ಇಂದು ಹಲವು ರೈಲುಗಳ ಸಂಚಾರ ರದ್ದು, ವ್ಯತ್ಯಯ
ತಿರುವನಂತಪುರಂ, ಅ.20: ಹಳಿ ವಿಸ್ತರಣೆಗೆ ಸಂಬಂಧಿಸಿ ಶನಿವಾರ ರೈಲು ಸಂಚಾರದಲ್ಲಿ ನಿಯಂತ್ರಣ ಹೇರಲಾಗಿದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ. ಆರು ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದಾಗಿವೆ. ಮೂರು ರೈಲುಗಳನ್ನು ಆಲಪ್ಪುಝ ರೂಟ್ನಲ್ಲಿ ಸಂಚರಿಸುವಂತೆ ಮಾಡಲಾಗಿದೆ.
ಕನ್ಯಾಕುಮಾರಿ- ಮುಂಬೈ ಜಯಂತಿ ಜನತಾ(16382) ಕೊಟ್ಟಾಯಂ ವಿಭಾಗದಲ್ಲಿ ಒಂದು ಗಂಟೆ ಹತ್ತು ನಿಮಿಷ ತಡವಾಗಿ ಸಂಚಾರ ಮುಂದುವರಿಸಲಿದೆ. ರೈಲುಗಳನ್ನು ಆಲಪ್ಪುಝ ರೂಟ್ನಲ್ಲಿ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಹರಿಪ್ಪಾಡ್, ಅಂಬಲಪ್ಪುಝ, ಚೆರ್ತಲ ರೈಲ್ವೆ ನಿಲ್ದಾಣದಲ್ಲಿ ರೈಲುಗಳಿಗೆ ಒಂದು ನಿಮಿಷದ ನಿಲುಗಡೆ ಸಿಗಲಿದೆ.
ಸಂಪೂರ್ಣ ರದ್ದಾದ ರೈಲುಗಳು:
►ಎರ್ನಾಕುಳಂ-ಕಾಯಂಕುಳಂ ಪ್ಯಾಸೆಂಜರ್(56381)
►ಕಾಯಂಕುಳಂ-ಎರ್ನಾಕುಳಂ ಪ್ಯಾಸೆಂಜರ್(56382)
►ಎರ್ನಾಕುಳಂ-ಕೊಲ್ಲಂ ಮೆಮು(66307)
► ಕೊಲ್ಲಂ-ಎರ್ನಾಕುಳಂ ಮೆಮು(66308)
►ಎರ್ನಾಕುಳಂ -ಕಾಯಂಕುಳಂ ಪ್ಯಾಸೆಂಜರ್(56387)
►ಕಾಯಂಕುಳಂ-ಎರ್ನಾಕುಳಂ(56388)
ಆಲಪ್ಪುಝ ಮೂಲಕ ಹಾದುಹೋಗುವ ರೈಲುಗಳು
► ತಿರುವನಂತಪುರಂ-ಹೈದರಾಬಾದ್ ಶಬರಿ ಎಕ್ಸ್ಪ್ರೆಸ್(17229)
►ಕಣ್ಣೂರು -ತಿರುವನಂಪುರಂ ಜನಶತಾಬ್ದಿ(12081)
► ಹೊಸದಿಲ್ಲಿ-ತಿರುವನಂತಪುರಂ ಕೇರಳ ಎಕ್ಸ್ಪ್ರೆಸ್(12626)