ಸಚಿವ ಝಮೀರ್ ಅಹ್ಮದ್ ನಾಳೆ ಉಡುಪಿಗೆ
ಉಡುಪಿ, ನ.15: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ನ.17ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ನ.17ರ ಶನಿವಾರ ಬೆಳಗ್ಗೆ 10 ಗಂಟೆಗೆ ಕಾಪುವಿನ ಮುಳೂರು ಸುನ್ನಿ ಕೇಂದ್ರಕ್ಕೆ ಭೇಟಿ ನೀಡುವ ಸಚಿವರು 11:00ಗಂಟೆಗೆ ಉಡುಪಿಯ ವಕ್ಫ್ ಮಂಡಳಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಲಿರುವರು. ಅಪರಾಹ್ನ 12ರಿಂದ 1ಗಂಟೆಯವರೆಗೆ ಪಕ್ಷದ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. 1:15ಕ್ಕೆ ಉಡುಪಿಯ ಬಿಷಪ್ರನ್ನು ಭೇಟಿ ಮಾಡಿ ಚರ್ಚಿಸಿ, 2:00ಗಂಟೆಗೆ ಕುಂದಾಪುರಕ್ಕೆ ತೆರಳುವರು. ಕುಂದಾಪುರದ ಜುಮ್ಮಾ ಮಸೀದಿಗೆ ಭೇಟಿದ ಬಳಿಕ 3:00ಕ್ಕೆ ನಾವುಂದದ ಐಸ್ಪ್ಲಾಟ್ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4:45ಕ್ಕೆ ಬ್ರಹ್ಮಾವರದ ಉಪ್ಪಿನಕೋಟೆಯಲ್ಲಿರುವ ಜುಮ್ಮಾ ಮಸೀದಿಗೆ ಭೇಟಿ ನೀಡಿದ ಬಳಿಕ ಮಂಗಳೂರಿಗೆ ತೆರಳುವರು.
Next Story