ಮಲ್ಪೆ ಬೀಚ್ನಲ್ಲಿ ಜೆಟ್ ಸ್ಕೀ, ಅಂಬುಲೆನ್ಸ್: ಜಿಲ್ಲಾಧಿಕಾರಿ
ಸೈಂಟ್ ಮೇರಿಸ್ಗೆ ಬೆಳಗ್ಗೆ 7ಕ್ಕೆ ಬೋಟ್ ಸೇವೆ ಪ್ರಾರಂಭಿಸಲು ಸೂಚನೆ
ಉಡುಪಿ, ಅ.31: ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಮಲ್ಪೆ ಸಮೀಪದ ಸೈಂಟ್ ಮೇರೀಸ್ ದ್ವೀಪಕ್ಕೆ ವಾರಾಂತ್ಯ ಹಾಗೂ ರಜಾ ದಿನಗಳಂದು ಬೆಳಗ್ಗೆ 7 ಗಂಟೆಗೆ ಬೋಟ್ಗಳ ಸಂಚಾರವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ಸೂಚಿಸಿದರು.
ತನ್ನ ಅಧ್ಯಕ್ಷತೆಯಲ್ಲಿ ನಡೆದ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಮಲ್ಪೆಯಿಂದ ಸೈಂಟ್ ಮೇರಿ ದ್ವೀಪಕ್ಕೆ ಈಗ ಬೆಳಗ್ಗೆ 9 ಗಂಟೆಗೆ ಬೋಟುಗಳ ಸಂಚಾರ ಪ್ರಾರಂಭಗೊಳ್ಳುತ್ತಿದೆ. ಪ್ರವಾಸಿಗರ ಜೀವ ಸುರಕ್ಷತೆ ದೃಷ್ಟಿಯಿಂದ ಮಲ್ಪೆಬೀಚ್ಗೆ ಒಂದು ಜೆಟ್ ಸ್ಕೀ ಹಾಗೂ ಅಂಬ್ಯುಲೆನ್ಸ್ ಖರೀದಿಸಲು ಸಭೆಯಲ್ಲಿ ತೀಮಾನಿಸಲಾಯಿತು. ಉಡುಪಿ ಕರಾವಳಿ ಬೈಪಾಸ್ನಿಂದ ಬಂದರು ಪ್ರವೇಶದ್ವಾರದವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸುವ ಪ್ರಸ್ತಾವವಿದ್ದು, ಈ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಅವಕಾಶ ಇರುವ ಬಂದರು ಇಲಾಖೆಗೆ ಸೇರಿದ ಖಾಲಿ ಜಾಗಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ, ಪ್ರವಾಸಿ ತಾಣಗಳಾಗಿ ಪರಿವರ್ತಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದೂ ಅವರು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಸ್ಥಳಗಳನ್ನು ಗುರುತಿಸಿ, ಯೋಜನೆ ರೂಪಿಸಲು ರಾಜ್ಯ ಸರಕಾರ ಈಗಾಗಲೇ ಸಮಾಲೋಚಕರನ್ನು ನೇಮಿಸಿದೆ. ಆದರೆ, ಹಲವೆಡೆ ಸೂಕ್ತ ಜಮೀನು ಲ್ಯವಿಲ್ಲದೇ, ಪ್ರವಾಸಿಗರಿಗೆ ಅಗತ್ಯ ಸೌಲ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ಸಾಕಷ್ಟು ಖಾಲಿ ಜಾಗಗಳು ಬಂದರು ಇಲಾಖೆಯ ಸ್ವಾಧೀನದಲ್ಲಿದೆ ಎಂದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ರೀತಿಯ ಯೋಜನೆ ಗಳೊಂದಿಗೆ ಮುಂದೆ ಬರುವ ಸಂಸ್ಥೆಗಳನ್ನು ಪಾರದರ್ಶಕ ಮಾದರಿಯಲ್ಲಿ ಗುರುತಿಸಿ, ಬಂದರು ಇಲಾಖೆಗೆ ರವಾನಿಸಲಿದೆ. ಅಲ್ಲಿಂದ ಜಮೀನು ಲೀಸ್ಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ ಬಂದರು ಇಲಾಖೆಯ ಸ್ವಾಧೀನದಲ್ಲಿರುವ ಖಾಲಿ ಜಮೀನುಗಳ ಪಟ್ಟಿಯನ್ನು ನೀಡಬೇಕು. ಬಂದರು ಇಲಾಖೆ ಯಾವುದೇ ಜಾಗವನ್ನು ನೇರವಾಗಿ ಪ್ರವಾಸಿ ಸಂಸ್ಥೆಗಳಿಗೆ ನೀಡುವಂತಿಲ್ಲ ಎಂದು ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಬಂದರು ಇಲಾಖೆಯ ಸ್ವಾಧೀನದಲ್ಲಿರುವ ಖಾಲಿ ಜಮೀನುಗಳ ಪಟ್ಟಿಯನ್ನು ನೀಡಬೇಕು. ಬಂದರು ಇಲಾಖೆ ಯಾವುದೇ ಜಾಗವನ್ನು ನೇರವಾಗಿ ಪ್ರವಾಸಿ ಸಂಸ್ಥೆಗಳಿಗೆ ನೀಡುವಂತಿಲ್ಲ ಎಂದು ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದಿಗೆ ಸರಕಾರಿ ಜಾಗ ಲ್ಯವಿಲ್ಲದಿದ್ದಲ್ಲಿ, ಅಗತ್ಯ ಬಿದ್ದರೆ ಖಾಸಗಿ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದರು. ಕುಂದಾಪುರ ಕೋಡಿ ಹಾಗೂ ಗಂಗೊಳ್ಳಿಯ ಸಮುದ್ರದಲ್ಲಿ ನಿರ್ಮಿಸಲಾಗಿರುವ ಬ್ರೇಕ್ವಾಟರ್ಗಳಲ್ಲಿ ಮಲ್ಪೆ ಮಾದರಿಯಲ್ಲಿ ಸೀ ವಾಕ್ ಮತ್ತಿತರ ಸೌಲಭ್ಯ ನಿರ್ಮಿಸುವ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ತಿಳಿಸಿದರು.
ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.







