Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬೊಗಸೆಯೊಳಗೇ ಆಕಾಶವಾಗುವ

ಬೊಗಸೆಯೊಳಗೇ ಆಕಾಶವಾಗುವ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ29 Oct 2018 12:19 AM IST
share
ಬೊಗಸೆಯೊಳಗೇ ಆಕಾಶವಾಗುವ

ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ದಿನಗಳಲ್ಲಿ, ಎಲ್ಲವೂ ತಕ್ಷಣವೇ ದಕ್ಕಬೇಕು ಎನ್ನುವ ಹಂಬಲಿಕೆ ಜನರಲ್ಲಿ ತೀವ್ರವಾಗಿದೆ. ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ತಿಳಿದುಕೊಳ್ಳುವ ಹಂಬಲ ತೀವ್ರವಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲೂ ಇದು ವ್ಯಾಪಿಸಿದೆ. ಸುದೀರ್ಘ ಬರಹಗಳಿಗೆ ಓದುಗರು ಕಡಿಮೆಯಾಗುತ್ತಿದ್ದಾರೆ. ಹೇಳಬೇಕಾದುದನ್ನು ಅತ್ಯಂತ ಕಡಿಮೆ ಪದಗಳಲ್ಲಿ ಹೇಳುವವರು ಸಾಹಿತ್ಯಾಸಕ್ತರಿಗೂ ಬೇಕಾಗಿದ್ದಾರೆ. ಇದೇ ಸಂದರ್ಭದಲ್ಲಿ ಬರೆಯುವವರೂ ಇದೇ ತಂತ್ರವನ್ನು ಪ್ರಯೋಗಿಸಿ ಓದುಗರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬರಹಗಳನ್ನು ತಲುಪಿಸುವ ಅತ್ಯುತ್ತಮ ಮಾಧ್ಯಮವಾಗಿ ಬದಲಾವಣೆಯಾದ ಬಳಿಕ ಸಣ್ಣ ಸಣ್ಣ ಬರಹಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರಕುತ್ತಿದೆ. ಯಾಕೆಂದರೆ, ಪುಸ್ತಕವನ್ನು ಬಿಡಿಸಿಟ್ಟು ಗಂಟೆಗಟ್ಟಲೆ ಓದುವಂತೆ, ಸಾಮಾಜಿಕ ತಾಣಗಳಲ್ಲಿ ಓದಲು ಸಾಧ್ಯವಿಲ್ಲ. ಸಾಧ್ಯವಿದ್ದರೂ ಅಂತಹ ಸಹನೆ ಓದುಗರಲ್ಲೂ ಇಲ್ಲ. ಈ ಹಿನ್ನೆಲೆಯಲ್ಲೇ ಇರಬೇಕು, ಕನ್ನಡ ಸಾಹಿತ್ಯದಲ್ಲಿ ನ್ಯಾನೋ ಕತೆಗಳ ಪ್ರಯೋಗ ಹೆಚ್ಚಾಗುತ್ತಿವೆ. ಅತಿ ಸಣ್ಣದರಲ್ಲಿ ದೊಡ್ಜ ಅನುಭವವನ್ನು ಕೊಡುವ ಕತೆಗಳು ಇವು. ಕೆಲವೊಮ್ಮೆ ನಾಲ್ಕೇ ಸಾಲುಗಳು ಇರಬಹುದು. ಆದರೆ ಅದು ಓದುಗರನ್ನು ಓದಿದ ಬಳಿಕವೂ ನಿರಂತರ ಕಾಡುವಂತಿರಬೇಕು. ಅಂತಹ ಬರಹಗಳನ್ನು ಕೆಲವು ಸೃಜನಶೀಲ ಲೇಖಕರು ಪರಿಣಾಮಕಾರಿಯಾಗಿ ಸಾಮಾಜಿಕ ತಾಣಗಳ ಮೂಲಕ ಹಂಚುತ್ತಿದ್ದಾರೆ. ಆಶಾ ರಘು ಅವರ ‘ಬೊಗಸೆಯಲ್ಲಿ ಕಥೆಗಳು’ ಇದೇ ಸ್ವರೂಪದವುಗಳು. ಒಂದು ರೀತಿಯಲ್ಲಿ ಟೈಂಪಾಸ್ ಕತೆಗಳೂ ಹೌದು. ಎಲ್ಲಿ, ಯಾವಾಗ ಬೇಕಾದರೂ ಈ ಪುಸ್ತಕವನ್ನು ಬಿಡಿಸಿ ಒಂದೊಂದನ್ನೇ ತಮ್ಮದಾಗಿಸುತ್ತಾ ಹೋಗಬಹುದು. ಇದೇ ಸಂದರ್ಭದಲ್ಲಿ, ಇದರ ಒಳಧ್ವನಿಯನ್ನು ಗ್ರಹಿಸಿದರೆ, ಅದು ನಮ್ಮಾಳಗೇ ಇನ್ನಷ್ಟು ಬೆಳೆಯುತ್ತಾ ಸುದೀರ್ಘ ಕತೆಯಾಗಬಹುದು. ಆದರೆ ಲೇಖನ ಮತ್ತು ಓದುಗ ಜೊತೆಗೂಡಿ ಈ ಸಣ್ಣ ಕತೆಗಳನ್ನು ಬೆಳೆಸಬೇಕು. ಈ ಕೃತಿಯಲ್ಲಿ ಸುಮಾರು 160 ಕತೆಗಳಿವೆ. ರೂಪಕಗಳಲ್ಲಿ, ಒಗಟುಗಳಲ್ಲಿ, ಕೆಲವೊಮ್ಮೆ ಸಣ್ಣ ಪುಟ್ಟ ತಮಾಷೆಗಳಲ್ಲಿ ಈ ಕತೆಯ ಆತ್ಮ ಬಚ್ಚಿಟ್ಟುಕೊಂಡಿವೆ. ಕೆಲವು ಕತೆಗಳು ಝೆನ್ ಅನುಭವವನ್ನು ನೀಡಿದರೆ, ಹಲು ಕಾವ್ಯದ ಲಯಗಳನ್ನು ಹೊಂದಿವೆ.
ಅವ್ಯಕ್ತ ಎನ್ನುವ ಕತೆಯನ್ನೇ ತೆಗೆದುಕೊಳ್ಳೋಣ. ‘‘ಯುವಕರ ಗುಂಪೊಂದು ಸಮುದ್ರದ ತೀರದಲ್ಲಿ ಕುಳಿತಿದ್ದ ಅವನನ್ನು ವಿಚಾರಿಸಿಕೊಂಡು ಹೋದ ಮೇಲೆ, ವಯಸ್ಕನೊಬ್ಬ ಸಮೀಪಿಸಿ ಕೂತ. ‘ಅವರು ಹುಡುಕುತ್ತಿದ್ದುದು ತಂದೆಯ ಹೆಣವನ್ನೋ? ತಂದೆಯನ್ನೋ?’ ಎಂದು ಕೇಳಿದ ಆತ, ಉತ್ತರ ಮೊದಲನೆಯದೆಂದು ಬಾಯಿಯಿಂದ ಹೊರ ಬರುತ್ತಿದ್ದಂತೆ ಮುಖ ಕಪ್ಪಿಟ್ಟು, ಅವ್ಯಕ್ತ ವೇದನೆಯೊಂದಿಗೆ ದುಡುದುಡನೆದ್ದು ನಡೆದು ಬಿಟ್ಟ’. ಇಲ್ಲಿಗೆ ಒಂದು ಕತೆ ಮುಗಿಯುತ್ತದೆ. ಆದರೆ ಅದು ತೆರೆದಿಡುವ ವಾಸ್ತವ, ವಿಷಾದ ಮಾತ್ರ ಬೆಳೆಯುತ್ತದೆ. ಇಂತಹ ವಿಷಾದಭರಿತ ಹಲವು ಕತೆಗಳಿವೆ. ಹಾಗೆಯೇ, ಆಧ್ಯಾತ್ಮ, ಮಹಿಳಾ ಅಸ್ಮಿತೆಗಳನ್ನಿಟ್ಟು ಬರೆದ ಸಾಲುಗಳೂ ಇವೆ. ಇಲ್ಲಿ ಹೆಚ್ಚಿನವುಗಳು ಏನು ಎನ್ನುವುದು ಅರ್ಥವಾಗುವುದರೊಳಗೆ ಮನದೊಳಗೆ ನುಗ್ಗಿ ಆವರಿಸಿಕೊಳ್ಳುತ್ತವೆ. ಇದುವೇ ಇಲ್ಲಿರುವ ಹೆಚ್ಚಿನ ಕತೆಗಳ ಹೆಚ್ಚುಗಾರಿಕೆ.
ಸಾಹಿತ್ಯ ಲೋಕ ಪಬ್ಲಿಕೇಶನ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 196. ಬೆಲೆ 195. ಆಸಕ್ತರು 99459 39436 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯ
-ಕಾರುಣ್ಯ
Next Story
X