Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೆತ್ತವರನ್ನು ಕಳೆದುಕೊಂಡು ಬದುಕುಳಿದ ಮಗು...

ಹೆತ್ತವರನ್ನು ಕಳೆದುಕೊಂಡು ಬದುಕುಳಿದ ಮಗು ಮೋಷೆ ಈಗ ಹೇಗಿದ್ದಾನೆ ನೋಡಿ

ಮುಂಬೈ ಭಯೋತ್ಪಾದಕ ದಾಳಿಗೆ ಇಂದು ಹತ್ತು ವರ್ಷ

ವಾರ್ತಾಭಾರತಿವಾರ್ತಾಭಾರತಿ26 Nov 2018 4:51 PM IST
share
ಹೆತ್ತವರನ್ನು ಕಳೆದುಕೊಂಡು ಬದುಕುಳಿದ ಮಗು ಮೋಷೆ ಈಗ ಹೇಗಿದ್ದಾನೆ ನೋಡಿ

ಇಡೀ ವಿಶ್ವವನ್ನೇ ತಲ್ಲಣಿಸಿದ್ದ ಮುಂಬೈ ಭಯೋತ್ಪಾದಕ ದಾಳಿಗೆ ಇಂದು ಭರ್ತಿ ಹತ್ತು ವರ್ಷ ಮತ್ತು ಈಗಲೂ ಮೋಷೆ ಹೋಝ್‌ಬರ್ಗ್‌ಗೆ ಅದರ ದುಃಸ್ವಪ್ನ ಕಾಡುತ್ತಿದೆ. ಹತ್ತು ವರ್ಷಗಳ ಬಳಿಕ ಈಗಲೂ ಕತ್ತಲೆಂದರೆ ಮೋಷೆ ಹೆದರಿಕೊಳ್ಳುತ್ತಾನೆ ಎನ್ನುತ್ತಾಳೆ ಆತನ ಆಯಾ ಸ್ಯಾಂಡ್ರಾ ಸಾಮ್ಯುಯೆಲ್ಸ್. ಮೋಷೆ ಹೆಚ್ಚು ಮಾತನಾಡುವುದಿಲ್ಲ,ಆದರೆ ರಾತ್ರಿ ಮಲಗುವಾಗ ದೀಪಗಳನ್ನು ಆರಿಸಿದ ಬಳಿಕ ಹಿಂದಿನ ಅಸ್ಪಷ್ಟ ನೆನಪುಗಳು ಆತನನ್ನು ಕಾಡುತ್ತವೆ.

ಮೋಷೆ ಬದುಕಿದ್ದು ಹೇಗೆ?

 ಮುಂಬೈನಲ್ಲಿರುವ ಯಹೂದಿಗಳ ಆರಾಧನಾ ಸ್ಥಳ ಚಾಬಾದ್ ಹೌಸ್‌ನ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಜೀವಂತ ಪಾರಾಗಿದ್ದ ಮೂವರಲ್ಲಿ ಆಗ ಎರಡರ ಹರೆಯದ, ಚಿನ್ನದ ಬಣ್ಣದ ಗುಂಗುರು ಕೂದಲುಗಳ ಮೋಷೆ ಓರ್ವನಾಗಿದ್ದ. 2008,ನ.26ರ ರಾತ್ರಿ ಮುಂಬೈ ದಾಳಿಗಳು ಆರಂಭವಾಗುತ್ತಿದ್ದಂತೆ ಚಾಬಾದ್ ಹೌಸ್‌ಗೆ ನುಗ್ಗಿದ್ದ ಭಯೋತ್ಪಾದಕರ ಗುಂಪು ಒಳಗಿದ್ದವರ ಮೇಲೆ ಗುಂಡುಗಳ ಸುರಿಮಳೆಗೈದಿತ್ತು. ಸ್ಯಾಂಡ್ರಾ ಗುಂಡುಗಳ ಮತ್ತು ಶೆಲ್‌ಗಳ ದಾಳಿಯನ್ನೂ ಲೆಕ್ಕಿಸದೆ ಮೋಷೆಯನ್ನು ಹುಡುಕಲು ಮೇಲಂತಸ್ತಿಗೆ ಧಾವಿಸಿದ್ದಳು. ಅಲ್ಲಿ ತನ್ನ ಹೆತ್ತವರ ಶವಗಳ ಬಳಿ ಕುಳಿತು ಅಳುತ್ತಿದ್ದ ಮಗುವನ್ನೆತ್ತಿಕೊಂಡಿದ್ದ ಆಕೆ ನರಿಮನ್ ಹೌಸ್‌ನ ಅಡುಗೆಯಾಳು ಝಾಕೀರ್ ಖಾಜಿ ಜೊತೆ ಹೊರಗೆ ಧಾವಿಸುವಲ್ಲಿ ಯಶಸ್ವಿಯಾಗಿದ್ದಳು.

