ನೋಟು ರದ್ದತಿ ಸ್ವಯಂ ಮಾಡಿಕೊಂಡ ಗಾಯ: ಕೇಜ್ರಿವಾಲ್
ಹೊಸದಿಲ್ಲಿ, ನ.8: ಮೋದಿ ಸರಕಾರದ ನೋಟು ರದ್ದತಿ ನಿರ್ಧಾರಕ್ಕೆ ತಾರ್ಕಿಕ ಆಧಾರವೇನಿತ್ತು ಎಂದು ಪ್ರಶ್ನಿಸಿರುವ ಆಮ್ ಆದ್ಮಿ ಪಕ್ಷ(ಆಪ್)ದ ಸಂಚಾಲಕ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನೋಟು ರದ್ದತಿ ನಿರ್ಧಾರ ಭಾರತದ ಅರ್ಥವ್ಯವಸ್ಥೆಯ ಮೇಲೆ ಸ್ವಯಂ ನಿರ್ಮಿಸಿಕೊಂಡ ಆಳವಾದ ಗಾಯವಾಗಿದೆ ಎಂದು ಬಣ್ಣಿಸಿದ್ದಾರೆ.
ಮೋದಿ ಸರಕಾರದ ಆರ್ಥಿಕ ಹಗರಣಗಳು ಅನಂತವಾಗಿದ್ದರೂ ನೋಟು ರದ್ದತಿ ಎಂಬುದು ಭಾರತದ ಅರ್ಥವ್ಯವಸ್ಥೆಯ ಮೇಲೆ ಸ್ವಯಂ ಮಾಡಿಕೊಂಡಿರುವ ಗಾಯವಾಗಿದೆ. ದೇಶವನ್ನು ಈ ರೀತಿಯ ಸಂಕಟಮಯ ಪರಿಸ್ಥಿತಿಗೆ ಯಾಕೆ ತಳ್ಳಲಾಯಿತು ಎಂಬ ಪ್ರಶ್ನೆ ಎರಡು ವರ್ಷದ ಬಳಿಕವೂ ನಿಗೂಢವಾಗಿಯೇ ಉಳಿದಿದೆ ಎಂದು ಕೇಜ್ರಿವಾಲ್ ಹೇಳಿದರು.
Next Story