Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಖಶೋಗಿಯನ್ನು ಸೌದಿ ಏಜಂಟ್‌ಗಳು...

ಖಶೋಗಿಯನ್ನು ಸೌದಿ ಏಜಂಟ್‌ಗಳು ಕಾನ್ಸುಲೇಟ್‌ನಲ್ಲಿ ಉಸಿರುಗಟ್ಟಿಸಿ ಕೊಂದರು

ಪತ್ರಕರ್ತನ ಸಾವಿನ ಹೇಳಿಕೆಯನ್ನು ಬದಲಾಯಿಸಿದ ಸೌದಿ ಅರೇಬಿಯ

ವಾರ್ತಾಭಾರತಿವಾರ್ತಾಭಾರತಿ21 Oct 2018 10:16 PM IST
share
ಖಶೋಗಿಯನ್ನು ಸೌದಿ ಏಜಂಟ್‌ಗಳು ಕಾನ್ಸುಲೇಟ್‌ನಲ್ಲಿ ಉಸಿರುಗಟ್ಟಿಸಿ ಕೊಂದರು

ರಿಯಾದ್, ಅ. 21: ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗಿಯ ಸಾವಿನ ಬಗ್ಗೆ ಸೌದಿ ಅರೇಬಿಯ ನೀಡಿರುವ ವಿವರಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂದೇಹಗಳು ವ್ಯಕ್ತವಾಗುತ್ತಿರುವಂತೆಯೇ, ದೇಶದ ಹಿರಿಯ ಅಧಿಕಾರಿಯೊಬ್ಬರು ಈ ಸಾವಿಗೆ ಹೊಸ ವಿವರಣೆಯೊಂದನ್ನು ನೀಡಿದ್ದಾರೆ. ಈ ವಿವರಣೆಯು ಹಲವು ಸಂದರ್ಭಗಳಲ್ಲಿ ಹಿಂದಿನ ವಿವರಣೆಗಳಿಗೆ ವ್ಯತಿರಿಕ್ತವಾಗಿದೆ.

ಖಶೋಗಿಯನ್ನು ನಿಭಾಯಿಸಲು ಅಕ್ಟೋಬರ್ 2ರಂದು ಸೌದಿ ಅರೇಬಿಯ ಕಳುಹಿಸಿದ 15 ಸೌದಿ ರಾಷ್ಟ್ರೀಯರ ತಂಡವು, ಮತ್ತು ಭರಿಸುವ ಔಷಧ ನೀಡಿ ಅಪಹರಿಸುವುದಾಗಿ ಖಶೋಗಿಯನ್ನು ಬೆದರಿಸಿತು ಎಂಬುದಾಗಿ ಈ ಅಧಿಕಾರಿ ಹೇಳಿದ್ದಾರೆ.

ಅದನ್ನು ಖಶೋಗಿ ವಿರೋಧಿಸಿದಾಗ ಅವರನ್ನು ಉಸಿರುಗಟ್ಟಿಸಿ ಕೊಲ್ಲಲಾಯಿತು ಎಂದು ಅವರು ತಿಳಿಸಿದ್ದಾರೆ.

ಬಳಿಕ, ಖಶೋಗಿ ಕೌನ್ಸುಲೇಟ್ ಕಚೇರಿಯಿಂದ ಹೊರಗೆ ಹೋಗಿದ್ದಾರೆ ಎಂಬಂತೆ ಕಾಣಲು, ತಂಡದ ಓರ್ವ ಸದಸ್ಯನು ಅವರ ಬಟ್ಟೆಗಳನ್ನು ಧರಿಸಿ ಹೊರಗೆ ನಡೆದುಕೊಂಡು ಹೋದನು ಎಂದು ಅವರು ಹೇಳಿದ್ದಾರೆ.

59 ವರ್ಷದ ಖಶೋಗಿಯ ನಾಪತ್ತೆ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಎರಡು ವಾರಗಳ ಕಾಲ ಹೇಳುತ್ತಾ ಬಂದಿದ್ದ ಸೌದಿ ಅರೇಬಿಯವು, ಕೌನ್ಸುಲೇಟ್‌ನಲ್ಲಿ ನಡೆದ ‘ಮುಷ್ಟಿ ಕಾಳಗ’ದಲ್ಲಿ ಖಶೋಗಿ ಮೃತಪಟ್ಟಿದ್ದಾರೆ ಎಂಬುದಾಗಿ ಶನಿವಾರ ಬೆಳಗ್ಗೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಒಂದು ಗಂಟೆ ಬಳಿಕ ಇನ್ನೋರ್ವ ಸೌದಿ ಅಧಿಕಾರಿಯು, ಉಸಿರುಗಟ್ಟಿದ್ದರಿಂದ ಖಶೋಗಿಯ ಸಾವು ಸಂಭವಿಸಿದೆ ಎಂದು ಹೇಳಿದ್ದರು.

ಈಗ ಈ ಹಿರಿಯ ಅಧಿಕಾರಿ ಅದೇ ಸಿದ್ಧಾಂತವನ್ನು ಪುನರುಚ್ಚರಿಸಿದ್ದಾರೆ.

