ಕೆಪಿಸಿಸಿಯಲ್ಲಿ ಜಾಫರ್ ಶರೀಫ್ ಅಂತಿಮ ದರ್ಶನಕ್ಕೆ ಅವಕಾಶ
![ಕೆಪಿಸಿಸಿಯಲ್ಲಿ ಜಾಫರ್ ಶರೀಫ್ ಅಂತಿಮ ದರ್ಶನಕ್ಕೆ ಅವಕಾಶ ಕೆಪಿಸಿಸಿಯಲ್ಲಿ ಜಾಫರ್ ಶರೀಫ್ ಅಂತಿಮ ದರ್ಶನಕ್ಕೆ ಅವಕಾಶ](https://www.varthabharati.in/sites/default/files/images/articles/2018/11/26/165032.gif)
ಬೆಂಗಳೂರು, ನ.26: ರವಿವಾರ ನಿಧನರಾದ ಹಿರಿಯ ರಾಜಕಾರಣಿ, ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಇಂದು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಇಂದು ಮಧ್ಯಾಹ್ನ 12 ಗಂಟೆಯಿಂದ ಸುಮಾರು ಅರ್ಧ ಗಂಟೆ ಕಾಲ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೆಪಿಸಿಸಿ ಪ್ರಕಟನೆ ತಿಳಿಸಿದೆ
Next Story