ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ ಪೊಲೀಸರಿಗೆ ಧನ್ಯವಾದ; ಟಿ.ಸುನೀಲ್ ಕುಮಾರ್
ಜಾಫರ್ ಶರೀಫ್, ನಟ ಅಂಬರೀಶ್ ಅಂತ್ಯಕ್ರಿಯೆ
![ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ ಪೊಲೀಸರಿಗೆ ಧನ್ಯವಾದ; ಟಿ.ಸುನೀಲ್ ಕುಮಾರ್ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ ಪೊಲೀಸರಿಗೆ ಧನ್ಯವಾದ; ಟಿ.ಸುನೀಲ್ ಕುಮಾರ್](https://www.varthabharati.in/sites/default/files/images/articles/2018/11/27/165247.jpg)
ಬೆಂಗಳೂರು, ನ.27: ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್, ನಟ ಅಂಬರೀಶ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂತ್ಯಕ್ರಿಯೆ ವೇಳೆ ಸಾರ್ವಜನಿಕರು ಶಾಂತಿಯಿಂದ ಒಂದೇ ಹಾದಿಯಲ್ಲಿ ಸಾಗಿ ಬಂದರು. ಪ್ರತಿಯೊಂದು ಹಂತದಲ್ಲೂ ಸವಾಲಾಗಿತ್ತು. ಎಲ್ಲಿಯೂ ನಮಗೆ ಭದ್ರತಾ ಲೋಪ ಎದುರಾಗಬಾರದು ಎಂಬ ಎಚ್ಚರಿಕೆ ಇತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿ ಮೂರು ದಿನ ಎಚ್ಚರಿಕೆ ವಹಿಸಿದ್ದಾರೆ ಎಂದು ಹೇಳಿದರು.
ಮಂಡ್ಯಕ್ಕೆ ಅಂಬರೀಷ್ ಪಾರ್ಥಿವ ಶರೀರ ದಾರಿ ಮೂಲಕ ಹೋಗುವ ತಯಾರಿ ನಡೆಸಲಾಗುತ್ತಿತ್ತು. ಕೂಡಲೇ ಅದನ್ನು ಸ್ಥಗಿತಗೊಳಿಸಿ ಹೆಲಿಕಾಫ್ಟರ್ ಮೂಲಕ ಮಾಡಲು ನಿರ್ಧರಿಸಲಾಯಿತು. ಇದು ಒಂದೆಡೆಯಾದರೆ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅಂತ್ಯಕ್ರಿಯೆಗೂ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸಿ, ಸಕಲ ಸರಕಾರಿ ಗೌರವಗಳಂತೆ ನಡೆದುಕೊಳ್ಳಾಯಿತು ಎಂದರು.