Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದಣಿದು ನಿದ್ದೆ ಹೋದವಳು ಎಚ್ಚರಗೊಂಡ ಮೇಲೆ...

ದಣಿದು ನಿದ್ದೆ ಹೋದವಳು ಎಚ್ಚರಗೊಂಡ ಮೇಲೆ ಎರಡೂ ಕಾಲುಗಳನ್ನು ಕಳೆದುಕೊಂಡಳು

ಬದುಕನ್ನೇ ಬದಲಿಸಿತು ಸಣ್ಣತಪ್ಪು

ವಾರ್ತಾಭಾರತಿವಾರ್ತಾಭಾರತಿ5 Nov 2018 9:23 PM IST
share
ದಣಿದು ನಿದ್ದೆ ಹೋದವಳು ಎಚ್ಚರಗೊಂಡ ಮೇಲೆ ಎರಡೂ ಕಾಲುಗಳನ್ನು ಕಳೆದುಕೊಂಡಳು

ಜೀವನದಲ್ಲಿ ಒಮ್ಮೆ ಯಶಸ್ವಿಯಾದ ಬಳಿಕ ಹಿಂದಿರುಗಿ ನೋಡುವ ಸಂದರ್ಭವೇ ಬರುವುದಿಲ್ಲ ಎಂದು ನಾವು ಭಾವಿಸಿರುತ್ತೇವೆ. ಆದರೆ ಯಾವುದಾದರೂ ಅನಿರೀಕ್ಷಿತ ಆಕಸ್ಮಿಕಕ್ಕೆ ಗುರಿಯಾದ ಬಳಿಕ ನಮ್ಮ ಪರಿಪೂರ್ಣ ಬದುಕು ಕುಸಿದುಬಿದ್ದರೆ ಹೇಗಾಗಬಹುದು?

ಇಲ್ಲಿದೆ ಯಶಸ್ವಿ ಮಾಡೆಲ್‌ವೋರ್ವಳು ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಟಿಎಸ್‌ಎಸ್)ನಿಂದ ಪೀಡಿತಳಾಗಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಪರೂಪದಲ್ಲಿಯೇ ಅಪರೂಪವೆನ್ನಿಸುವ ಪ್ರಕರಣ. ಕಾಯಿಲೆಯಿಂದ ತನ್ನ ಒಂದಾದರೂ ಕಾಲನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ವಿಫಲಗೊಂಡ ಅಮೆರಿಕದ ಲಾಸ್ ಏಂಜೆಲ್ಸ್‌ನ ಮಾಡೆಲ್ ಲಾರೆನ್ ವಾಸೆರ್‌ಳ ವಿಲಕ್ಷಣ ಬದುಕಿನ ವಿವರಗಳಿಲ್ಲಿವೆ.

ಲಾರೆನ್ 2012ರಲ್ಲಿ ಮೊದಲಬಾರಿಗೆ ತನ್ನ ದುರಂತಕಥೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಳು. ಆಗ ಇನ್ನೂ 24ರ ಹರೆಯದಲ್ಲಿದ್ದ ಲಾರೆನ್ ಋತುಸ್ರಾವವನ್ನು ಹೀರಿಕೊಳ್ಳುವ ಪುಟ್ಟ ಸಾಧನ ಟಾಂಪನ್ ಸಂಬಂಧಿತ ಟಿಎಸ್‌ಎಸ್‌ನಿಂದ ಪೀಡಿತಳಾಗಿದ್ದಳು. ಆರಂಭದಲ್ಲಿ ಬಲಗಾಲು ಮತ್ತು ಎಡಗಾಲಿನ ಬೆರಳುಗಳನ್ನು ಕಳೆದುಕೊಂಡಿದ್ದ ಆಕೆ,ನಂತರದ ವರ್ಷಗಳಲ್ಲಿ ಇನ್ನೊಂದು ಕಾಲನ್ನೂ ಕಳೆದುಕೊಂಡಿದ್ದಾಳೆ.

