ಮಡಿಕೇರಿ: ಎಸ್ಸೆಸ್ಸೆಫ್ ತಾವೂರು ಶಾಖೆಯ ಯುನಿಟ್ ಸಮ್ಮೇಳನ

ಮಡಿಕೇರಿ, ಅ.23 : ಭಾಗಮಂಡಲ ಸಮೀಪದ ತಾವೂರು ಶಾಖಾ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ 'ಯೌವ್ವನ ಮರೆಯಾಗುವ ಮುನ್ನ' ಎಂಬ ಘೋಷಣೆಯಡಿ ಯುನಿಟ್ ಸಮ್ಮೇಳನ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ತಾವೂರು ಯೂನಿಟ್ ಅಧ್ಯಕ್ಷ ನವಾಜ್ ಮದನಿ ವಹಿಸಿದ್ದರು. ಸಮ್ಮೇಳನವನ್ನು ಉದ್ದೇಶಿಸಿ ಸಿರಾಜುದ್ದೀನ್ ಸಖಾಫಿ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ರಫೀಕ್ ಸಖಾಫಿ, ಉಸ್ಮಾನ್ ಮಹಲ್ ಅಧ್ಯಕ್ಷರು, ಸಿಯಾಬ್ ಇದ್ದರು.
Next Story





