ನಿಯಮ ಉಲ್ಲಂಘಿಸಿ ಬಿಬಿಎಂಪಿ ವಲಯ ಜಂಟಿ ಆಯುಕ್ತರ ನೇಮಕ: ಆರೋಪ
ಬೆಂಗಳೂರು, ಅ.8: ಬಿಬಿಎಂಪಿ ವಲಯ ಜಂಟಿ ಆಯುಕ್ತರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿಯಮ ಉಲ್ಲಂಸಿರುವ ಆರೋಪ ಕೇಳಿಬಂದಿದೆ.
ವಲಯ ಜಂಟಿ ಆಯುಕ್ತರ ಸ್ಥಾನಕ್ಕೆ ಕೆಎಂಸಿ ಕಾಯ್ದೆ ಪ್ರಕಾರ ಕೆಎಎಸ್ ಅಥವಾ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕಾಗುತ್ತದೆ. ಆದರೆ, ಕಳೆದ ಬುಧವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬಿಬಿಎಂಪಿಯ ಪಶ್ಚಿಮ, ಮಹದೇವಪುರ ಹಾಗೂ ಪೂರ್ವ ವಲಯಗಳಿಗೆ ಜಂಟಿ ಆಯುಕ್ತರನ್ನಾಗಿ ನೇಮಿಸಿರುವ ಅಧಿಕಾರಿಗಳು ಆ ಶ್ರೇಣಿಯವರಲ್ಲ ಎಂದು ಹೇಳಲಾಗಿದೆ.
Next Story





