Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಫೋಟೋ ಕ್ಲಿಕ್ಕಿಸಿದ ಕೂಡಲೇ ಆ ತಾಯಿ...

ಫೋಟೋ ಕ್ಲಿಕ್ಕಿಸಿದ ಕೂಡಲೇ ಆ ತಾಯಿ ನನ್ನನ್ನು...!

ನೇತ್ರರಾಜು ಸೆರೆಹಿಡಿದ ದಸರಾ ವೈರಲ್ ಫೋಟೋ ಹಿಂದಿನ ಕತೆ ಇಲ್ಲಿದೆ

ವಾರ್ತಾಭಾರತಿವಾರ್ತಾಭಾರತಿ20 Oct 2018 9:45 PM IST
share
ಫೋಟೋ ಕ್ಲಿಕ್ಕಿಸಿದ ಕೂಡಲೇ ಆ ತಾಯಿ ನನ್ನನ್ನು...!

ಮೈಸೂರು.ಅ.20: "ದಸರಾ ಪ್ರಾರಂಭವಾದ ಮೂರ್ನಾಲ್ಕು ದಿನಗಳಿರಬೇಕು. ಅರಮನೆಯ ಒಳಗೆ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಫೋಟೊ ತೆಗೆಯಬೇಕಿತ್ತು. ಆ ಸಂದರ್ಭದಲ್ಲಿ ಗಜಪಡೆಗಳು ಏನು ಮಾಡುತ್ತಿವೆ ಎಂಬುದರ ಫೋಟೋಗಳ ಅಗತ್ಯವಿದ್ದುದರಿಂದ ಗಜಪಡೆಗಳ ಬಳಿ ಹೋಗುತ್ತಿದ್ದಾಗ ಈ ದೃಶ್ಯವನ್ನು ಸೆರೆಹಿಡಿಯಲಾಯಿತು' ಎಂದು ದಸರಾ ವೈರಲ್ ಫೋಟೋ ಕ್ಲಿಕ್ಕಿಸಿದ ಹಿರಿಯ ಛಾಯಾಗ್ರಾಹಕ ನೇತ್ರ ರಾಜು 'ವಾರ್ತಾಭಾರತಿ' ಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಹಸಿವು, ದಾಹ, ನೋವು, ಸಂಕಟ ಮತ್ತು ನಿರ್ಲಕ್ಷತನದ ಏಟು ತಿಂದ ತಾಯಿ ಹೃದಯ ಅರಮನೆಯ ಬೆಳಕಿನ ಸೌಂದರ್ಯ ಕಂಡು ನಿಬ್ಬೆರಗಾಗಿ ಮಗನ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಮೂಕ ವಿಸ್ಮಿತಳಾಗಿ ನಿಂತಿರುವ ಈ ಅದ್ಭುತ ದೃಶ್ಯ ಈಗ ಎಲ್ಲರ ಮನಕಲಕುವಂತಿದೆ. 

'ಅರಮನೆ ಒಳಗಡೆ ಒಂದು ಸುತ್ತು ಹಾಕುತ್ತಿದ್ದೆ. ಆಗ ಈ ಅಸಹಾಯಕ ಮಹಿಳೆ ತನ್ನ ಮಗುವನ್ನು ಸೊಂಟದ ಮೇಲೆ ಕೂರಿಸಿಕೊಂಡು ಅರಮನೆ ಬೆಳಕನ್ನು ಕಂಡು ಹೋಗುತ್ತಿದ್ದುದು ಕಣ್ಣಿಗೆ ಬಿತ್ತು. ಇಂತಹ ಒಂದು ಫೋಟೋ ಅಗತ್ಯವಿದೆ ಅನಿಸಿತು. ಹಾಗೆ ಒಮ್ಮೆ ಪೋಟೋ ಕ್ಲಿಕ್ಕಿಸಿದೆ. ತಕ್ಷಣಕ್ಕೆ ಆ ತಾಯಿ ನನ್ನನ್ನು ನೋಡಿಬಿಟ್ಟರು. ನಾನು ಗೊತ್ತಿಲ್ಲದ ರೀತಿ ಎಷ್ಟೇ ಪ್ರಯತ್ನಪಟ್ಟರೂ ಅವರು ನಾನು ಪೋಟೋ ತೆಗೆಯುವುದನ್ನೇ ಹಿಂದಕ್ಕೆ ತಿರುಗಿ ತಿರುಗಿ ನೋಡುತ್ತಿದ್ದರು.
ನಾನು ಕೆಲಸ ಮಾಡುವ ಸಂಸ್ಥೆಗೆ ಬೇಕಾದ ರೀತಿ ಫೋಟೋ ತೆಗೆಯುತ್ತಿದ್ದೆ. ಆ ಅಸಹಾಯಕ ಮಹಿಳೆ ನೋಡಿದಾಕ್ಷಣ ನನಗೆ ಬೇಕಾದಂತೆ ಫೋಟೊ ತೆಗೆಯಬೇಕು ಎಂದೆನಿಸಿತು. ಛಾಯಾಗ್ರಾಹಕನಾದವನಿಗೆ ಒಂದು ಇಮೇಜು ಎಂಬುದಿರುತ್ತದೆ. ಆದಕ್ಕಾಗಿ ನಾನು ಸುಮಾರು ಅರ್ಧ ತಾಸು ಕಾಯುತ್ತಾ ನಿಂತೆ. ಆದರೂ ಮಹಿಳೆ ನನ್ನನ್ನೇ ಗಮನಿಸುತ್ತಿದ್ದಳು. ತನ್ನ ಮಗುವನ್ನು ಆಕೆ ಕೆಳಗೆ ಇಳಿಸಿದಾಗೆಲ್ಲಾ ಆ ಮಗು ಅತ್ತಿಂದಿತ್ತ ಓಡಾಡುತ್ತಿತ್ತು ಎಂದು ವೈರಲ್ ಫೋಟೋ ಸೆರೆಹಿಡಿಯುವ ಅನುಭವವನ್ನು ನೇತ್ರರಾಜು ಬಿಚ್ಚಿಟ್ಟರು.

