Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರೈಲಿನ ಚಾಲಕನ ಹೇಳಿಕೆ ಸುಳ್ಳು:...

ರೈಲಿನ ಚಾಲಕನ ಹೇಳಿಕೆ ಸುಳ್ಳು: ಸಂತ್ರಸ್ತರ ಆಕ್ರೋಶ

ಅಮೃತಸರ ರೈಲು ದುರಂತ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ22 Oct 2018 11:04 PM IST
share
ರೈಲಿನ ಚಾಲಕನ ಹೇಳಿಕೆ ಸುಳ್ಳು: ಸಂತ್ರಸ್ತರ ಆಕ್ರೋಶ

ಹೊಸದಿಲ್ಲಿ, ಅ.22: ಶುಕ್ರವಾರ ಸಂಭವಿಸಿದ ರೈಲು ದುರಂತದ ಬಗ್ಗೆ ರೈಲಿನ ಚಾಲಕ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಸಂತ್ರಸ್ತರು ಹಾಗೂ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ದಸರಾ ಕಾರ್ಯಕ್ರಮವನ್ನು ವೀಕ್ಷಿಸಲು ಸ್ಥಳದಲ್ಲಿ ನೆರೆದಿದ್ದ ಜನರು ರೈಲಿನತ್ತ ಕಲ್ಲೆಸೆತಕ್ಕೆ ಆರಂಭಿಸಿದ ಕಾರಣ ತಾನು ರೈಲನ್ನು ನಿಲ್ಲಿಸಲಿಲ್ಲ ಎಂದು ರೈಲಿನ ಚಾಲಕ ರೈಲ್ವೇ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾನೆ. ಆದರೆ ತಾನು ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ರೈಲನ್ನು ನಿಲ್ಲಿಸುವುದು ಹಾಗಿರಲಿ, ಕನಿಷ್ಟ ವೇಗವನ್ನು ತಗ್ಗಿಸಲೂ ಆತ ಪ್ರಯತ್ನಿಸಿಲ್ಲ. ನಮ್ಮನ್ನು ಅಪ್ಪಚ್ಚಿ ಮಾಡಲು ಆತ ಸಂಪೂರ್ಣ ಸಿದ್ಧನಾಗಿರುವಂತೆ ಕಾಣುತ್ತಿತ್ತು. ಶರವೇಗದಲ್ಲಿ ಧಾವಿಸಿ ಬಂದ ರೈಲು ಕ್ಷಣಾರ್ಧದಲ್ಲಿ ಕಣ್ಮರೆಯಾಯಿತು ಎಂದು ಸ್ಥಳೀಯ ಪುರಸಭೆ ಕೌನ್ಸಿಲರ್ ಶೈಲೇಂದರ್ ಸಿಂಗ್ ಹೇಳಿದ್ದಾರೆ.

ಅಷ್ಟೊಂದು ಮಂದಿ ನಮ್ಮ ಸುತ್ತ ಸತ್ತುಬಿದ್ದಿರುವಾಗ ಅಥವಾ ಗಾಯಗೊಂಡು ನರಳಾಡುತ್ತಿರುವಾಗ ಕಲ್ಲೆಸೆತದಲ್ಲಿ ತೊಡಗಲು ಸಾಧ್ಯವೇ. ದುರಂತದ ಭೀಕರತೆಯಿಂದ ಆಘಾತಕ್ಕೊಳಗಾಗಿದ್ದ ಜನತೆ ಶರವೇಗದಲ್ಲಿ ಧಾವಿಸುತ್ತಿರುವ ರೈಲಿನ ಮೇಲೆ ಕಲ್ಲೆಸೆತ ನಡೆಸಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ. ರೈಲು ಎಷ್ಟು ವೇಗದಲ್ಲಿ ಧಾವಿಸುತ್ತಿತ್ತು ಎಂಬುದನ್ನು ಹಲವಾರು ವೀಡಿಯೋಗಳು ದೃಢಪಡಿಸಿವೆ ಎಂದವರು ಹೇಳಿದರು.

ರೈಲು ಹಾದು ಹೋದ ತಕ್ಷಣ ಜನರ ಚೀರಾಟ, ನರಳಾಟ ಕೇಳಿ ಬಂದಿದೆ. ಆದರೆ ಯಾರೂ ಕಲ್ಲೆಸೆದಿದ್ದನ್ನು ತಾನು ಕಂಡಿಲ್ಲ. ರೈಲಿನ ವೇಗವನ್ನು ಗಮನಿಸಿದರೆ, ಜನರು ಕಲ್ಲನ್ನು ಸಂಗ್ರಹಿಸಿ ಬಿಸಾಡಲು ಮುಂದಾಗುವುದರೊಳಗೆ ರೈಲು ಹಾದುಹೋಗುವುದರಲ್ಲಿ ಸಂಶಯವಿಲ್ಲ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ರೈಲಿನ ಹಳಿಯ ಮೇಲೆ ಹಲವು ಜನರಿರುವುದನ್ನು ಕಂಡು ತಾನು ತುರ್ತು ಬ್ರೇಕನ್ನು ಅದುಮಿದ್ದೆ . ರೈಲು ಬಹುತೇಕ ನಿಲುಗಡೆಯ ಸ್ಥಿತಿಗೆ ಬಂದಿತ್ತು. ಆದರೆ ಆಗ ಕೆಲವರು ರೈಲಿನತ್ತ ಕಲ್ಲೆಸೆಯಲು ಆರಂಭಿಸಿದರು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲನ್ನು ನಿಲ್ಲಿಸದಿರಲು ತಾನು ನಿರ್ಧರಿಸಿದೆ ಎಂದು ಶನಿವಾರ ನೀಡಿದ್ದ ಹೇಳಿಕೆಯಲ್ಲಿ ಚಾಲಕ ತಿಳಿಸಿದ್ದ.

ಶುಕ್ರವಾರ ಅಪಘಾತಕ್ಕೆ ಕಾರಣವಾದ ರೈಲು ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್(ಡೆಮು) ರೈಲಾಗಿದ್ದು ಗರಿಷ್ಠ ವೇಗ ಗಂಟೆಗೆ 96 ಕಿ.ಮೀ. ಆಗಿದೆ. ಚಲಿಸುತ್ತಿರುವ ರೈಲಿನ ಬ್ರೇಕ್ ಅದುಮಿದರೆ ರೈಲು ಖಾಲಿಯಿದ್ದರೆ 300 ಮೀಟರ್‌ನಷ್ಟು ದೂರ ಚಲಿಸಿ ನಿಲುಗಡೆಯಾಗುತ್ತದೆ. ಪ್ರಯಾಣಿಕರಿಂದ ಭರ್ತಿಯಾಗಿದ್ದರೆ ಸುಮಾರು 600 ಮೀಟರ್‌ನಷ್ಟು ಚಲಿಸಿ ನಿಲುಗಡೆಯಾಗುತ್ತದೆ. ಅಪಘಾತಕ್ಕೆ ಮೊದಲು ಈ ರೈಲಿನ ಪ್ರಯಾಣ ವೇಗ ಗಂಟೆಗೆ 68 ಕಿ.ಮೀ. ದಾಖಲಾಗಿತ್ತು ಎಂದು ಫಿರೋಝ್‌ಪುರ ರೈಲ್ವೇ ವಿಭಾಗೀಯ ಅಧಿಕಾರಿ ವಿವೇಕ್ ಕುಮಾರ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X