ಸಿಎನ್ಎನ್ ವರದಿಗಾರನಿಗೆ ಶ್ವೇತಭವನ ಪ್ರವೇಶ ಮುಕ್ತ
ವಾಶಿಂಗ್ಟನ್, ನ. 20: ಸಿಎನ್ಎನ್ ವರದಿಗಾರ ಜಿಮ್ ಅಕೋಸ್ಟರ ಶ್ವೇತಭವನ ಪ್ರವೇಶ ಅನುಮತಿ ಪತ್ರವನ್ನು ಶ್ವೇತಭವನ ಸೋಮವಾರ ಮರಳಿಸಿದೆ.
ಆದರೆ, ಅಧ್ಯಕ್ಷರ ಪತ್ರಿಕಾಗೋಷ್ಠಿಗಳಲ್ಲಿ ಅನುಸರಿಸಬೇಕಾದ ಹೊಸ ನಿಯಮಗಳನ್ನು ಅಕೋಸ್ಟ ಪಾಲಿಸುವವರೆಗೆ ಪರವಾನಿಗೆ ಚಾಲ್ತಿಯಲ್ಲಿರುತ್ತದೆ ಎಂಬುದಾಗಿ ಶ್ವೇತಭವನದ ಅಧಿಕಾರಿಗಳು ಸಿಎನ್ಎನ್ಗೆ ತಿಳಿಸಿದರು.
ಆ ಬಳಿಕ ಸುದ್ದಿವಾಹಿನಿಯು ನ್ಯಾಯಾಲಯದಲ್ಲಿದ್ದ ತನ್ನ ವ್ಯಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡಿತು.
ಒಮ್ಮೆ ಒಂದು ಪ್ರಶ್ನೆ ಮಾತ್ರ ಕೇಳಬೇಕು ಎನ್ನುವುದು ಸೇರಿದಂತೆ ಅಧ್ಯಕ್ಷರ ಪತ್ರಿಕಾಗೋಷ್ಠಿಗೆ ಸಂಬಂಧಿಸಿ ಹಲವಾರು ಹೊಸ ನಿಯಮಗಳನ್ನು ರೂಪಿಸಲಾಗಿದೆ.
Next Story