 ಛಾಯಾಗ್ರಾಹಕ ನೇತ್ರರಾಜು

'ನಾನು ಏನೂ ಗೊತ್ತಿಲ್ಲದವನಂತೆ ಸುತ್ತಮುತ್ತ ನೋಡುತ್ತಿದ್ದೆ. ಆದರೂ ನನಗೆ ಫೋಟೋ ತೆಗೆಯಲು ಆಗುತ್ತಿರಲಿಲ್ಲ. ಅರಮನೆಗೆ ಬರುವ ಜನ ಅಡ್ಡ ಬರುತ್ತಿದ್ದರು. ಅದೇ ಸಮಯ ಆ ತಾಯಿಯು ಅರಮನೆಯ ಬೆಳಕನ್ನು ನೋಡುತ್ತಿದ್ದಾಗ ಮಗು ಪಕ್ಕದಲ್ಲಿ ಬಂದು ನಿಂತಿತು. ತಕ್ಷಣ ಕ್ಲಿಕ್ ಮಾಡಿದೆ. ಇದು ಇಷ್ಟೊಂದು ಜನಪ್ರಿಯತೆ ಪಡೆದುಕೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ' ಎಂದು ಫೋಟೋ ಕ್ಲಿಕ್ಕಿಸಿದಾಗ ಉಂಟಾದ ಅನುಭವವನ್ನು ನೇತ್ರರಾಜು ತೆರೆದಿಡುತ್ತಾರೆ. 

ಅರಮನೆಯ ಬೆಳಕಲ್ಲಿ ಕಟು ನೋವಿನ ಸಾಕ್ಷಾತ್ಕಾರವಾಗಿದೆ. ವಿದ್ಯುತ್ ದೀಪಲಂಕಾರದಿಂದ ಇರುಳ ಸೂರ್ಯನಂತೆ ಕಂಗೊಳಿಸುವ ಅರಮನೆಯನ್ನು ನಿಬ್ಬೆರಗಾಗಿ ನೋಡುತ್ತಿರುವ ಅಮ್ಮ ಮತ್ತು ಮಗುವಿನ ಚಿತ್ರ ಮಾನವೀಯ ಮನಸ್ಸುಗಳಲ್ಲಿ ಕಾರುಣ್ಯದ ಚಿಲುಮೆಗೂ ಸವಾಲು ಹಾಕುವಂತಿದ್ದರೆ, ಸಂತೋಷ, ಸಂಭ್ರಮಗಳಲ್ಲಿ ಮಿಂದೇಳುವ ಐಷಾರಾಮಿ ಜನರಲ್ಲೂ ಅಂತಃಕರಣ ಚಿಮ್ಮುವ ಅಗತ್ಯವನ್ನು ಸಾರುತ್ತಿದೆ.

ಅರಮನೆಯ ಬೆಳಕಿನ ಮುಂದೆ ಹಸಿವು, ಬಡತನ, ಅಸಹಾಯಕತೆಯಿಂದ ಅಮ್ಮ ಮತ್ತು ಮಗ ನಿಂತು ನೋಡುತ್ತಿರುವ ದೃಶ್ಯವೇ ರಾರಾಜಿಸುತ್ತಿದೆ. ಒಂದು ಕಡೆ ದಸರಾ ವೈಭೋಗವಾದರೆ ಮತ್ತೊಂದೆಡೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಯಾವ ಸರ್ಕಾರದ ಯೋಜನೆಗಳೂ ತಲುಪದೇ ನಿರ್ಲಕ್ಷತನದಿಂದ ಬದುಕು ನಡೆಸುತ್ತಿರುವ ಅದೆಷ್ಟೋ ಕುಟುಂಬಗಳು ಕತ್ತಲೆಯಲ್ಲೇ ಇನ್ನೂ ಬದುಕು ನಡೆಸುತ್ತಿರುವುದು ವಿಪರ್ಯಾಸ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X