Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ29 Oct 2018 12:16 AM IST
share
ಓ ಮೆಣಸೇ...

ಲೋಕಸಭೆ ಚುನಾವಣೆ ವೇಳೆ ದೇಶದಲ್ಲಿ ಕಾಂಗ್ರೆಸ್ ಇಬ್ಭಾಗವಾಗಲಿದೆ - ಗೋವಿಂದ ಕಾರಜೋಳ, ಶಾಸಕ
ಬಿಜೆಪಿ ದೇಶವನ್ನೇ ಇಬ್ಭಾಗ ಮಾಡಲಿದೆ ಎಂಬ ಭಯದಲ್ಲಿದ್ದಾರೆ ಜನರು.

---------------------

ಉಪಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ -ಶೋಭಾ ಕರಂದ್ಲಾಜೆ, ಸಂಸದೆ
ಉಪಚುನಾವಣೆ ನಡೆಯುತ್ತಿರುವುದು ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಎಂದು ತಪ್ಪು ತಿಳಿದುಕೊಂಡಿದ್ದಾರೆ.

---------------------

ಮಹಾನುಭಾವರು ಜಾತಿ, ಪ್ರದೇಶಗಳಿಗೆ ಸೀಮಿತರಲ್ಲ -ಪ್ರಿಯಾಂಕ್ ಖರ್ಗೆ, ಸಚಿವ
ರಾಜಕಾರಣಿಗಳು ಅವರನ್ನು ಸೀಮಿತ ಮಾಡುತ್ತಾರೆ.

---------------------

ಶ್ರೀರಾಮುಲು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ -ವಿ.ಸೋಮಣ್ಣ, ಮಾಜಿ ಸಚಿವ
ಯಡಿಯೂರಪ್ಪ ಮುಂದಿನ ಪ್ರಧಾನಿಯೇ?

---------------------

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇದ್ದರೂ ಲೋಡ್‌ಶೆಡ್ಡಿಂಗ್ ಇಲ್ಲ - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಉಪಚುನಾವಣೆ ಮುಗಿಯುವವರೆಗೆ ಕಲಿದ್ದಲು ಕೊರತೆ ಬರಲಿಕ್ಕಿಲ್ಲ.

---------------------

ಮೋದಿ ಈಗ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಗಾಢ ನಿದ್ದೆಯಲ್ಲಿದೆ ಎನ್ನುವುದು ಅದರ ಮೇಲಿರುವ ಆರೋಪ.

---------------------

ಕ್ಷುಲ್ಲಕ ಕಾರಣಕ್ಕೆ ರಾಜೀನಾಮೆ ನೀಡುವ ಜಾಯಮಾನ ನನ್ನದಲ್ಲ - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಸಿದ್ದರಾಮಯ್ಯರು ‘ಮೀಟೂ’ ಆರೋಪ ಮಾಡಿದರೆ?

---------------------

‘ಅಚ್ಛೇ ದಿನ್’ ಎಂಬುದು ದೇಶದ ಬಹುದೊಡ್ಡ ಹಗರಣ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ರಫೇಲ್ ಹಗರಣವನ್ನು ಕೈ ಬಿಡಲಿದ್ದೀರಾ?

---------------------

ದೇವೇಗೌಡರು ಮೀಸಲು ಸೌಲಭ್ಯ ಕಲ್ಪಿಸದೇ ಇದ್ದಿದ್ದರೆ ಶ್ರೀರಾಮುಲು ಜನಪ್ರತಿನಿಧಿಯೇ ಆಗುತ್ತಿರಲಿಲ್ಲ -ಎಚ್.ಡಿ.ರೇವಣ್ಣ, ಸಚಿವ
ದೇವೇಗೌಡರು ತಮ್ಮ ಮನೆಯ ಜಮೀನಿನಲ್ಲಿ ಬೆಳೆಸಿದ ಬೆಳೆಯೇ ‘ಮೀಸಲು ಸೌಲಭ್ಯ’?

---------------------

ಭಾರತದ ಭವಿಷ್ಯ ತಂತ್ರಜ್ಞಾನದ ಮೇಲೆ ನಿಂತಿದೆ -ನರೇಂದ್ರ ಮೋದಿ, ಪ್ರಧಾನಿ
ಬಹುಶಃ ಅಮಿತ್ ಅವರ ‘ತಂತ್ರ’ ಜ್ಞಾನದ ಬಗ್ಗೆ ಹೇಳುತ್ತಿರಬೇಕು.

---------------------
ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ತಾಯಿಯ ಮಕ್ಕಳಿದ್ದಂತೆ -ಮಧು ಬಂಗಾರಪ್ಪ, ಶಿವಮೊಗ್ಗ ಲೋಕಸಭಾ ಅಭ್ಯರ್ಥಿ
ತಂದೆ ಮಾತ್ರ ಹಲವರಿದ್ದಾರೆ ಎಂದಾಯಿತು.

---------------------

ಶ್ರೀರಾಮುಲು ಮೊದಲು ಕಾಂಗ್ರೆಸಿಗರಾಗಿದ್ದರು -ಡಿ.ಕೆ.ಶಿವಕುಮಾರ್, ಸಚಿವ
ಅದು ಅವರ ಮೇಲಿರುವ ಅತಿ ದೊಡ್ಡ ಕಳಂಕವಂತೆ.

