ಉಪನ್ಯಾಸಕ ಆತ್ಮಹತ್ಯೆ
ಮಣಿಪಾಲ, ನ.27: ಬೆನ್ನುನೋವಿನಿಂದ ಬಳಲುತ್ತಿದ್ದ ಉಪನ್ಯಾಸಕರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ.26ರಂದು ಸಂಜೆ ವೇಳೆ ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಡಾ. ಪ್ರಭಾಕರ ಪ್ರಭು (47) ಎಂದು ಗುರುತಿಸ ಲಾಗಿದೆ.
ಇವರು ಮಂಗಳೂರಿನ ಶ್ರೀದೇವಿ ಫಾಮರ್ಸಿ ಕಾಲೇಜಿನಲ್ಲಿ ಕಳೆದ 10 ವರ್ಷಗಳಿಂದ ಪ್ರೊಫೆಸರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆನ್ನುನೋವಿ ನಿಂದ ಮಾನಸಿಕವಾಗಿ ನೊಂದು ಶೆಟ್ಟಿಬೆಟ್ಟುವಿನಲ್ಲಿರುವ ಹಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story