Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಟಿಎಂ ಮುಂದೆ ನಿಂತು ಸಾವನ್ನಪ್ಪಿದವರನ್ನು...

ಎಟಿಎಂ ಮುಂದೆ ನಿಂತು ಸಾವನ್ನಪ್ಪಿದವರನ್ನು ದೇಶ ಎಂದೂ ಮರೆಯದು: ರಾಹುಲ್

“ನೋಟು ರದ್ದತಿ ಕ್ರಿಮಿನಲ್ ಹಗರಣ”

ವಾರ್ತಾಭಾರತಿವಾರ್ತಾಭಾರತಿ8 Nov 2018 10:53 PM IST
share
ಎಟಿಎಂ ಮುಂದೆ ನಿಂತು ಸಾವನ್ನಪ್ಪಿದವರನ್ನು ದೇಶ ಎಂದೂ ಮರೆಯದು: ರಾಹುಲ್

ಹೊಸದಿಲ್ಲಿ, ನ.8: ನೋಟು ರದ್ದತಿ ಎಂಬುದು ಸ್ವಯಂ ನಿರ್ಮಿತ ದುರಂತವಾಗಿದ್ದು, ದೇಶದ ಮಿಲಿಯಾಂತರ ಜನರ ಬದುಕಿನ ಮೇಲೆ ನಡೆಸಿದ ಆತ್ಮಹತ್ಯಾ ದಾಳಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನೋಟು ರದ್ದತಿಯ ಎರಡನೇ ವರ್ಷಾಚರಣೆ ಸಂದರ್ಭ ಹೇಳಿಕೆ ನೀಡಿರುವ ರಾಹುಲ್, ನವೆಂಬರ್ 8 ಭಾರತದ ಇತಿಹಾಸದಲ್ಲಿ ನಿರಾಶಾದಾಯಕ ದಿನವೆಂದು ದಾಖಲಾಗಲಿದೆ. ಈ ದಿನದಂದು ಪ್ರಧಾನಿ ಮೋದಿ ದೇಶದ ಮೇಲೆ ನೋಟು ರದ್ದತಿ ಎಂಬ ದಬ್ಬಾಳಿಕೆಯನ್ನು ನಡೆಸಿದರು. ನವೆಂಬರ್ 8ರಂದು ರಾತ್ರಿ 8 ಗಂಟೆಗೆ ಟಿವಿ ಪರದೆಯ ಮೇಲೆ ಕಾಣಿಸಿಕೊಂಡ ಮೋದಿ ಏಕಪಕ್ಷೀಯ ಘೋಷಣೆ ಮಾಡಿದರು. ಇದಕ್ಕೆ ಮೋದಿಯವರ ಆರ್ಥಿಕ ಸಲಹೆಗಾರರ ಬೆಂಬಲವೂ ಇರಲಿಲ್ಲ. ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.86ರಷ್ಟು ಕರೆನ್ಸಿಯನ್ನು ಮೋದಿ ಹಿಂಪಡೆದರು. ಇದರಿಂದ ದೇಶದ ಅರ್ಥವ್ಯವಸ್ಥೆ ಸ್ಥಗಿತಗೊಂಡಿತು ಎಂದರು.

ನೋಟು ಬದಲಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತು ಸಾವನ್ನಪ್ಪಿದ 120ಕ್ಕೂ ಅಧಿಕ ಭಾರತೀಯರನ್ನು ಈ ದೇಶ ಎಂದಿಗೂ ಮರೆಯದು ಎಂದ ಅವರು, ಈ ಹಿಂದೆಯೂ ದೇಶ ಹಲವು ದುರಂತಗಳನ್ನು ಎದುರಿಸಿದೆ. ಆದರೆ ನೋಟು ರದ್ದತಿ ಇದೆಲ್ಲವನ್ನೂ ಮೀರಿಸಿದ ದುರಂತವಾಗಿದೆ. ಇದು ದೇಶದ ಮಿಲಿಯಾಂತರ ಸಣ್ಣ ಉದ್ದಿಮೆಗಳನ್ನು ವಿನಾಶಗೊಳಿಸಿತು ಎಂದರು. ನೋಟು ರದ್ದತಿ ಎಂಬುದು ಗೊತ್ತುಪಾಡಿಲ್ಲದ ವಿಪತ್ತು ಆಗಿದ್ದು, ಉದ್ದೇಶಿತ ಗುರಿಯಲ್ಲಿ ಒಂದು ಅಂಶವನ್ನೂ ಸಾಧಿಸಲು ವಿಫಲವಾಗಿದೆ ಎಂದು ವಿಶ್ವದಾದ್ಯಂತದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು ಎಂದು ರಾಹುಲ್ ನುಡಿದರು.

ಪ್ರಧಾನಿಯವರ ಚಿರಸ್ಥಾಯೀ ಪ್ರಮಾದದ ದ್ವಿತೀಯ ವರ್ಷಾಚರಣೆಯ ಸಂದರ್ಭ ನಮ್ಮ ಅಸಮರ್ಥ ವಿತ್ತ ಸಚಿವರೂ ಸೇರಿದಂತೆ ಸರಕಾರದ ಹೊಗಳುಭಟರು ಕ್ರಿಮಿನಲ್ ಕಾರ್ಯನೀತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ನೋಟು ರದ್ದತಿ ಎಂಬುದು ದುರುದ್ದೇಶಪೂರಿತ, ಕೆಟ್ಟದಾಗಿ ಅನುಷ್ಠಾನಗೊಳಿಸಲಾದ ಕ್ರಿಮಿನಲ್ ಹಗರಣ ಎಂಬ ಸತ್ಯವನ್ನು ಸರಕಾರ ಅಡಗಿಸಿಡಲು ವ್ಯರ್ಥ ಪ್ರಯತ್ನ ನಡೆಸುತ್ತಿದೆ ಎಂದವರು ಟೀಕಿಸಿದರು. ನೋಟು ರದ್ದತಿಯ ಹಿಂದಿರುವ ಪೂರ್ಣ ಸತ್ಯ ಬಯಲಾಗುವವರೆಗೆ ಭಾರತೀಯರು ವಿಶ್ರಾಂತಿ ಪಡೆಯುವುದಿಲ್ಲ ಎಂದು ರಾಹುಲ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X