ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ
ಉಡುಪಿ, ಅ.20: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ಯೋಗದೊಂದಿಗೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ರಾಜ್ಯ ದಾದ್ಯಂತ ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶದಲ್ಲಿ 10 ರಿಂದ 17ವರ್ಷ ವಯೋಮಾನದ ಯಾವುದೇ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು, ಇಬ್ಬರು ವಿದ್ಯಾರ್ಥಿಗಳು ಒಂದು ತಂಡ ದಲ್ಲಿ ಭಾಗವಹಿಸಬಹುದಾಗಿದೆ. ಈ ಸಮಾವೇಶದಲ್ಲಿ ಶಾಲೆ ಬಿಟ್ಟ ಮಕ್ಕಳು ಕೂಡ ಭಾಗವಹಿಸಲು ಅವಕಾಶವಿದ್ದು, ಸಮಾವೇಶವು ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದ 3 ಹಂತಗಳಲ್ಲಿ ಜರಗಲಿದೆ.
ಕಿರಿಯರ ತಂಡದಲ್ಲಿ 10ರಿಂದ 14 ವಯೋಮಾನದ ಮಕ್ಕಳು ಹಾಗೂ ಹಿರಿಯರ ತಂಡದಲ್ಲಿ 14ರಿಂದ 17ವಯೋಮಾನದ ಮಕ್ಕಳು ಭಾಗವಹಿಸ ಬಹುದಾಗಿದೆ. ಈ ಬಾರಿಯ ಸಮಾವೇಶದಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಶಿಕ್ಷಕರ ಮಾರ್ಗದರ್ಶನದೊಂದಿಗೆ ವೈಜ್ಞಾನಿಕ ವಾಗಿ ಅಧ್ಯಯನವನ್ನು ಕೈಗೊಳ್ಳಬೇಕಾಗಿದೆ.
ಸ್ಥಳೀಯ ಸಮಸ್ಯೆಯೊಂದನ್ನು ಆಯ್ದು ಅಧ್ಯಯನ ಹಾಗೂ ವಿಶ್ಲೇಷಣೆಯ ನಂತರ ಸ್ವತ: ತಾವೇ ಸಿದ್ಧಪಡಿಸುವ ವೈಜ್ಞಾನಿಕ ಯೋಜನಾ ವರದಿಯನ್ನು ಮಂಡಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಅನ್ವೇಷಣೆ, ಕುತೂಹಲಪೂರಿತ ಅಧ್ಯಯನ ಸ್ವಭಾವಕ್ಕೆ ಹಾಗೂ ಬೌದ್ಧಿಕ ಅಭಿವೃದ್ಧಿಯ ಸಮಗ್ರ ಬೆಳವಣಿಗೆಗೆ ಅವಕಾಶ ದೊರೆಯುತ್ತದೆ.
ಕಾರ್ಯಕ್ರಮದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನವೆಂಬರ್ ಮಧ್ಯಂತರದಲ್ಲಿ ಜಿಲ್ಲಾಮಟ್ಟದ ಸಮಾವೇಶ, ಡಿಸೆಂಬರ್ ಮೊದಲ ವಾರದಲ್ಲಿ 3 ದಿನ ಅವಧಿಯ ರಾಜ್ಯಮಟ್ಟದ ಸಮಾವೇಶ, ನಂತರ ಡಿ.27ರಿಂದ 31 ರವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ರಾಷ್ಟ್ರಮಟ್ಟದ ಸಮಾವೇಶ ಜರಗ ಲಿದೆ. ರಾಜ್ಯದ 30 ಜಿಲ್ಲೆಗಳಿಂದ ಗ್ರಾಮೀಣ ಮತ್ತು ನಗರ ವಿಭಾಗದ ಅಡಿಯಲ್ಲಿ ಅತ್ಯುತ್ತಮ ಪ್ರಬಂಧಗಳನ್ನು ಮಂಡಿಸುವ 10 ತಂಡಗಳು ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಲಿವೆ. ಅದರಂತೆ ರಾಜ್ಯಮಟ್ಟದ ಸಮಾವೇಶ ದಲ್ಲಿ ಅತ್ಯುತ್ತಮ ಪ್ರಬಂಧಗಳ ಮಂಡನೆ ಮಾಡುವ 30 ತಂಡಗಳು ರಾಷ್ಟ್ರ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಲಿವೆ.
ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗಾಗಿ ಭಾಗವಹಿಸಲು ಅನುಕೂಲವಾಗು ವಂತೆ ಮಾರ್ಗದರ್ಶಿ ಚಟುವಟಿಕೆಗಳ ಸಂಪನ್ಮೂಲ ಕೈಪಿಡಿ ಲಭ್ಯವಿದ್ದು, ವಾಟ್ಸಾಪ್ ನಂ.9008442557 ಸಂಪರ್ಕಿಸಿ ಮಾಹಿತಿ ಮತ್ತು ಕೈಪಿಡಿ ಪಡೆಯಬಹುದಾಗಿದೆ ಅಥವಾ ವೆಬ್ಸೈಟ್: www.krvp.org ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







