ನ್ಯಾಯಾಂಗ ನಿಂದನೆ: ಕ್ಷಮೆ ಕೋರಿದ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ
ಚೆನ್ನೈ, ಅ. 22: ನ್ಯಾಯಾಂಗದ ವಿರುದ್ಧ ಅವಮಾನಕರವಾಗಿ ಟೀಕೆ ಮಾಡಿದ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಸೋಮವಾರ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನಿಶ್ಯರ್ತವಾಗಿ ಕ್ಷಮೆ ಯಾಚಿಸಿದ್ದಾರೆ.
ಕೋಪದ ಸಂದರ್ಭ ನಾನು ಆ ರೀತಿ ಹೇಳಿದೆ. ಇದು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕ ಅಲ್ಲ. ತಾನು ಭಾವನಾತ್ಮಕ ಸ್ಥಿತಿಯಲ್ಲಿ ಇದ್ದೆ. ವೀಡಿಯೊ ನೋಡಿದ ಬಳಿಕ ತಪ್ಪು ಮಾಡಿದ್ದೇನೆ ಎಂದು ಅರಿವಾಯಿತು. ತಾನು ನಿಶ್ಯರ್ತವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದರು.
ರಾಜಾ ಅವರ ನಿಶ್ಯರ್ತ ಕ್ಷಮೆ ಯಾಚಿಸಿರುವುದರಿಂದ ನ್ಯಾಯಾಲಯ ಪ್ರಕರಣವನ್ನು ಮುಚ್ಚಿದೆ.
ತಮಿಳುನಾಡಿನ ಪುದುಕೋಟೈಯಲ್ಲಿ ಸೆಪ್ಟಂಬರ್ನಲ್ಲಿ ನಡೆದ ವಿನಾಯಕ ಚತುರ್ಥಿ ಮೆರವಣಿಗೆ ಸಂದರ್ಭ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ವಾಗ್ವಾದದ ವೇಳೆ ರಾಜಾ ನ್ಯಾಯಾಂಗ ಹಾಗೂ ಪೊಲೀಸರ ಕುರಿತು ಮಾನಹಾನಿಕರ ಹೇಳಿಕೆ ನೀಡಿದ್ದರು.
Next Story