ಅಲೆಮಾರಿ ಸಮುದಾಯ ಇನ್ನೂ ಅಸಂಘಟಿತವಾಗಿಯೇ ಉಳಿದಿವೆ: ಬರಗೂರು ರಾಮಚಂದ್ರಪ್ಪ

ತುಮಕೂರು,ನ.19: ಅಲೆಮಾರಿ ಸಮುದಾಯಗಳು ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಇನ್ನೂ ಅಸಂಘಟಿತವಾಗಿಯೇ ಉಳಿದಿವೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಜಂಟಿಯಾಗಿ ತುಮಕೂರು ವಿ.ವಿ. ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಲೆಮಾರಿ ಸಮುದಾಯಗಳ ಪ್ರಸ್ತುತ ಬಿಕ್ಕಟ್ಟುಗಳು, ಸವಾಲುಗಳು ಮತ್ತು ಸೌಲಭ್ಯಗಳು ಕುರಿತ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಕುವೆಂಪು ಹಾಡುಗಳನ್ನು ಕೇಳಿದರೆ ಅದರಲ್ಲಿ ಕೆಲವೊಂದು ಶಬ್ಧಗಳನ್ನು ಗಮನಿಸಬಹುದು. ”ಓ ನನ್ನ ಚೇತನ ಆಗೂ ನೀ ಕೇತನ” ಸಾಲಲ್ಲಿ ಕೆಲವೊಂದು ಅಲೆಮಾರಿ ಜನಾಂಗಕ್ಕೆ ಸಂಬಂಧಪಟ್ಟ ಅಂಶಗಳನ್ನು ಕಾಣಬಹುದಾಗಿದೆ. ವಾಸ್ತವವಾಗಿ ನೋಡುವುದಾದರೆ ಯಾರಿಗೆ ಮನೆ ಮತ್ತು ಊಟ ಇರುವುದಿಲ್ಲ ಜಮೀನು ಇರುವುದಿಲ್ಲ ಅವರು ನಿಜವಾದ ಅಲೆಮಾರಿಗಳು ಎಂದು ಹೇಳಿದರು.
ಈ ಅಲೆಮಾರಿ ಜನರು ನಗರಕ್ಕೆ ಬಂದು ಗಸ-ಕುಡಿಸುವ ಕೆಲಸ ಮಾಡುತ್ತಾರೆ. ಅವರನ್ನೂ ನಿಜವಾಗಿಯೂ ಸ್ವಚ್ಛ ಭಾರತ ಮೂಲ ಸೃಷ್ಠಿಕರ್ತರು ಎಂದು ಹೇಳಬಹುದು. ಸಾಂಸ್ಕೃತಿಕ ಧರ್ಮಗಳ ಬಗ್ಗೆ ಗೊತ್ತಿಲ್ಲ ಇವರಿಗೆ, ಧರ್ಮ- ಇದೆ ಜಾತಿ -ಇಲ್ಲ ನೆಲ-ಇದೆ ನೆಲೆ-ಇಲ್ಲ. ಅಲೆಮಾರಿಯ ಜನಾಂಗದವರೂ ಸಂಕಷ್ಠದಿಂದಲೇ ಸ್ವಾವಲಂಭಿಯಾಗಿ ಇದ್ದಾರೆ. ಅವರ ಕುಲ ಮತ್ತು ಕಸಬುಗಳು ಕೂಡ ಒಂದೇ ಆಗಿರುತ್ತೇವೆ. ಹಾಗಾಗಿ ಇವರಿಗೆ ಯಾವುದೇ ರೀತಿಯಾದ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂದರು.
ಅಲೆಮಾರಿ ಅಭಿವೃದ್ಧಿ ಎಂಬುದು ಆರ್ಥಿಕ ವಾದದ್ದು, ಅಲೆಮಾರಿ ಸಮುದಾಯದಲ್ಲಿ ವಿಶಿಷ್ಠತೆ ಎಂದರೆ ದೈವ ಮೂಲದಿಂದಲೇ ತಮ್ಮ ಪರಂಪರೆಯನ್ನು ಕಟ್ಟಿಕೊಳ್ಳುತ್ತ ಬಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ಕುಮಾರ್, ಜಿಲ್ಲೆಯಲ್ಲಿರುವ ಅಲೆಮಾರಿಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಇವರಿಗೆ ಗುರುತಿನ ಚೀಟಿ ನೀಡುವ ಕೆಲಸವನ್ನು ಮೊದಲ ಹಂತವಾಗಿ ಮಾಡಿದ್ದೇವೆ. ಈ ಸಮುದಾಯಗಳಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಕಲ್ಪಿಸಲಿದ್ದೇವೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಬಿ.ಜ್ಯೋತಿಗಣೇಶ್ ಅಲೆಮಾರಿ ಜನಾಂಗದವರಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಗಟ್ಟಿ ಅವರಿಗೆ ಸಿಗಬೇಕಾಗಿರುವ ಸೌಲಭ್ಯಗಳನ್ನು ದೊರಕಿಸಿಕೊಡುವ ಕಡೆ ಎಲ್ಲಾ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಕೆ.ಎಸ್. ಮೃತ್ಯುಂಜಯ ಮತ್ತಿತರರು ಹಾಜರಿದ್ದರು.