ದಾಳಿಗಳ ಕೆಲವು ದಿನಗಳ ಬಳಿಕ ಮುಂಬೈನ ಕಾಲಾಘೋಡಾ ಪ್ರದೇಶದಲ್ಲಿರುವ ಕೆನೆಸೆಥ್ ಎಲಿಯಾಹೂ ಸೈನಾಗಾಗ್‌ನಲ್ಲಿ ನಡೆದಿದ್ದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ತನ್ನ ‘ಇಮ್ಮಾ(ತಾಯಿ)’ಗಾಗಿ ಮೋಷೆ ಅಳುತ್ತಿದ್ದ ದೃಶ್ಯ 26/11 ದಾಳಿಗಳ ನಂತರದ ಅತ್ಯಂತ ಹೃದಯವಿದ್ರಾವಕ ಘಳಿಗೆಗಳಲ್ಲೊಂದಾಗಿತ್ತು. ಚಾಬಾದ್ ಹೌಸ್‌ನ್ನು ನಿರ್ವಹಿಸುತ್ತಿದ್ದ ಹೆತ್ತವರಾದ ರಬ್ಬಿ ಗೇವ್ರಿಯೆಲ್ ಹೋಝ್‌ಬರ್ಗ್ ಮತ್ತು ತಾಯಿ ರಿವಿಕಾ ಭಯೋತ್ಪಾದಕರ ಗುಂಡುಗಳಿಗೆ ಬಲಿಯಾಗಿದ್ದರು. ಮೋಷೆ ಅಕ್ಷರಶಃ ತಬ್ಬಲಿಯಾಗಿದ್ದ.

ದುರಂತದ ಸುದ್ದಿ ತಿಳಿದಾಕ್ಷಣ ಮುಂಬೈಗೆ ಧಾವಿಸಿ ಬಂದಿದ್ದ ರಿವಿಕಾರ ತಂದೆ ಶಿಮೋನ್ ಮತ್ತು ತಾಯಿ ಯೆಹುದಿತ್ ರೋಸೆನ್‌ಬರ್ಗ್ ಅವರು ಮೊಮ್ಮಗನನ್ನು ತಮ್ಮೊಂದಿಗೆ ಕರೆದೊಯ್ದಿದ್ದರು. ಇಬ್ಬರು ಪುತ್ರರ ತಾಯಿಯಾಗಿರುವ ಗೋವಾ ಮೂಲದ ವಿಧವೆ ಸ್ಯಾಂಡ್ರಾ ಕೂಡ ಮೋಷೆಯನ್ನು ನೋಡಿಕೊಳ್ಳಲು ಜೆರುಸಲೇಮ್‌ನಿಂದ 95 ಕಿ.ಮೀ.ಅಂತರದ ಅಫುಲಾದಲ್ಲಿಯ ಶಿಮೋನ್ ಕುಟುಂಬವನ್ನು ಸೇರಿಕೊಂಡಿದ್ದಳು.

