Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಂಡ್ಯ ಬಸ್ ದುರಂತದಲ್ಲಿ ಮಡಿದವರ...

ಮಂಡ್ಯ ಬಸ್ ದುರಂತದಲ್ಲಿ ಮಡಿದವರ ಗ್ರಾಮಗಳಲ್ಲಿ ನೀರವ ಮೌನ

ವದೇಸಮುದ್ರದಲ್ಲಿ 8 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ

ವಾರ್ತಾಭಾರತಿವಾರ್ತಾಭಾರತಿ25 Nov 2018 8:52 PM IST
share
ಮಂಡ್ಯ ಬಸ್ ದುರಂತದಲ್ಲಿ ಮಡಿದವರ ಗ್ರಾಮಗಳಲ್ಲಿ ನೀರವ ಮೌನ

ಮಂಡ್ಯ, ನ.26: ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಶನಿವಾರ ಖಾಸಗಿ ಬಸ್ ವಿ.ಸಿ ನಾಲೆಗೆ ಉರುಳಿ ನಡೆದ ಬಸ್ ದುರಂತದಲ್ಲಿ ಸಾವಿಗೀಡಾದ 30 ಮಂದಿಯ ಮೃತರ ಗ್ರಾಮಗಳಲ್ಲಿ ಸೂತಕದ ಛಾಯೆ, ಸ್ಮಶಾನ ಮೌನ, ನೀರವ ಮೌನ ಆವರಿಸಿದೆ. ಸಾವಿಗೀಡಾದವರ ಗ್ರಾಮಗಳಲ್ಲಿ ಜನರಲ್ಲಿ ದುಖಃ ಮಡುಗಟ್ಟಿದೆ.

ದುರಂತದಲ್ಲಿ ತಮ್ಮ ಮಕ್ಕಳು, ಹೆಂಡತಿ, ಗಂಡ ಹಾಗೂ ತಾಯಿ-ಅಜ್ಜಿಯಂದಿರನ್ನು ಕಳೆದುಕೊಂಡ ಸಂಬಂಧಿಕರಲ್ಲಿ ದುಖಃ ಹೆಪ್ಪುಗಟ್ಟಿದೆ. ಬಸ್ ದುರಂತದಲ್ಲಿ  ಮೃತಪಟ್ಟ ವದೇಸಮುದ್ರದ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ರವಿಕುಮಾರ್ ಅವರ ತಾಯಿ ರಾಣಿ ಮಗನನ್ನು ನೆನೆದು ಗದ್ಗದಿತರಾದದ್ದು ನೋಡುಗರನ್ನು ಕಣ್ಣೀರಾಗಿಸಿತ್ತು. ಗ್ರಾಮದಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದ ನಂತರ ಮಗನನ್ನು ನೆನೆದು ರಾಣಿ ಕಣ್ಣೀರಿಟ್ಟರು.

ಮಗನ ಅಂಕಪಟ್ಟಿ ಹಿಡಿದು ದುಖಃಗೊಂಡ ಚಿಕ್ಕೇಗೌಡ -ವಸಂತ ದಂಪತಿಯು ಮಗ ಪ್ರಶಾಂತ್ (15)ನ ಅಂಕಪಟ್ಟಿ, ಮೆಡಲ್‍ ಗಳನ್ನು ನೋಡುತ್ತಲೇ ಗೋಳಿಟ್ಟರು. 'ಏಳನೇ ತರಗತಿಯಲ್ಲಿದ್ದ ಮಗ ಪ್ರಶಾಂತ್ (15) ಚೆನ್ನಾಗಿ ಓದುತ್ತಿದ್ದ, 'ಎ' ಗ್ರೇಡ್ ತೆಗೆದು ಕ್ಲಾಸಿಗೆ ಫಸ್ಟ್ ಬಂದಿದ್ದ. ಹಲವಾರು ಮೆಡಲ್‍ಗಳನ್ನು ತಂದುಕೊಟ್ಟಿದ್ದ ಎಂದು ವದೇಸಮುದ್ರದ ಚಿಕ್ಕೇಗೌಡ-ವಸಂತ ದಂಪತಿ ಕಣ್ಣೀರಾದರು. 

