Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ದಕ್ಷಿಣ ಆಸ್ಟ್ರೇಲಿಯದ ಸೋಲಿನ ಸರಪಳಿ...

ದಕ್ಷಿಣ ಆಸ್ಟ್ರೇಲಿಯದ ಸೋಲಿನ ಸರಪಳಿ ಮುರಿದ ಫರ್ಗ್ಯುಸನ್ ಶತಕ

ವಾರ್ತಾಭಾರತಿವಾರ್ತಾಭಾರತಿ30 Sept 2018 11:48 PM IST
share
ದಕ್ಷಿಣ ಆಸ್ಟ್ರೇಲಿಯದ ಸೋಲಿನ ಸರಪಳಿ ಮುರಿದ ಫರ್ಗ್ಯುಸನ್ ಶತಕ

ಮೆಲ್ಬೊರ್ನ್, ಸೆ.30: ಇಲ್ಲಿನ ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಕಲಮ್ ಫರ್ಗ್ಯುಸನ್ ಶತಕ ಬಾರಿಸುವ ಮೂಲಕ ವಿಕ್ಟೋರಿಯ ತಂಡದ ವಿರುದ್ಧ ದಕ್ಷಿಣ ಆಸ್ಟ್ರೇಲಿಯ ಎಂಟು ರನ್‌ಗಳಿಂದ ಜಯಗಳಿಸುವ ಜೊತೆಗೆ ಸತತ ಮೂರು ಪಂದ್ಯಗಳ ಸೋಲಿನ ನಂತರ ಗೆಲುವಿನ ಮುಖ ಕಾಣಲು ನೆರವಾಗಿದ್ದಾರೆ. ದ. ಆಸ್ಟ್ರೇಲಿಯ ಪರ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಫರ್ಗ್ಯುಸನ್‌ರ 133 ರನ್‌ಗಳ ನೆರವಿನಿಂದ ತಂಡವು 265 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಸವಾಲು ಎದುರಿಸಲು ಮೈದಾನಕ್ಕಿಳಿದ ವಿಕ್ಟೋರಿಯ ತಂಡದ ಪ್ರಮುಖ ಆಟಗಾರರು ಎದುರಾಳಿ ತಂಡದ ಬೌಲರ್‌ಗಳಾದ ಜೋ ಮೆನ್ನಿ ಮತ್ತು ಆ್ಯಡಮ್ ಝಂಪಾ ದಾಳಿಗೆ ಸಿಲುಕಿ ವಿಕೆಟ್ ಒಪ್ಪಿಸಿದ ನಂತರ ತಂಡ 257 ರನ್‌ಗಳನ್ನಷ್ಟೇ ಪೇರಿಸಲು ಶಕ್ತವಾಗಿ ಎಂಟು ರನ್‌ಗಳಿಂದ ಸೋಲೊಪ್ಪಿಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್‌ಗಿಳಿದ ದ.ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರರು ಒಂಬತ್ತು ಓವರ್ ಕೊನೆಯಾಗುವಾಗ ಪೆವಿಲಿಯನ್ ತೆರಳಿ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಫರ್ಗ್ಯುಸನ್ ಕ್ರೀಸ್ ಕಚ್ಚಿ ಆಡಿ ತಂಡವನ್ನು ಆಧರಿಸಿದರು. ಇವರು ಜೇಕ್ ಲೆಹ್ಮನ್ (44) ಮತ್ತು ಟಾಮ್ ಕೂಪರ್ (37) ಜೊತೆ ಎರಡು ಅಮೂಲ್ಯ ಜೊತೆಗಾರಿಕೆಯನ್ನು ನೀಡಿದರು. ಕೇವಲ 55 ಎಸೆತಗಳಲ್ಲಿ ಫರ್ಗ್ಯುಸನ್‌ತಮ್ಮ ಅರ್ಧಶತಕ ಪೂರೈಸಿದರು. ಮತ್ತೊಂದು ಬದಿಯಲ್ಲಿ ನಾಯಕ ಲೆಹ್ಮನ್ ನಿಧಾನ ಗತಿಯಲ್ಲಿ ಆಡಿ ಅರ್ಧಶತಕ ದಾಖಲಿಸುವತ್ತ ದಾಪುಗಾಲು ಹಾಕಿದರೂ ರನೌಟ್ ಆಗಿ ಅವಕಾಶ ಕಳೆದುಕೊಂಡರು. ನಂತರ ಕೂಪರ್ ಜೊತೆ ಸೇರಿ ಇನ್ನಿಂಗ್ಸ್ ಮುಂದುವರಿಸಿದ ಫರ್ಗ್ಯುಸನ್ 107 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲಿಂದ ತನ್ನ ಆಟದ ಗತಿಯನ್ನು ಬದಲಿಸಿದ ಫರ್ಗ್ಯುಸನ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಒಂದು ಹಂತದಲ್ಲಿ ಫರ್ಗ್ಯುಸನ್ ಮತ್ತು ಕೂಪರ್ ಜೋಡಿ ಆರಾಮವಾಗಿ ಎದುರಾಳಿ ಬೌಲರ್‌ಗಳ ಎಸೆತಗಳನ್ನು ಬೌಂಡರಿಗಟ್ಟಿ ದೊಡ್ಡ ಮೊತ್ತವನ್ನು ಕಲೆ ಹಾಕುವ ಮುನ್ಸೂಚನೆ ನೀಡಿದರು.

