ರಾಮ ಮಂದಿರ ನಿರ್ಮಾಣ ಆರಂಭದ ದಿನಾಂಕ ಘೋಷಿಸಿ: ಅಯೋಧ್ಯೆಯಲ್ಲಿ ಮೋದಿಗೆ ಉದ್ಧವ್ ಠಾಕ್ರೆ ಸವಾಲು
ಹೊಸದಿಲ್ಲಿ, ನ.24: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ದಿನಾಂಕವನ್ನು ಘೋಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸವಾಲೆಸೆದಿದ್ದಾರೆ.
“ಮೊದಲ ಮಂದಿರ ಯಾವಾಗ ನಿರ್ಮಾಣವಾಗುತ್ತದೆ ಎನ್ನುವುದನ್ನು ತಿಳಿಸಿ, ಬೇರೆ ವಿಷಯಗಳ ಬಗ್ಗೆ ಆಮೇಲೆ ಮಾತನಾಡಬಹುದು” ಎಂದವರು ಹೇಳಿದರು. ಉದ್ಧವ್ ಠಾಕ್ರೆ ತಮ್ಮ ಪತ್ನಿ ರಶ್ಮಿ ಮತ್ತು ಆದಿತ್ಯ ಜೊತೆಗೆ ಅಯೋಧ್ಯೆಗೆ ಆಗಮಿಸಿದ್ದಾರೆ.
ರವಿವಾರ ವಿಎಚ್ ಪಿ ಅಯೋಧ್ಯೆಯಲ್ಲಿ ಪ್ರತ್ಯೇಕ ಕಾರ್ಯಕ್ರಮವನ್ನು ನಡೆಸಲಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ 2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
Next Story