---------------------

ಎಚ್.ಡಿ.ದೇವೇಗೌಡರು ಸಿದ್ದರಾಮಯ್ಯರನ್ನು ಆಲಂಗಿಸಿಕೊಂಡಿರುವುದು ಮಹಾಭಾರತದಲ್ಲಿ ಧೃತರಾಷ್ಟ್ರ ಆಲಿಂಗನದಂತೆ -ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಹಿಂದೆ ಅವರ ಆಲಿಂಗನಕ್ಕೆ ಸಿಕ್ಕಾಗ ಹೇಗಿತ್ತು?

---------------------

ಹಿಂದುತ್ವಕ್ಕಾಗಿಯಾದರೂ ಶಿವಸೇನೆ ಬಿಜೆಪಿ ಜೊತೆ ಕೈ ಜೋಡಿಸಲಿ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ದೇಶದ ಏಳಿಗೆಗಾಗಿ ಯಾರು ಯಾರ ಜೊತೆ ಕೈ ಜೋಡಿಸಬೇಕು?

---------------------

ಯುವಕರು ಹಿಂದುತ್ವ ಮತ್ತು ರಾಷ್ಟ್ರೀಯತೆಯ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ -ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ಬೀದಿಯಲ್ಲಿ ದೊಣ್ಣೆ ಹಿಡಿದು ತಿರುಗಾಡುವುದು ಯುವಕರಿಗೆ ಸದಾ ಪ್ರಿಯ.

---------------------

ಜಾತಿಗೊಂದು ಸಂಘಟನೆಯಿಂದ ದೇಶದ ಅಖಂಡತೆಗೆ ಅಪಾಯ -ಎಸ್.ಅಂಗಾರ, ಶಾಸಕ
ಅಂಬೇಡ್ಕರ್ ಕೆಳ ಜಾತಿಯವರನ್ನು ಸಂಘಟಿಸದೇ ಇದ್ದಿದ್ದರೆ, ನೀವು ಶಾಸಕರಾಗುವುದು ಸಾಧ್ಯವಿತ್ತೇ?

---------------------

ಯಡಿಯೂರಪ್ಪ ಬಿಜೆಪಿಯ ಮಾಸ್‌ಲೀಡರ್ - ಪ್ರಹ್ಲಾದ್ ಜೋಷಿ, ಸಂಸದ
ಮೋಸದ ಲೀಡರ್ ಎಂದಂತಾಯಿತು.

---------------------

ಉಪಚುನಾವಣೆಗಳು ಲೋಕಸಭಾ ಚುನಾವಣೆಗೆ ದಿಕ್ಸೂಚಿಯಲ್ಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅಂದರೆ ಸೋಲಿನ ಸೂಚನೆಗಳು ಕಂಡಿವೆ.

---------------------

ಹಿಂದುತ್ವದ ಪ್ರತಿಪಾದನೆಯಿಂದ ಹಸಿದವರ ಹೊಟ್ಟೆ ತುಂಬದು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಹಸಿದ ರಾಜಕಾರಣಿಗಳ ಹೊಟ್ಟೆ ತುಂಬುವುದು.

---------------------

‘ವೀರಶೈವ’ ಮತ್ತು ‘ಲಿಂಗಾಯುತ’ ‘ಮುಸ್ಲಿಂ’ ಮತ್ತು ‘ಮೊಹಮ್ಮಡನ್’ ಇದ್ದಹಾಗೆ, ಎರಡೂ ಒಂದೇ -ಡಾ.ಎಂ.ಚಿದಾನಂದಮೂರ್ತಿ, ಸಂಶೋಧಕ
ಎರಡು ಒಂದೇ ಎಂದಾದ ಮೇಲೆ, ತಾವೇಕೆ ಟೋಪಿ ಧರಿಸಿ, ಗಡ್ಡ ಬಿಡಬಾರದು?

---------------------

ಇತಿಹಾಸ ತಿಳಿದವನು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ - ಯು.ಟಿ.ಖಾದರ್, ಸಚಿವ
ಯಾರ ಇತಿಹಾಸ ಎನ್ನುವುದು ಪ್ರಶ್ನೆ.
---------------------

ರಾಜಯೋಗ ಇದ್ದವರು ರಾಜಕೀಯದಲ್ಲಿ ಮೇಲೇರುತ್ತಾರೆ -ಮೋಟಮ್ಮ, ಮಾಜಿ ಸಚಿವೆ
ಆ ಯೋಗವನ್ನು ನಾನು ಕಲಿಸಿಕೊಡುತ್ತೇನೆ ಎಂದರಂತೆ ರಾಮ್‌ದೇವ್.

---------------------

ಎಚ್.ಡಿ.. ದೇವೇಗೌಡರು ಸ್ವಯಂ ಘೋಷಿತ ಮಣ್ಣಿನ ಮಗ -ಕೆ.ಎಸ್.ಈಶ್ವರಪ್ಪ, ಶಾಸಕ
ತಾವು ಬಿಜೆಪಿಯ ಪಾಲಿನ ಹುಣ್ಣಿನ ಮಗನೇ?

---------------------

ಇನ್ನೂ 100 ವರ್ಷ ಈ ದೇಶವನ್ನು ಬ್ರಿಟಿಷರೇ ಆಳಿದ್ದರೆ ಒಳ್ಳೆಯದಿತ್ತು - ಧರಂವೀರ್ ಸಿಂಗ್, ರಾಜಸ್ಥಾನ ಬಿಎಸ್ಪಿ ಅಧ್ಯಕ್ಷ
ನೇರವಾಗಿ ಬ್ರಿಟನ್‌ಗೇ ತೆರಳಿ ಬಿಡಿ. ಅಲ್ಲಿ ಅವರೇ ಆಳುತ್ತಿದ್ದಾರೆ.
 

share
ಪಿ.ಎ.ರೈ
ಪಿ.ಎ.ರೈ
Next Story
X