ಆದರೆ ಬೌಲರ್ ಫವಾದ್ ಅಹ್ಮದ್ ತಮ್ಮ ಒಂದೇ ಓವರ್‌ನಲ್ಲಿ ಇಬ್ಬರು ದಾಂಡಿಗರನ್ನೂ ಸ್ಪಿನ್ ಖೆಡ್ಡಾಕ್ಕೆ ಬೀಳಿಸುವ ಮೂಲಕ ದ.ಆಸ್ಟ್ರೇಲಿಯದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಕೊನೆಯಲ್ಲಿ ಬಾಲಂಗೋಚಿ ಆಟಗಾರರು ತಮ್ಮಿಂದಾದ ಕಾಣಿಕೆ ನೀಡಿ ತಂಡ ನಿಗದಿತ 50 ಓವರ್‌ಗಳಲ್ಲಿ 265 ರನ್ ಕಲೆ ಹಾಕುವಂತೆ ನೋಡಿಕೊಂಡರು. ಸವಾಲನ್ನು ಬೆನ್ನುಹತ್ತಿ ಕ್ರೀಸ್‌ಗಿಳಿದ ವಿಕ್ಟೋರಿಯ ತಂಡದ ಆರಂಭವೂ ಕಳಪೆಯಾಗಿತ್ತು. ಹನ್ನೊಂದು ಓವರ್ ಮುಗಿಯುವ ವೇಳೆಗೆ ತಂಡದ ಅಗ್ರ ಇಬ್ಬರು ಬ್ಯಾಟ್ಸ್‌ಮ್ಯಾನ್‌ಗಳು ಜೋ ಮೆನ್ನಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ನಾಲ್ಕನೇ ವಿಕೆಟ್‌ಗೆ 125 ರನ್‌ಗಳ ಜೊತೆಯಾಟ ನೀಡಿದ ಅನುಭವಿ ಕ್ಯಾಮರೂನ್ ವೈಟ್ (81) ಮತ್ತು ಪೀಟರ್ ಹ್ಯಾಂಡ್ಸ್ ಕೋಂಬ್ (64) ತಂಡವನ್ನು ಆಧರಿಸಿದರು. 178ಕ್ಕೆ 2 ವಿಕೆಟ್ ಕಳೆದುಕೊಂಡು ಸುಲಭ ಗೆಲುವು ದಾಖಲಿಸುವ ದಾರಿಯಲ್ಲಿದ್ದ ವಿಕ್ಟೋರಿಯ ತಂಡದ ಮಧ್ಯಮ ಕ್ರಮಾಂಕ ಏಕಾಏಕಿ ಕುಸಿತ ಕಂಡು 219 ರನ್ ತಲುಪುವ ವೇಳೆಗೆ 7 ವಿಕೆಟ್ ಕಳೆದುಕೊಂಡಿತ್ತು. ಇನ್ನಿಂಗ್ಸ್‌ನ ಮೂರನೇ ವಿಕೆಟ್ ಪಡೆದ ಮೆನ್ನಿ, ಹ್ಯಾಂಡ್ಸ್ ಕೋಂಬ್ ವಿಕೆಟ್ ಕಬಳಿಸುವ ಮೂಲಕ ವಿಕ್ಟೋರಿಯ ಪತನ ಆರಂಭವಾಯಿತು.

ಶತಕದ ಸನಿಹದಲ್ಲಿದ್ದ ವೈಟ್ ಮುಂದಿನ ಓವರ್‌ನಲ್ಲಿ ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಝಂಪಾ ಎಸೆದ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಕಬಳಿಸುವ ಮೂಲಕ ವಿಕ್ಟೋರಿಯದ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಅಂತಿಮ ಹಂತದಲ್ಲಿ ವಿಕ್ಟೋರಿಯ ಗೆಲುವಿಗೆ ಎರಡು ಓವರ್‌ಗಳಲ್ಲಿ 26 ರನ್‌ಗಳ ಆವಶ್ಯಕತೆಯಿತ್ತು. ಈ ವೇಳೆ ಫವಾದ್ ಬಾರಿಸಿದ ಎರಡು ಬೌಂಡರಿಗಳು ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X