Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಲ್ಲಿ ಉಂಬಡೆ ಸಂಗ

ಅಲ್ಲಿ ಉಂಬಡೆ ಸಂಗ

ವಾರ್ತಾಭಾರತಿವಾರ್ತಾಭಾರತಿ6 Oct 2018 12:05 AM IST
share
ಅಲ್ಲಿ ಉಂಬಡೆ ಸಂಗ

 ಆಕಳು ಕಳ್ಳರ ಕೊಂಡೊಯ್ದರೆನ್ನದಿರಿಂ ಭೋ ನಿಮ್ಮ ಧರ್ಮ!

ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ!
ಅರಸಾಡದಿರಿಂ ಭೋ, ನಿಮ್ಮ ಧರ್ಮ!
ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ!
ಕೂಡಲಸಂಗಮದೇವ ಏಕೋಭಾವ.
                                         -ಬಸವಣ್ಣ

 ಬಯಲು ಶಬ್ದ ಲಿಂಗವಂತ ಧರ್ಮದಲ್ಲಿ ಬಹಳ ಮಹತ್ವ ಪಡೆದಿದೆ. ಇಡೀ ಧರ್ಮವೇ ಈ ಬಯಲು ಶಬ್ದದಿಂದ ಮೂಡಿ ಬಂದಿದೆ. ಮೊದಲಿಗೆ ಇಡೀ ವಿಶ್ವ ಬಯಲಾಗಿತ್ತು. ನಂತರ ವಿಶ್ವವು ಆ ಬಯಲಿನಿಂದಲೇ ರೂಪು ತಾಳಿತು. ಕೊನೆಗೊಂದು ದಿನ ಇಡೀ ವಿಶ್ವ ಬಯಲಲ್ಲೇ ಲಯವಾಗಿ ಬಯಲೇ ಆಗುವುದು. ಬಯಲಿನಿಂದ ಬಂದು ರೂಪುಗೊಂಡಂಥ ಎಲ್ಲವೂ ಕೊನೆಗೊಂದು ದಿನ ಹೀಗೆ ಬಯಲಾಗುವಂಥ ನಿಸರ್ಗ ಸತ್ಯವನ್ನು ಅರಿತುಕೊಂಡವರು ಇಡೀ ಜೀವಜಗತ್ತನ್ನು ತಮ್ಮಳಗೆ ಇಂಬಿಟ್ಟುಕೊಳ್ಳುತ್ತಾರೆ. ಆಗ ಅವರಿಗೆ ಇಡೀ ಜೀವರಾಶಿಯ ಬಗ್ಗೆ ಕರುಣಾರಸ ಉಕ್ಕುವುದರಿಂದ ಲಿಂಗಭೇದ, ಜಾತಿಭೇದ, ವರ್ಣಭೇದ, ವರ್ಗಭೇದ ಮುಂತಾದ ಭೇದಗಳು ಅಸಹ್ಯವಾಗಿ ಕಾಣತೊಡಗುತ್ತವೆ. ಇಂಥ ಭೇದಗಳು ಮನುಷ್ಯರ ಮಧ್ಯೆ ಕೃತ್ರಿಮವಾದ ಗೋಡೆಗಳನ್ನು ಕಟ್ಟುತ್ತ ಹುಸಿ ಬಯಲುಗಳನ್ನು ಸೃಷ್ಟಿಸಿವೆ. ಆ ಮೂಲಕ ನೈಜ ಬಯಲಿನ ದರ್ಶನವನ್ನು ಮರೆಮಾಚಿವೆ. ಇದನ್ನೆಲ್ಲ ಅರಿತ ಬಸವಣ್ಣನವರು ಕೂಡಲಸಂಗಮದೇವ ಏಕೋಭಾವ ಎಂದು ತಿಳಿಸಿದ್ದಾರೆ.
 ಏಕೋಭಾವದ ಮನಸ್ಸುಳ್ಳ ಬಸವಣ್ಣನವರಿಗೆ ಆಕಳನ್ನು ಕದ್ದ ಕಳ್ಳನ ಕುರಿತು ಇಂಥ ಅನನ್ಯ ವಿಚಾರಗಳು ಹೊರಹೊಮ್ಮುವುದು ಸ್ವಾಭಾವಿಕವಾಗಿದೆ. ಅಂತೆಯೇ ಅವರು ಆಕಳನ್ನು ಕಳ್ಳರು ಒಯ್ದರು ಎನ್ನದಿರಿ ಅದು ನಿಮ್ಮ ಧರ್ಮ (ಕರುಣೆ). ಕೂಗಾಡದಿರಿ ನಿಮ್ಮ ಧರ್ಮ, ಕಿರುಚಾಡದಿರಿ ನಿಮ್ಮ ಧರ್ಮ ಎಂದು ಹೇಳುತ್ತಾರೆ. ಹಾಗೆ ಹೇಳುವ ಮೂಲಕ ತಮ್ಮ ತತ್ತ್ವಜ್ಞಾನವನ್ನು ಸೂಚಿಸುತ್ತಾರೆ. ಅದುವೆ ನಾವು ಬಸವಾದ್ವೈತ ಎಂದು ಕರೆಯುವ ಅನುಭಾವ. ಆ ಅುಭಾವವೇ ಶರಣರ ತತ್ತ್ವಜ್ಞಾನ.
 ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ ಎಂದು ಹೇಳುವಲ್ಲಿ ಬಸವಾದ್ವೈತವಿದೆ. ಕಳ್ಳ ಮೊದಲು ಮಾಡಿ ಸರ್ವರೂ ಜೀವಾತ್ಮರೇ ಆಗಿದ್ದೇವೆ. ನಮ್ಮೆಲ್ಲರ ಒಳಗೆ ಪರಮಾತ್ಮನೇ ಇದ್ದಾನೆ. ಯಾವನೇ ಆಗಲಿ ತನ್ನ ಪರಮಾತ್ಮನ ಒಳದನಿಯನ್ನು ಅರ್ಥ ಮಾಡಿಕೊಂಡಾಗಲೇ ಶರಣನಾಗಿಬಿಡುತ್ತಾನೆ. ಜಗತ್ತಿನಲ್ಲಿ ಕಳ್ಳರು, ಕೊಲೆಗಡುಕರು, ಶೋಷಕರು ಮುಂತಾದವರು ಕೂಡ ತಮ್ಮ ಒಳದನಿಗೆ ಓಗೊಟ್ಟ ಕ್ಷಣದಲ್ಲೇ ವಿಶ್ವಮಾನವರಾಗಿದ್ದಾರೆ. ಎಲ್ಲರೊಳಗೂ ಒಬ್ಬನೇ ದೇವರು ಎಂದು ಸಾರಿದ್ದಾರೆ. ಆತನೇ ಹಲವು ನಾಮಗಳುಳ್ಳ ಕೂಡಲಸಂಗಮದೇವ. ಆತನೇ ಅಲ್ಲಾಹ್, ಆತನೇ ಮಹೇಶ್ವರ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X