Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಟೇಲ್ ಪ್ರತಿಮೆಗೆ ವಿರೋಧ: ಅಸಹಾಕಾರ...

ಪಟೇಲ್ ಪ್ರತಿಮೆಗೆ ವಿರೋಧ: ಅಸಹಾಕಾರ ಚಳವಳಿಗೆ 75 ಸಾವಿರ ಆದಿವಾಸಿಗಳ ನಿರ್ಧಾರ

ವಾರ್ತಾಭಾರತಿವಾರ್ತಾಭಾರತಿ20 Oct 2018 7:42 PM IST
share
ಪಟೇಲ್ ಪ್ರತಿಮೆಗೆ ವಿರೋಧ: ಅಸಹಾಕಾರ ಚಳವಳಿಗೆ 75 ಸಾವಿರ ಆದಿವಾಸಿಗಳ ನಿರ್ಧಾರ

ಅಹ್ಮದಾಬಾದ್, ಅ.20: ವಿಶ್ವದ ಅತೀ ಎತ್ತರದ ಪ್ರತಿಮೆಯೆಂಬ ಹಿರಿಮೆಯ, ಸರ್ದಾರ್ ವಲ್ಲಭಬಾಯಿ ಪಟೇಲರ ‘ಏಕತೆಯ ಪ್ರತಿಮೆ’ ಯನ್ನು ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ಅನಾವರಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸನ್ನದ್ಧವಾಗಿರುವಂತೆಯೇ, ಈ ಯೋಜನೆಯಿಂದ ಬಾಧಿತವಾಗಿರುವ ಸಾವಿರಾರು ಆದಿವಾಸಿಗಳು ಅಸಹಾಕಾರ ಚಳವಳಿಯ ಮೂಲಕ ಬೃಹತ್ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.

ನಮ್ಮ ವಿನಾಶಕ್ಕಾಗಿ ಈ ಯೋಜನೆ ರೂಪಿಸಿರುವ ಕಾರಣ ಯೋಜನೆಯಿಂದ ಬಾಧಿತವಾಗಿರುವ 72 ಗ್ರಾಮಗಳ ಮನೆಗಳಲ್ಲಿ ಪ್ರತಿಮೆ ಅನಾವರಣದ ದಿನ ಯಾವುದೇ ಆಹಾರವನ್ನು ಬೇಯಿಸಲಾಗುವುದಿಲ್ಲ ಎಂದು ಆದಿವಾಸಿಗಳ ಮುಖಂಡ ಡಾ ಪ್ರಫುಲ್ ವಾಸವ ತಿಳಿಸಿದ್ದಾರೆ. ಆದಿವಾಸಿಗಳ ಸಂಪ್ರದಾಯದಂತೆ ಸಾವಿನ ಸೂತಕದ ಮನೆಯಲ್ಲಿ ಆಹಾರ ಬೇಯಿಸುವುದಿಲ್ಲ.

ನರ್ಮದಾ ಜಿಲ್ಲೆಯ ಕೆವಾಡಿಯಾ ಎಂಬಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಯೋಜನೆಯಿಂದ ಸುಮಾರು 75 ಸಾವಿರ ಆದಿವಾಸಿಗಳು ಬಾಧಿತರಾಗಿದ್ದಾರೆ ಎಂದು ಸ್ಥಳೀಯ ಬುಡಕಟ್ಟು ಸಮುದಾಯದವರು ಅಳಲು ತೋಡಿಕೊಂಡಿದ್ದಾರೆ.

