ಶಬರಿಮಲೆ ತೀರ್ಪು ಬಗ್ಗೆ ಅಮಿತ್ ಶಾ ಹೇಳಿಕೆ ಗಮನಿಸಿ: ಸುಪ್ರೀಂ ಕೋರ್ಟ್ಗೆ ಮಾಯಾವತಿ ಮನವಿ
ಹೊಸದಿಲ್ಲಿ, ಅ. 28: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಬಿಎಸ್ಪಿ ನಾಯಕಿ ಮಾಯಾವತಿ ಖಂಡಿಸಿದ್ದಾರೆ.
ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಮಾಯಾವತಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಾವಕಾಶ ನೀಡಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅಮಿತ್ ಶಾ ಶನಿವಾರ ಟೀಕಿಸಿದ್ದರು ಹಾಗೂ ಅನುಸರಿಸಲು ಸಾಧ್ಯವಾಗುವಂತೆ ಆದೇಶ ನೀಡಿ ಎಂದು ರಾಜ್ಯ ಸರಕಾರ ಹಾಗೂ ನ್ಯಾಯಾಲಯಕ್ಕೆ ಅವರು ಸಲಹೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮಾಯಾವತಿ, ಶಬರಿಮಲೆ ವಿಷಯಕ್ಕೆ ಸಂಬಂಧಿಸಿ ಅನುಸರಿಸಲು ಸಾಧ್ಯವಾಗದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಬಾರದು ಎಂದು ಅಮಿತ್ ಶಾ ನೀಡಿದ ಹೇಳಿಕೆ ಖಂಡನೀಯ. ಸುಪ್ರೀಂ ಕೋರ್ಟ್ ಈ ಹೇಳಿಕೆಯ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ. ಶಬರಿಮಲೆ ದೇವಾಲಯದ ವಿರುದ್ಧ ಅಮಿತ್ ಶಾ ಕಣ್ಣೂರಿನಲ್ಲಿ ನೀಡಿದ ಹೇಳಿಕೆ ಸಂವಿಧಾನ ಹಾಗೂ ನೆಲದ ಕಾನೂನಿಗೆ ವಿರುದ್ಧ ಎಂದು ಶನಿವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು.