Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ....

ಓ ಮೆಣಸೇ....

ಪಿ.ಎ.ರೈಪಿ.ಎ.ರೈ19 Nov 2018 12:13 AM IST
share
ಓ ಮೆಣಸೇ....

ಯಡಿಯೂರಪ್ಪರಿಗೆ ಕಣ್ಣು ಮುಚ್ಚಿದರೆ ಸಾಕು ವಿಧಾನ ಸೌಧದ ಮೂರನೇ ಮಹಡಿಯೇ ಕಾಣುತ್ತದೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅದಕ್ಕಾಗಿಯೇ ಇರಬೇಕು, ಬಿಜೆಪಿಯಲ್ಲಿ ಅವರು ಕಣ್ಣು ಮುಚ್ಚುವುದಕ್ಕೆ ಹಲವರು ಕಾಯುತ್ತಿರುತ್ತಾರೆ.

---------------------
  ನಾನು ರಾಜಕಾರಣಿ ಆಗಿರುವ ಜೊತೆಗೆ ಪತ್ನಿಗೆ ಗಂಡನೂ ಹೌದು, ಮಗಳಿಗೆ ಅಪ್ಪನೂ ಹೌದು - ಪ್ರತಾಪ್‌ಸಿಂಹ, ಸಂಸದ
ತಾವು ಸಂಪಾದಿಸಿರುವ ಸಂಪತ್ತಿಗೆ ಸಮರ್ಥನೆಯೇ?
---------------------
ರಾಹುಲ್ ಗಾಂಧಿ ಜನರಿಗೆ ಒಂಥರ ಮನರಂಜನೆ ಇದ್ದಂತೆ - ರಮಣಸಿಂಗ್, ಛತ್ತೀಸ್‌ಗಡ ಮುಖ್ಯಮಂತ್ರಿ
ಮೋದಿಯೆಂದರೆ ಹಾರರ್ ಸಿನೆಮಾ.

---------------------
  ಛತ್ತೀಸ್‌ಗಡ ಈಗ ಮಾವೋ ಮುಕ್ತ ರಾಜ್ಯವಾಗುತ್ತಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ದೇಶ ಮಾತ್ರ ಸಂಘಪರಿವಾರ ಉಗ್ರರ ಆಡುಂಬೊಲವಾಗುತ್ತಿದೆ.

---------------------
ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿ ಹಾಳಾದರು. ಈಗ ಬಿಜೆಪಿಗೆ ಬಂದ ಮೇಲೆ ಉದ್ಧಾರವಾಗಿದ್ದಾರೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ಅವರು ಉದ್ಧಾರವಾಗಲು ನೀವು ಎಲ್ಲಿ ಬಿಟ್ಟಿದ್ದೀರಿ?
---------------------
  ಶ್ರೀರಾಮನಿಗೆ ಬೇಕು ಅನಿಸಿದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುವುದು - ದಿನೇಶ್‌ಶರ್ಮಾ, ಉ.ಪ್ರ.ಮುಖ್ಯಮಂತ್ರಿ
ಶ್ರೀರಾಮನಿಗೆ ಬೇಕು ಅನ್ನಿಸಬೇಕಾದರೆ ಚುನಾವಣೆ ಹತ್ತಿರ ಬರಬೇಕು.

---------------------
  ಮೋದಿ ವಿರುದ್ಧ ಒಟ್ಟಾಗಿ ನಿಂತಿರುವ ಹತ್ತು ಮಂದಿ ನಾಯಕರಿಗಿಂತಲೂ ಅವರು ಬಲಿಷ್ಟ
-ರಜನಿಕಾಂತ್, ನಟ
 ವಿಶ್ವದಲ್ಲಿ ರಜನೀಕಾಂತ್ ಬಳಿಕ ನರೇಂದ್ರ ಮೋದಿಯೇ ಬಲಿಷ್ಟ ಎನ್ನುವುದು ಹೊಸ ಜೋಕು.

---------------------
  ಮಾಯಾವತಿ ಪ್ರಧಾನ ಮಂತ್ರಿಯಾಗುವುದಾದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ತಪ್ಪಲ್ಲ -ಎನ್.ಮಹೇಶ್ ಮಾಜಿ ಸಚಿವ
ಪ್ರಧಾನಮಂತ್ರಿಯಾಗುವುದಾದರೆ ನಾವೇ ರಾಮಮಂದಿರ ಕಟ್ಟಿಸಿಕೊಡುತ್ತೇವೆ ಎಂದು ಹೇಳಲಿಲ್ಲವಲ್ಲ.

---------------------
ಖಾಸಗಿ ಬ್ಯಾಂಕುಗಳಿಂದ ರೈತರ ಶೋಷಣೆ ಸಹಿಸುವುದಿಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ
  ಮತ್ತಾವ ಬ್ಯಾಂಕುಗಳಿಂದ ಶೋಷಣೆಯನ್ನು ಸಹಿಸುತ್ತೀರಿ?
---------------------
ಆಯುರ್ವೇದವು ದೇಶದ ಸಂಸ್ಕೃತಿ, ಜೀವನ ಶೈಲಿಯಾಗಿದೆ - ದಿನೇಶ್‌ಗುಂಡೂರಾವ್, ಶಾಸಕ
  ಆದರೆ ಪರಿಣಾಕಾರಿ ಔಷಧಿಯಾಗುವುದು ಮೊದಲ ಅಗತ್ಯವಲ್ಲವೇ?

---------------------
ರಾಕ್ಷಸರ ರಾಜ್ಯದಲ್ಲಿರುವ ಪುಣ್ಯಕೋಟಿ ನಾನು - ಜನಾರ್ದನ ರೆಡ್ಡಿ. ಮಾಜಿ ಸಚಿವ
ಕೋಟಿ ಕೋಟಿ ಹಣ ಸಂಗ್ರಹಿಸಿದ ಕಾರಣಕ್ಕಿರಬೇಕು.

---------------------
ನರೇಂದ್ರ ಮೋದಿ ಇನ್ನೊಂದು ಅವಧಿಗೂ ಪ್ರಧಾನಿಯಾಗಿ ಮುಂದುವರಿಯಲಿ - ಎನ್.ಆರ್. ನಾರಾಯಣಮೂರ್ತಿ, ಇನ್ಫೋಸಿಸ್ ಸಹ ಸಂಸ್ಥಾಪಕ
ಉದ್ಯಮಿಗಳಿಗೆ ದೇಶವನ್ನು ದೋಚುವುದು ಇನ್ನೂ ಉಳಿದಿದೆ ಎಂದಾಯಿತು.
---------------------

ಕಾಶ್ಮೀರವನ್ನು ಭಾರತಕ್ಕೆ ಕೊಡುವ ಬದಲು ಸ್ವತಂತ್ರ ರಾಷ್ಟ್ರ ಮಾಡಿ - ಶಾಹಿದ್ ಅಫ್ರಿದಿ, ಮಾಜಿ ಕ್ರಿಕೆಟಿಗ
ಮೊದಲು ಕಾಶ್ಮೀರಿಗಳಿಗೆ ಮಾತನಾಡುವ ಸ್ವಾತಂತ್ರ ಕೊಡಿ.

---------------------
ಭಯೋತ್ಪಾದನೆಯ ಉಗಮ ಸ್ಥಾನ ಪಾಕಿಸ್ತಾನ - ನರೇಂದ್ರ ಮೋದಿ, ಪ್ರಧಾನಿ
  ದಾಭೋಲ್ಕರ್, ಗೌರಿ ಲಂಕೇಶ್ ಮೊದಲಾದವರನ್ನು ಕೊಂದದ್ದು ಪಾಕಿಸ್ತಾನದಿಂದ ಬಂದವರೇ?
---------------------
ಇತಿಹಾಸ ತಿರುಚುವವರು ಅಧಿಕಾರಕ್ಕೇರಿರುವುದು ಇಂದಿನ ದುರಂತ - ವೀರಪ್ಪ ಮೊಯ್ಲಿ, ಸಂಸದ
ನಿಮ್ಮ ಮಹಾಕಾವ್ಯಗಳೇ ಅವರಿಗೆ ಪ್ರೇರಣೆಯಂತೆ.

