದ್ದು, ಭೂಮಿ ನಡುಗಿದ ಅನುಭವವಾಯಿತು. ಹಲವರು ಮನೆಯಿಂದ ಹೊರಗೆ ಓಡಿ ಬಂದರು ಎಂದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ಕೆ.ಆರ್.ಎಸ್ ಬಳಿ ಇದೇ ರೀತಿಯ ಶಬ್ಧದ ಜೊತೆ ಭೂಮಿ ಕಂಪಿಸಿತ್ತು. ಇದೀಗ ಮದ್ದೂರಿನಲ್ಲೂ ಇದೇ ರೀತಿಯ ಶಬ್ಧ ಕೇಳಿಬಂದಿದೆ.
ಕೆಆರ್ಎಸ್ ಬಳಿ ಕೇಳಿಬಂದ ಶಬ್ಧ ಸಮೀಪದ ಕಲ್ಲುಗಣಿಗಾರಿಕೆಯಲ್ಲಿನ ಸ್ಫೋಟಕದ್ದು ಎಂದು ತಿಳಿದುಬಂದಿದ್ದು, ಮದ್ದೂರು ತಾಲೂಕಿನ ಹಲವೆಡೆಯೂ ಕಲ್ಲುಗಣಿಗಾರಿಕೆ ನಡೆಯುತ್ತಿದೆ.
Next Story