ಖಶೋಗಿಯ ದೇಹವನ್ನು ತುಂಡು ತುಂಡು ಮಾಡಲಾಗಿದೆ ಎಂಬುದಾಗಿ ಟರ್ಕಿ ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ವಿಲೇವಾರಿ ಮಾಡುವುದಕ್ಕಾಗಿ ದೇಹವನ್ನು ಬಟ್ಟೆಯಲ್ಲಿ ಸುತ್ತಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ನೀಡಲಾಯಿತು ಎಂದು ಸೌದಿ ಅಧಿಕಾರಿ ಹೇಳುತ್ತಾರೆ.

ಖಶೋಗಿಗೆ ಚಿತ್ರಹಿಂಸೆ ನೀಡಿ ತಲೆಕಡಿಯಲಾಯಿತು ಎಂಬ ಆರೋಪಗಳ ಬಗ್ಗೆ ಕೇಳಿದಾಗ, ಪ್ರಾಥಮಿಕ ತನಿಖೆಯಲ್ಲಿ ಅದು ಸಾಬೀತಾಗಿಲ್ಲ ಎಂದರು.

ನಿರಂತರ ಬದಲಾದ ಸೌದಿ ಹೇಳಿಕೆ

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯದ ಹೇಳಿಕೆಯು ನಿರಂತರವಾಗಿ ಬದಲಾಗುತ್ತಾ ಬಂದಿದೆ.

ಆರಂಭದಲ್ಲಿ, ಕೌನ್ಸುಲೇಟ್ ಕಚೇರಿಗೆ ಬಂದಿದ್ದ ಖಶೋಗಿ ನಾಪತ್ತೆಯಾಗಿದ್ದಾರೆ ಎಂಬ ವರದಿಗಳನ್ನು ಸೌದಿ ಅಧಿಕಾರಿಗಳು ನಿರಾಕರಿಸಿದ್ದರು. ಕಚೇರಿಗೆ ಬಂದ ಸ್ವಲ್ಪವೇ ಹೊತ್ತಿನಲ್ಲಿ ಅವರು ಹೋಗಿದ್ದಾರೆ ಎಂದು ಹೇಳಿದ್ದರು.

ಕೌನ್ಸುಲೇಟ್‌ನಲ್ಲಿ ಪತ್ರಕರ್ತನನ್ನು ಕೊಲ್ಲಲಾಗಿದೆ ಎಂಬ ವರದಿಗಳು ಕೆಲವು ದಿನಗಳ ಬಳಿಕ ಪ್ರಕಟವಾದಾಗ, ಈ ಆರೋಪಗಳು ‘ಆಧಾರರಹಿತ’ ಎಂಬುದಾಗಿ ಅವರು ಹೇಳಿದ್ದರು.

ಖಶೋಗಿ ಸಾವಿನ ಕುರಿತ ಸೌದಿ ಸರಕಾರದ ಹೇಳಿಕೆಗಳು ಯಾಕೆ ನಿರಂತರವಾಗಿ ಬದಲಾದವು ಎಂಬ ‘ರಾಯ್ಟರ್ಸ್’ ಪ್ರಶ್ನೆಗೆ, ‘‘ಸರಕಾರದ ಆರಂಭಿಕ ಹೇಳಿಕೆಯು ಆ ಸಮಯದಲ್ಲಿ ಆಂತರಿಕವಾಗಿ ಲಭಿಸಿದ ತಪ್ಪು ಮಾಹಿತಿಯನ್ನು ಆಧರಿಸಿತ್ತು’’ ಎಂದು ಸೌದಿ ಅಧಿಕಾರಿ ಉತ್ತರಿಸಿದರು.

‘‘ಈ ಆರಂಭಿಕ ಮಾಹಿತಿಗಳು ತಪ್ಪು ಎನ್ನುವುದು ಸ್ಪಷ್ಟವಾದ ಬಳಿಕ, ಸೌದಿ ಅರೇಬಿಯವು ಆಂತರಿಕ ತನಿಖೆಗೆ ಆದೇಶಿಸಿತು ಹಾಗೂ ಹೊಸದಾಗಿ ಸಾರ್ವಜನಿಕ ಹೇಳಿಕೆ ನೀಡುವುದನ್ನು ನಿಲ್ಲಿಸಿತು’’ ಎಂದರು.

ಪ್ರಕರಣದ ಬುಡಕ್ಕೆ ಹೋಗುತ್ತೇವೆ: ಟ್ರಂಪ್

ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಎಲ್ಲ ವಿವರಗಳನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಸೌದಿ ಅರೇಬಿಯದೊಂದಿಗಿನ ಶಸ್ತ್ರಾಸ್ತ್ರ ವ್ಯವಹಾರವನ್ನು ರದ್ದುಪಡಿಸುವುದಿಲ್ಲ ಎಂದಿದ್ದಾರೆ.

‘‘ಇದು ನಾವು ಇಷ್ಟ ಪಡುವಂಥಾದ್ದಲ್ಲ. ಇದು ಅತ್ಯಂತ ಗಂಭೀರ ವಿಷಯ. ನಾವು ಪ್ರಕರಣದ ಬುಡಕ್ಕೆ ಹೋಗುತ್ತೇವೆ’’ ಎಂದು ಅಮೆರಿಕದ ನೆವಾಡ ರಾಜ್ಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X