ನ. 26: ಕಣ್ಣೂರಿನಲ್ಲಿ ಮದ್ಹುರ್ರಸೂಲ್
ಮಂಗಳೂರು, ನ.24: ಎಸ್ಕೆಎಸೆಸ್ಸೆಫ್ ಕಣ್ಣೂರು ಕ್ಲಸ್ಟರ್ ವತಿಯಿಂದ ನ.26ರಂದು ಸಂಜೆ 6:30ಕ್ಕೆ ಕಣ್ಣೂರು ಸೀಝರ್ ಗ್ರೌಂಡ್ನಲ್ಲಿ ಹುಬ್ಬುರ್ರಸೂಲ್ ಹಾಗೂ ವೌಲಿದ್ ಮಜ್ಲಿಸ್ ಕಾರ್ಯಕ್ರಮವು ನಡೆಯಲಿದೆ.
ಸೈಯದ್ ಇಬ್ರಾಹೀಂ ಬಾತಿಷ್ತಂಙಳ್ ದುಆಗೈಯಲಿದ್ದು, ವೌಲಿದ್ ಮಜ್ಲಿಸ್ಗೆ ಉಮರ್ ಫೈಝಿ ಸಾಲ್ಮರ ನೇತೃತ್ವ ನೀಡಲಿದ್ದಾರೆ. ಅನ್ಸಾರ್ ಫೈಝಿ ಬುರ್ಹಾನಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಇಬ್ರಾಹೀಂ ಫೈಝಿ ಮಾಡನ್ನೂರು, ಯಾಕೂಬ್ ಫೈಝಿ ಕಣ್ಣೂರು ಮುಖ್ಯ ಭಾಷಣ ಮಾಡಲಿದ್ದಾರೆ. ಅಲ್ಲದೆ ಕ್ಯಾಂಪಸ್ ವಿಂಗ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್-ಕಥಾ ಪ್ರಸಂಗ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story