ಎಲ್ಲರೂ ಒಮ್ಮೆ ಸೋಲುತ್ತಾರೆ, ಒಮ್ಮೆ ಗೆಲ್ಲುತ್ತಾರೆ ನಾವು ಗೆದ್ದಿದ್ದೇವೆಂದು ಹಿಗ್ಗುವುದಿಲ್ಲ: ಡಿಕೆಶಿ
ಬೆಂಗಳೂರು, ನ.6: ಎಲ್ಲರೂ ಒಮ್ಮೆ ಸೋಲುತ್ತಾರೆ ಒಮ್ಮೆ ಗೆಲ್ಲುತ್ತಾರೆ ನಾವು ಗೆದ್ದಿದ್ದೇವೆಂದು ಹಿಗ್ಗುವುದಿಲ್ಲ. ಬಳ್ಳಾರಿ ಗೆಲುವಿನಿಂದ ಜವಾಬ್ದಾರಿ ಜಾಸ್ತಿಯಾಗಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಚುನಾವಣೆಯಲ್ಲಿ ಗೆಲುವು ಸೋಲು ಸಹಜ. ಶಾಂತ ರೀತಿಯ ಚುನಾವಣೆಗೆ ಅವಕಾಶ ಮಾಡಿಕೊಟ್ಟಿರುವ ಶಾಸಕ ಶ್ರೀರಾಮುಲು ಅಣ್ಣನಿಗೆ ನನ್ನ ಧನ್ಯವಾದ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷ ಬಳ್ಳಾರಿ ಕ್ಷೇತ್ರದ ಜವಾಬ್ದಾರಿ ನನಗೆ ನೀಡಿತ್ತು. ನನ್ನ 'ಬಾಂಬ್ ' ಬಳ್ಳಾರಿ ಅಭಿವೃದ್ಧಿ. ನನ್ನ ಯೋಜನೆ ಹಾಗೂ ಗುರಿ ಬಳ್ಳಾರಿಯ ಅಭಿವೃದ್ಧಿ ಎಂದರು.
ನಮ್ಮ ಪಕ್ಷದ ಶಾಸಕರ ನಿಲುವಿಗೆ ನಾವು ತಲೆ ಬಾಗುತ್ತೇವೆ ಎಂದು ಡಿಕೆಶಿ ಹೇಳಿದರು.
Next Story