ಉಡುಪಿ: ನ.24ರಂದು ಕಾರ್ಮಿಕ ಸಂಘಟನೆಗಳ ಜಿಲ್ಲಾ ಮಟ್ಟದ ಸಮಾವೇಶ
ಉಡುಪಿ, ನ.23: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ನ.24ರಂದು ಶನಿವಾರ ಅಪರಾಹ್ನ 3:00ಕ್ಕೆ ಬನ್ನಂಜೆ ಶಿವಗಿರಿ ಹಾಲ್ನಲ್ಲಿ ನಡೆಯಲಿದೆ.
ಸಮಾವೇಶವನ್ನುದ್ದೇಶಿಸಿ ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್.ವರಲಕ್ಷ್ಮೀ ಮತ್ತು ಎಐಟಿಯುಸಿಯ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ರಾವ್ ಭಾಷಣ ಮಾಡಲಿದ್ದಾರೆ. 2019ರ ಜನವರಿ 8,9ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಮಹತ್ವದ ಕುರಿತು ಸಮಾವೇಶದಲ್ಲಿ ವಿವರಿಸ ಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
Next Story