ಸೋಮವಾರ ಅಂಬರೀಶ್ ಅಂತ್ಯಕ್ರಿಯೆ: ರಾಜಧಾನಿಯಲ್ಲಿ ಮದ್ಯ ಮಾರಾಟ ಬಂದ್
![ಸೋಮವಾರ ಅಂಬರೀಶ್ ಅಂತ್ಯಕ್ರಿಯೆ: ರಾಜಧಾನಿಯಲ್ಲಿ ಮದ್ಯ ಮಾರಾಟ ಬಂದ್ ಸೋಮವಾರ ಅಂಬರೀಶ್ ಅಂತ್ಯಕ್ರಿಯೆ: ರಾಜಧಾನಿಯಲ್ಲಿ ಮದ್ಯ ಮಾರಾಟ ಬಂದ್](https://www.varthabharati.in/sites/default/files/images/articles/2018/11/25/164979.jpg)
ಬೆಂಗಳೂರು, ನ.25: ಕೇಂದ್ರದ ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆ ಬೆಂಗಳೂರು ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸೋಮವಾರ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ.
ಸೋಮವಾರ ಅಂಬರೀಶ್ರವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಕಂಠೀರವ ಸ್ಟುಡೀಯೋದಲ್ಲಿ ಜರಗುವ ಹಿನ್ನೆಲೆ, ಸಾವಿರಾರು ಜನರು ಜಮಯಿಸುವ ಸಾಧ್ಯತೆಯಿದೆ. ಹೀಗಾಗಿ, ನ.26ರ ದಿನಪೂರ್ತಿ ಮದ್ಯ ಮಾರಾಟ ಪ್ರಕ್ರಿಯೆಯನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story