  ಗುಜರಾತ್‌ನ ಹೆಮ್ಮೆಯ ಪುತ್ರ ಸರ್ದಾರ್ ಪಟೇಲ್ ಬಗ್ಗೆ ನಮಗೆ ಗೌರವವಿದೆ. ಆದಿವಾಸಿಗಳು ಅಭಿವೃದ್ಧಿ ಕಾರ್ಯದ ವಿರೋಧಿಗಳಲ್ಲ. ಆದರೆ ಈ ಸರಕಾರದ ಅಭಿವೃದ್ಧಿ ಯೋಜನೆಗಳು ಅಸಂತುಲಿತವಾಗಿದ್ದು ಆದಿವಾಸಿಗಳ ವಿರುದ್ಧವಾಗಿದೆ. ಆದಿವಾಸಿಗಳ ಹಕ್ಕನ್ನು ಸರಕಾರ ಉಲ್ಲಂಘಿಸಿದೆ ಎಂದು ಪ್ರಫುಲ್ ವಾಸವ್ ಹೇಳಿದ್ದಾರೆ. ರಾಜ್ಯದಾದ್ಯಂತದ 100ಕ್ಕೂ ಹೆಚ್ಚಿನ ಆದಿವಾಸಿ ಸಂಘಟನೆಗಳು ಈ ಅಸಹಕಾರ ಚಳವಳಿಗೆ ಬೆಂಬಲ ಸೂಚಿಸಿವೆ. ಉತ್ತರ ಗುಜರಾತ್‌ನ ಬನಸ್ಕಾಂತದಿಂದ ದಕ್ಷಿಣ ಗುಜರಾತ್‌ನ ದಾಂಗ್ಸ್ ಜಿಲ್ಲೆಯವರೆಗಿನ 9 ಬುಡಕಟ್ಟು ಜಿಲ್ಲೆಗಳು ಆಂದೋಲನಕ್ಕೆ ಕೈಜೋಡಿಸಲಿವೆ. ಶಾಲೆಗಳು, ಕಚೇರಿಗಳು ಹಾಗೂ ವ್ಯಾಪಾರ ವಹಿವಾಟು ಕೂಡಾ ಮುಚ್ಚಿರುತ್ತದೆ ಎಂದವರು ತಿಳಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡವರಿಗೆ ಪುನರ್ವಸತಿ ಯೋಜನೆಯಲ್ಲಿ ಬದಲಿ ಜಮೀನು, ಸೂಕ್ತ ಉದ್ಯೋಗ ಮುಂತಾದವುಗಳನ್ನು ಒದಗಿಸಬೇಕೆಂದು ನರ್ಮದಾ ನ್ಯಾಯಮಂಡಳಿ ಪ್ರಾಧಿಕಾರ ಆದೇಶಿಸಿತ್ತು. ಆದರೆ ಸರಕಾರ ಕೇವಲ ಹಣ ಮಾತ್ರ ನೀಡಿ ಸುಮ್ಮನಾಗಿದೆ. ಭೂಸ್ವಾಧೀನವನ್ನು ವಿರೋಧಿಸುತ್ತಿರುವ ಕೆಲವರು ಪರಿಹಾರ ಹಣವನ್ನೂ ಸ್ವೀಕರಿಸಿಲ್ಲ ಎಂದು ಗರುಡೇಶ್ವರ ನಿವಾಸಿ ರಮೇಶ್ ಭಾಯ್ ಎಂಬವರು ಹೇಳಿದ್ದಾರೆ. ತನ್ನ ಫಲವತ್ತಾದ ಜಮೀನನ್ನು ಸರ್ದಾರ್ ಸರೋವರ ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಗುಜರಾತ್ ಸರಕಾರ ಸಾಗ್‌ಬರ ಪ್ರದೇಶದಲ್ಲಿ ಒಂದು ಹೆಕ್ಟೇರ್ ಜಮೀನು ಮಂಜೂರುಗೊಳಿಸಿದೆ. ಆದರೆ ಈ ಜಮೀನು ಕೃಷಿಯೋಗ್ಯವಲ್ಲ. ಈ ಜಮೀನು ಇಟ್ಟುಕೊಂಡು ನಾನೇನು ಮಾಡಲಿ ಎಂದು ಸಂತ್ರಸ್ತ ಆದಿವಾಸಿ ಪಾರ್ಚಿ ಬೋಂಡು ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಸರ್ದಾರ್ ಸರೋವರ್ ನರ್ಮದಾ ಯೋಜನೆ, ಪಟೇಲ್ ಪ್ರತಿಮೆ ಯೋಜನೆ , ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಹೆಸರಲ್ಲಿ ತಮ್ಮ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ ಎಂದು ಆದಿವಾಸಿಗಳು ದೂರುತ್ತಿದ್ದಾರೆ.

ಭರವಸೆ ಮರೆತ ಸರಕಾರ

ಪ್ರತಿಮೆ ಯೋಜನೆ 72 ಆದಿವಾಸಿ ಗ್ರಾಮಗಳ ಮೇಲೆ ಪರಿಣಾಮ ಬೀರಲಿದ್ದು 32ಗ್ರಾಮಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಬಾಧಿತವಾಗಿವೆ. 19 ಗ್ರಾಮಗಳಲ್ಲಿ ಪುನರ್ವಸತಿ ಕಾರ್ಯ ಪೂರ್ಣಗೊಂಡಿಲ್ಲ. ಈಗ ಕೆವಾಡಿಯಾ ಕಾಲೊನಿ ನಿರ್ಮಿಸಲಾಗಿರುವ ಪ್ರದೇಶದಲ್ಲಿರುವ ಆರು ಗ್ರಾಮಗಳು ಹಾಗೂ ಗರುಡೇಶ್ವರ ಬ್ಲಾಕ್‌ನಲ್ಲಿರುವ ಏಳು ಗ್ರಾಮದ ನಿವಾಸಿಗಳಿಗೆ ಪರಿಹಾರ ಧನ ಮಾತ್ರ ನೀಡಲಾಗಿದೆ. ಆದರೆ ಭೂಸ್ವಾಧೀನ ಪಡಿಸಿಕೊಳ್ಳುವ ಸಂದರ್ಭ ಮಾಡಿಕೊಳ್ಳಲಾದ ಒಪ್ಪಂದದ ಇತರ ಬಾಧ್ಯತೆಗಳಾದ ಸೂಕ್ತ ಬದಲಿ ಜಮೀನು ಅಥವಾ ಉದ್ಯೋಗದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆದಿವಾಸಿ ಮುಖಂಡರು ದೂರಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X