  ಅದೊಂದು ದಿನ ಲಾರೆನ್ ಪಾಲಿಗೆ ಅತ್ಯಂತ ದುರದೃಷ್ಟಕರವಾಗಿತ್ತು. ಯಶಸ್ವಿ ಮಾಡೆಲ್ ಆಗಿದ್ದ ಆಕೆ ತುಂಬ ದಣಿದಿದ್ದಳು. ಹೀಗಾಗಿ ದಿನವಿಡೀ ತಾನು ಧರಿಸಿದ್ದ ಟಾಂಪನ್ ಅನ್ನು ತೆಗೆಯುವುದನ್ನು ಮರೆತು ನಿದ್ರಿಸಿದ್ದಳು. ಪರಿಣಾಮವಾಗಿ ಆಕೆಯ ಕಾಲು ಗ್ಯಾಂಗ್ರಿನ್‌ಗೆ ಗುರಿಯಾಗಿತ್ತು. ಮರುದಿನದಿಂದ ಅವಳನ್ನು ಒಂದೂವರೆ ವಾರ ಕಾಲ ವೈದ್ಯಕೀಯ ಕೋಮಾದಲ್ಲಿರಿಸಲಾಗಿತ್ತು. ಆಕೆಯ ಸ್ಥಿತಿ ಎಷ್ಟೊಂದು ಹದಗೆಟ್ಟಿತ್ತೆಂದರೆ ಒಂದೋ ಆಕೆ ತನ್ನ ಕಾಲನ್ನು ಕಳೆದುಕೊಳ್ಳಬೇಕಿತ್ತು ಇಲ್ಲವೇ ಜೀವವನ್ನೇ ಕಳೆದುಕೊಳ್ಳಬೇಕಿತ್ತು. ಇದನ್ನು ಆಕೆಗೆ ಸ್ಪಷ್ಟವಾಗಿ ತಿಳಿಸಿದ್ದ ವೈದ್ಯರು ಆಯ್ಕೆಯನ್ನು ಆಕೆಗೇ ಬಿಟ್ಟಿದ್ದರು.

ಆಸ್ಪತ್ರೆಯ ಹಾಸಿಗೆಯಲ್ಲಿ ಆಕೆ ಎಚ್ಚೆತ್ತಾಗ ಸೋಂಕು ಅದಾಗಲೇ ಆಕೆಯ ಇಡೀ ಶರೀರಕ್ಕೆ ಹರಡಿತ್ತು ಮತ್ತು ಶರೀರದಲ್ಲಿ ಸಂಗ್ರಹಗೊಂಡಿದ್ದ ಹೆಚ್ಚುವರಿ ನಂಜನ್ನು ಹೊರಹಾಕಲು ಅದು ಪ್ರಯತ್ನಿಸುತ್ತಿತ್ತು. ಹೀಗಾಗಿ ಆಕೆಯ ದೇಹತೂಕ ವಾಸ್ತವದಲ್ಲಿ ಇದ್ದಿದ್ದಕ್ಕಿಂತ 80 ಪೌಂಡ್‌ಗಳಷ್ಟು ಹೆಚ್ಚಾಗಿತ್ತು. ತನ್ನ ಒಂದು ಕಾಲನ್ನು ಆಕೆ ಕಳೆದುಕೊಳ್ಳಲೇಬೇಕಿತ್ತು ಮತ್ತು ಇನ್ನೊಂದು ಕಾಲನ್ನಾದರೂ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಳು.

