ಪೊಲೀಸ್ ದಾಳಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ತೆಲಂಗಾಣದ ರಾಜಕಾರಣಿ
![ಪೊಲೀಸ್ ದಾಳಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ತೆಲಂಗಾಣದ ರಾಜಕಾರಣಿ ಪೊಲೀಸ್ ದಾಳಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ತೆಲಂಗಾಣದ ರಾಜಕಾರಣಿ](https://www.varthabharati.in/sites/default/files/images/articles/2018/11/27/165207.jpg)
ಹೈದರಾಬಾದ್ , ನ.27: ಪೊಲೀಸ್ ದಾಳಿಗೆ ಹೆದರಿ ತೆಲಂಗಾಣದ ಕಾಂಗ್ರೆಸ್ ಅಭ್ಯರ್ಥಿ ವಿ.ಪ್ರತಾಪ್ ರೆಡ್ಡಿ ಆತ್ಮಹತ್ಯೆಗೆ ವಿಫಲಯತ್ನ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ವಿ.ಪ್ರತಾಪ್ ರೆಡ್ಡಿ ಅವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗಜ್ವೆಲ್ ಕ್ಷೇತ್ರದಿಂದ ಮುಖ್ಯ ಮಂತ್ರಿ ಹಾಗೂ ಟಿಆರ್ ಎಸ್ ನಾಯಕ ಕೆ. ಚಂದ್ರ ಶೇಖರ್ ರಾವ್ ವಿರುದ್ಧ ಸ್ಪರ್ಧೆಗೆ ತಯಾರಿ ನಡೆಸಿದ್ದರು. ಪೊಲೀಸರು ಮನೆ ಶೋಧಿಸುತ್ತಿದ್ದಂತೆ ರೆಡ್ಡಿ ತನ್ನ ಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ ನಡೆಸಿದರೆನ್ನಲಾಗಿದೆ.
ವಿ.ಪ್ರತಾಪ್ ರೆಡ್ಡಿ ತನ್ನ ಬೆಂಬಲಿಗರೊಂದಿಗೆ ಮತದಾರರಿಗೆ ಹಣ ಮತ್ತು ಮದ್ಯ ಹಂಚುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರು ರೆಡ್ಡಿ ಮನೆಗೆ ದಾಳಿ ನಡೆಸುತ್ತಿದ್ದಂತೆ ರೆಡ್ಡಿ ಮತ್ತು ಅವರ ಬೆಂಬಲಿಗರು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದರೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಾಪ್ ರೆಡ್ಡಿ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದರು ಎಂದು ತಿಳಿದು ಬಂದಿದೆ.
ಪೊಲೀಸರು ತನ್ನನ್ನು ಕೊಲ್ಲಲು ಯತ್ನಿಸಿದ್ದರು ಎಂದು ಪ್ರತಾಪ್ ರೆಡ್ಡಿ ಆರೋಪಿಸಿದ್ದಾರೆ.