ಬೆಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮನೆ ಬಿಟ್ಟ ವಿದ್ಯಾರ್ಥಿ
ಬೆಂಗಳೂರು, ನ.18: ಪರೀಕ್ಷೆಯಲ್ಲಿ ಸರಿಯಾಗಿ ಅಂಕ ಗಳಿಸಿಲ್ಲ ಎಂಬ ಕಾರಣದಿಂದ ಕುಟುಂಬಸ್ಥರಿಗೆ ಹೆದರಿ 8ನೆ ತರಗತಿಯ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಬಾವಿಯ ಆಕ್ಸ್ಫರ್ಡ್ ಯೂನಿವರ್ಸಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ರಂಜಿತ್ ಗೌಡ(14) ಕಾಣೆಯಾಗಿದ್ದು, ಈ ಬಗ್ಗೆ ಬಾಲಕನ ತಂದೆ ಕೆಂಪಣ್ಣ ಅವರು ದೂರು ನೀಡಿದ್ದಾರೆ ಎನ್ನಲಾಗಿದೆ.
ಹೊಯ್ಸಳ ನಗರದಲ್ಲಿ ಮೂವರು ಮಕ್ಕಳು ಹಾಗೂ ಪತ್ನಿ ಜತೆ ವಾಸವಾಗಿರುವ ಕೆಂಪಣ್ಣ ಅವರು ವೃತ್ತಿಯಲ್ಲಿ ಚಾಲಕರಾಗಿದ್ದಾರೆ. ಮೊದಲನೆಯ ಪುತ್ರ ರಂಜಿತ್ ಶನಿವಾರ ಎಂದಿನಂತೆ ಶಾಲೆಗೆ ತೆರಳಿದ್ದಾನೆ. ಮನೆಗೆ ಬಂದು ನಂತರ ಮನೆಪಾಠಕ್ಕಾಗಿ ತೆರಳುವುದಾಗಿ ಹೋದ ಆತ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.
Next Story