ಮುಂಬೈ: 10 ಸಾವಿರಕ್ಕೂ ಅಧಿಕ ರೈತರು, ಬುಡಕಟ್ಟು ಜನರಿಂದ ರ್ಯಾಲಿ
ಭರವಸೆ ಈಡೇರಿಸಲು ಫಡ್ನವೀಸ್ ಸರಕಾರಕ್ಕೆ ಆಗ್ರಹ
![ಮುಂಬೈ: 10 ಸಾವಿರಕ್ಕೂ ಅಧಿಕ ರೈತರು, ಬುಡಕಟ್ಟು ಜನರಿಂದ ರ್ಯಾಲಿ ಮುಂಬೈ: 10 ಸಾವಿರಕ್ಕೂ ಅಧಿಕ ರೈತರು, ಬುಡಕಟ್ಟು ಜನರಿಂದ ರ್ಯಾಲಿ](/images/placeholder.jpg)
ಹೊಸದಿಲ್ಲಿ, ನ.22: ಕಳೆದ ವರ್ಷ ರಾಜ್ಯ ಸರಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ 10 ಸಾವಿರಕ್ಕೂ ಅಧಿಕ ರೈತರು ಹಾಗು ಬುಡಕಟ್ಟು ಜನರು ಮುಂಬೈಯ ಆಝಾದ್ ಮೈದಾನದವರೆಗೆ ರ್ಯಾಲಿ ನಡೆಸಿದರು.
ಮುಂಜಾನೆ 5 ಗಂಟೆಗೆ ರ್ಯಾಲಿ ಹೊರಟ ಪ್ರತಿಭಟನಕಾರರು ಮಧ್ಯಾಹ್ನದ ವೇಳೆ ಆಝಾದ್ ಮೈದಾನ ತಲುಪಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಲು ರೈತರ ನಿಯೋಗವೊಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರನ್ನು ಭೇಟಿಯಾಗಲಿದೆ.
ಬರ ಪರಿಸ್ಥಿತಿಯಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ರೈತರು 2017ರಲ್ಲಿ ಫಡ್ನವೀಸ್ ನೀಡಿದ್ದ ಭರವಸೆಯಂತೆ ಸಾಲ ಮನ್ನಾ ಜಾರಿಗೆ ತರಬೇಕು, ಬೆಳೆಗಳಿಗೆ 50 ಶೇ. ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
Next Story