ದುರಂತ ನಡೆದ ಬಳಿಕದ ಹತ್ತು ವರ್ಷಗಳಲ್ಲಿ ಕಳೆದ ಜನವರಿಯಲ್ಲ್ಲಿ ಮೋಷೆ ಭಾರತಕ್ಕೆ ಮೊದಲ ಭೇಟಿಯನ್ನು ನೀಡಿದ್ದ. ಈ ಸಂದರ್ಭದಲ್ಲಿ 100 ಇಸ್ರೇಲಿ ಮತ್ತು ಭಾರತೀಯ ಭದ್ರತಾ ಸಿಬ್ಬಂದಿಗಳ ಜೊತೆಗೆ ಮುಂಬೈ ಪೊಲೀಸರೂ ಮೋಷೆಯ ಸುರಕ್ಷತೆಯ ಹೊಣೆಯನ್ನು ಹೊತ್ತುಕೊಂಡಿದ್ದರು. 11ರ ಹರೆಯದ ಮೋಷೆ ಅಜ್ಜ ಶಿಮೋನ್ ಜೊತೆಗೆ ಆಗಮಿಸಿದ್ದು,ತನ್ನ ಹೆತ್ತವರ ಹತ್ಯೆ ನಡೆದಿದ್ದ ನರಿಮನ್ ಹೌಸ್ ಕಟ್ಟಡದ ಚಾಬಾದ್ ಹೌಸ್‌ಗೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದ.

ಸ್ಯಾಂಡ್ರಾಳ ಕಥೆಯೇನು?

ಈಗ 53ರ ಹರೆಯದ ಸ್ಯಾಂಡ್ರಾಗೆ ಇಸ್ರೇಲ್‌ನ ಗೌರವ ಪೌರತ್ವ ದೊರಕಿದೆಯಾದರೂ ಆಕೆ ತನ್ನ ಭಾರತೀಯ ಪಾಸ್‌ಪೋರ್ಟ್‌ನ್ನು ತ್ಯಜಿಸಿಲ್ಲ. ತನ್ನ ಪ್ರೀತಿಯ ಸೋನು(ಮೋಷೆ)ಗೆ ಆರು ವರ್ಷಗಳಾಗುವವರೆಗೂ ಶಿಮೋನ್ ಕುಟುಂಬದ ಜೊತೆಯೇ ವಾಸವಿದ್ದ ಸ್ಯಾಂಡ್ರಾ ನಂತರ ಅಲೆಹ್ ಜೆರುಸಲೇಮ್ ಸೆಂಟರ್‌ನಲ್ಲಿ ಅಂಗವಿಕಲ ಮಕ್ಕಳ ಪೂರ್ಣಕಾಲಿಕ ನ್ಯಾನಿಯಾಗಿ ಸೇವೆ ಸಲ್ಲಿಸುತ್ತಿದ್ಧಾಳೆ. ಆದರೆ ಪ್ರತಿ ಶನಿವಾರ ರಾತ್ರಿ ಅಫುಲಾಕ್ಕೆ ಬಸ್ ಹತ್ತುವ ಸ್ಯಾಂಡ್ರಾ ರವಿವಾರ ಇಡೀ ದಿನ ಮೋಷೆ ಜೊತೆಗೆ ಕಳೆದು ಸೋಮವಾರ ತನ್ನ ಕೆಲಸಕ್ಕೆ ವಾಪಸಾಗುತ್ತಾಳೆ. ಮುಂಬೈ ದಾಳಿಗೆ ಕೇವಲ ಆರು ತಿಂಗಳ ಮೊದಲು ಪತಿಯನ್ನು ಕಳೆದುಕೊಂಡಿದ್ದ ಸ್ಯಾಂಡ್ರಾಳ ಮಕ್ಕಳಾದ ಮಾರ್ಟಿನ್(34)ಮತ್ತು ಜಾಕ್ಸನ್(26) ಭಾರತದಲ್ಲಿದ್ದಾರೆ. ಮೋಷೆ ತನಗೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತ ಹೆಚ್ಚು ಅನ್ನುತ್ತಾಳೆ ಆಕೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X