---------------------

ನಾಳೆ ನಾನು ಸತ್ತರೆ ಒಬ್ಬ ಸಮಾಜ ಸೇವಕ ಸತ್ತ ಎನ್ನಿ ಸಾಕು, ಜಾತಿಗೆ ಸೀಮಿತಗೊಳಿಸಬೇಡಿ - ಸಿಎಂ ಇಬ್ರಾಹೀಂ, ಕಾಂಗ್ರೆಸ್ ಮುಖಂಡ
ಅದಕ್ಕಾಗಿಯಾದರೂ ಒಂದಿಷ್ಟು ಸಮಾಜ ಸೇವೆ ಮಾಡಿ.

---------------------
  ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ತಲೆಕೆಡಿಸಿಕೊಂಡಿಲ್ಲ - ಎಚ್.ಡಿ.ರೇವಣ್ಣ , ಸಚಿವ
ನೀವು ಕುಮಾರಸ್ವಾಮಿಯ ತಲೆಕೆಡಿಸಿದ್ದೀರಿ ಎನ್ನುವ ಆರೋಪ.

---------------------
ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ನೀಡಿದರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ - ಅನಿತಾಕುಮಾರಸ್ವಾಮಿ, ಶಾಸಕಿ
ಉಪಮುಖ್ಯಮಂತ್ರಿಯಾಗಿದ್ದರೆ ಕುಮಾರಸ್ವಾಮಿಯವರಿಗೂ ಒಂದಿಷ್ಟು ಅನುಕೂಲವಾಗುತ್ತಿತ್ತು.

---------------------
ವಿದ್ಯಾರ್ಥಿಗಳು ಮುಂದಿನ ಸಮಾಜದ ಸಾವಯವ ಗೊಬ್ಬರಗಳಿದ್ದಂತೆ - ವಿನಯಾಪ್ರಸಾದ್, ನಟಿ
ಆದರೆ ಅದಕ್ಕಾಗಿ ಅವರ ತಲೆಯೊಳಗೆ ಗೊಬ್ಬರ ತುಂಬಿಸುವುದು ತಪ್ಪು.

---------------------

12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ ಆದರೆ, ಈ ತನಕ ನನಗೆ ಮೀಟೂ ಅನುಭವ ಆಗಿಲ್ಲ - ಶುಭಾ ಪೂಂಜಾ, ನಟಿ
ನಿರಾಶೆಯಿಂದ ಹೇಳುತ್ತಿರುವ ಹಾಗಿದೆ?
---------------------
  ರಾಹುಲ್ ಗಾಂಧಿಯಂತಹ ಸಾವಿರ ಜನ ಬಂದರೂ ಆರೆಸ್ಸೆಸ್ ನಿಷೇಧ ಸಾಧ್ಯವಿಲ್ಲ - ಸಿ.ಟಿ.ರವಿ, ಶಾಸಕ
ಅಂದು ಕಾಂಗ್ರೆಸ್ ನೀರೆರೆದ ವಿಷದ ಗಿಡ, ಈಗ ಮರವಾಗಿದೆ.
---------------------

ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಅಂಬಾನಿಯಂತಹ ಬೆರಳೆಣಿಕೆಯಷ್ಟು ಉದ್ಯಮಿಗಳ ಕಾವಲುಗಾರನಾಗಿದ್ದಾರೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಜನಸಾಮಾನ್ಯರ ಮನೆ ಕಾಯಲು ಅಲ್ಲೇನಿದೆ? ಎಲ್ಲ ಬ್ಯಾಂಕ್‌ಗಳ ಪಾಲಾಗಿದೆ.

---------------------
  ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮನ್ನು ಅವಹೇಳನ ಮಾಡುವವರು ಹೆಚ್ಚುತ್ತಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
ನಿಮ್ಮಂಥವರೇ ಹಿಂದೂ ಧರ್ಮಕ್ಕೆ ಅತಿ ದೊಡ್ಡ ಅವಮಾನ.

---------------------
ಅಧಿಕಾರ ಸಿಗದಿದ್ದರೂ ಸರಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಕೈಜೋಡಿಸೊಲ್ಲ - ಮಾಯಾವತಿ, ಬಿಎಸ್ಪಿ ನಾಯಕಿ
ಬಿಜೆಪಿಯ ಜೊತೆಗೆ ಕೈ ಜೋಡಿಸಲಿದ್ದೇನೆ ಎಂದೇ ಹೇಳಿ ಬಿಡಿ 

share
ಪಿ.ಎ.ರೈ
ಪಿ.ಎ.ರೈ
Next Story
X