ತನ್ನ ಬಲಗಾಲನ್ನು ಕತ್ತರಿಸಲಾದ ಮೊದಲ ಶಸ್ತ್ರಚಿಕಿತ್ಸೆಯ ಕೆಲವು ತಿಂಗಳುಗಳ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದ ಲಾರೆನ್,ತನ್ನ ನೋವು ಇನ್ನಷ್ಟು ಹೆಚ್ಚಾಗಿದೆ ಮತ್ತು ತನ್ನ ಎರಡನೇ ಕಾಲನ್ನೂ ವೈದ್ಯರು ಕತ್ತರಿಸುತ್ತಾರೆ ಎನ್ನುವುದು ತನಗೆ ಗೊತ್ತಾಗಿದೆ ಎಂದು ಹೇಳಿದ್ದಳು. ಅಂದ ಹಾಗೆ ಆಕೆಯ ಎಡಪಾದದಲ್ಲಿ ತೆರೆದ ಹುಣ್ಣೊಂದು ಆಗಿತ್ತು. ಏನು ಮಾಡಿದರೂ ಅದು ಗುಣವಾಗಿರಲಿಲ್ಲ ಮತ್ತು ಬೆರಳುಗಳೂ ಉಳಿದಿರಲಿಲ್ಲ. ಇದರಿಂದಾಗಿ ಆಕೆ ತೀವ್ರ ನೋವನ್ನು ಅನುಭವಿಸುತ್ತಿದ್ದಳು. ತನ್ನ ಕಾಲನ್ನು ರಕ್ಷಿಸಿಕೊಳ್ಳಲು ತಾನು ಮಾಡಬಹುದಾದ ಯಾವುದೂ ಉಳಿದಿಲ್ಲ ಎಂಬ ಷರಾದೊಂದಿಗೆ ಲಾರೆನ್ ತನ್ನ ಪೋಸ್ಟ್‌ನ್ನು ಅಂತ್ಯಗೊಳಿಸಿದ್ದಳು.

 ಕಳೆದ ವರ್ಷ ಲಾರೆನ್‌ಳ ಇನ್ನೊಂದು ಕಾಲನ್ನೂ ವೈದ್ಯರು ಕತ್ತರಿಸಿ ತೆಗೆದ ಬಳಿಕ ತನ್ನ ಎಲ್ಲ ನೋವು,ಕಳವಳಗಳಿಂದ ಮುಕ್ತಳಾಗಿರುವ ಆಕೆ ಕೃತಕ ಕಾಲುಗಳನ್ನು ಅಳವಡಿಸಿಕೊಂಡು ವಿವಿಧ ಏಜೆನ್ಸಿಗಳು ಮತ್ತು ಕಂಪನಿಗಳಿಗೆ ಮಾಡೆಲ್ ಆಗಿ ದುಡಿಯುತ್ತಿದ್ದಾಳೆ. ಟಿಎಸ್‌ಎಸ್ ಬಗ್ಗೆ ಮತ್ತು ಮಹಿಳೆಯರ ಮೇಲೆ ಟಾಂಪೂನ್‌ನ ದುಷ್ಪರಿಣಾಮಗಳ ಬಗೆ ಅರಿವು ಮೂಡಿಸಲು ಆಕೆ ತನ್ನ ಮಾಡೆಲಿಂಗ್ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾಳೆ.

ರಾಬಿನ್ ಡೇನಿಯಲ್ಸನ್ ಕಾಯ್ದೆಯ ಹೆಸರಿನಲ್ಲಿ ಟಿಎಸ್‌ಎಸ್ ಕುರಿತು ಮಸೂದೆಯೊಂದನ್ನು ಅಂಗೀಕರಿಸುವಂತೆ ಅಮೆರಿಕ ಸರಕಾರದ ಮೇಲೆ ಒತ್ತಡ ಹೇರಲು ಅಭಿಯಾನವೊಂದನ್ನೂ ಲಾರೆನ್ ನಡೆಸುತ್ತಿದ್ದಾಳೆ. ತಾನು ಅನುಭವಿಸಿದ್ದ ಸ್ಥಿತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಕಾಯ್ದೆ ರಚನೆಯ ಹಿಂದಿನ ಆಕೆಯ ಉದ್ದೇಶವಾಗಿದೆ.1998ರಲ್ಲಿ ಟಿಎಸ್‌ಎಸ್‌ನಿಂದ ಸಾವನ್ನಪ್ಪಿದ್ದ ಮಹಿಳೆಯ ಹೆಸರನ್ನೇ ಆಕೆ ಈ ಮಸೂದೆಗೆ ಇರಿಸಿದ್ದಾಳೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X