ಮೃತರ ಸಾಮೂಹಿಕ ಅಂತ್ಯಕ್ರಿಯೆ 

ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್ ವಿ.ಸಿ ನಾಲೆಗೆ ಉರುಳಿ ಬಿದ್ದ ಭೀಕರ ಬಸ್ ದುರಂತದಲ್ಲಿ ಸಾವಿಗೀಡಾದ 30 ಮಂದಿ ಮೃತರ ಅಂತ್ಯಕ್ರಿಯೆಯನ್ನು ಆಯಾಯಾ ಗ್ರಾಮಗಳಲ್ಲಿ ನೆರವೇರಿಸಲಾಯಿತು. ಬಸ್ ದುರಂತ ನಡೆದ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವವನ್ನು ಒಪ್ಪಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಸಲಾಯಿತು. ಕೆಲವರ ಅಂತ್ಯಕ್ರಿಯೆಯನ್ನು ಶನಿವಾರ ತಡರಾತ್ರಿಯೇ ನೆರವೇರಿಸಲಾಗಿದೆ.

ತಾಲೂಕಿನ ವದೇಸಮುದ್ರ ಗ್ರಾಮದಲ್ಲಿ ಪವಿತ್ರಾ (11), ಕರಿಯಯ್ಯ (65), ಚಿಕ್ಕಯ್ಯ (40), ಕಮಲಮ್ಮ (55), ಪ್ರಶಾಂತ್ (15), ರತ್ನಮ್ಮ (60), ಶಶಿಕಲಾ (45), ರವಿಕುಮಾರ್ (12) ಅವರ ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.

ಉಳಿದಂತೆ ಕೆ.ಆರ್.ಪೇಟೆ ತಾಲೂಕಿನ ಗುಡುಗನಹಳ್ಳಿ ಗ್ರಾಮದಲ್ಲಿ ಜಿ.ಕೆ.ಲಿಖಿತಾ (5), ಡಾಮಡಹಳ್ಳಿಯ ಗ್ರಾಮದಲ್ಲಿ ಪ್ರೇಕ್ಷಾ (2), ಮಂಜುಳಾ (60), ಚಿಕ್ಕಕೊಪ್ಪಲಿನಲ್ಲಿ ಚಂದ್ರು (35), ಪಾಪಣ್ಣ (66), ಪೂಜಾರಿ ಕೆಂಪಯ್ಯ (50), ಯಶೋಧ (18), ದಿವ್ಯಾ, ದೊಡ್ಡಕೊಪ್ಪಲಿನಲ್ಲಿ ಜಯಮ್ಮ (50), ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಪುರದಲ್ಲಿ ಸೌಮ್ಯ (5), ಕಲ್ಪನಾ (11) ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕನಗನಮರಡಿಯಲ್ಲಿ ನಿಂಗಮ್ಮ (70), ರತ್ನಮ್ಮ (50), ಬೇಬಿ ಗ್ರಾಮದಲ್ಲಿ ಈರಯ್ಯ (60), ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಾವಿತ್ರಮ್ಮ (40), ಭುಜವಳ್ಳಿಯಲ್ಲಿ ಪ್ರೀತಿ (15), ಗಾಣದಹೊಸೂರು ಗ್ರಾಮದಲ್ಲಿ ಅನುಷಾ (17), ಹುಲ್ಕೇರೆಯಲ್ಲಿ ಸುಮತಿ (35), ಚಿಕ್ಕಾಡೆಯಲ್ಲಿ ಸೌಮ್ಯ (30), ಕಟ್ಟೇರಿಯಲ್ಲಿ ಶಿವಮ್ಮ (50), ಹುಲಿಕೆರೆಕೊಪ್ಪಲು ಗ್ರಾಮದಲ್ಲಿ ಮಣಿ (35), ರವಿಕುಮಾರ್ (15) ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X