‘ಮೀಟೂ’ ಆಂದೋಲನಕ್ಕೆ ಮಾಯಾವತಿ ಬೆಂಬಲ: ಎಂ.ಜೆ. ಅಕ್ಬರ್ ವಿರುದ್ಧ ಕ್ರಮಕ್ಕೆ ಆಗ್ರಹ
ಬಿಜೆಪಿ ನಾಯಕರ ಮೌನದ ಬಗ್ಗೆ ಆಕ್ರೋಶ
ಹೊಸದಿಲ್ಲಿ, ಅ.15: ಲೈಂಗಿಕ ಕಿರುಕುಳ ಆರೋಪವನ್ನೆದುರಿಸುತ್ತಿರುವ ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ.
ಹಲವು ಮಹಿಳೆಯರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದಾರೆ. ಆದರೆ ಆರೋಪಮುಕ್ತರಾಗುವ ಬದಲು ಅವರು ಈ ಆರೋಪಗಳಿಗೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ ಎಂದವರು ಆರೋಪಿಸಿದರು.
ಲೈಂಗಿಕ ಕಿರುಕುಳಗಳ ವಿರುದ್ಧ ವಿವಿಧ ಕ್ಷೇತ್ರಗಳ ಮಹಿಳೆಯರು ಧ್ವನಿಯೆತ್ತಲು ಮೀಟೂ ಆಂದೋಲನವು ವೇದಿಕೆಯಾಗಿದೆ ಎಂದ ಅವರು, ಈ ಗಂಭೀರ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಮೌನವಾದಂತೆ ನಟಿಸುತ್ತಿದ್ದಾರೆ. ಆದರೆ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದರು.
Next Story