ಇಸ್ಲಾಮಿಕ್ ಸೆಮಿನರಿ ‘ಭಯೋತ್ಪಾದನೆಯ ದೇವಾಲಯ’: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ
![ಇಸ್ಲಾಮಿಕ್ ಸೆಮಿನರಿ ‘ಭಯೋತ್ಪಾದನೆಯ ದೇವಾಲಯ’: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ಇಸ್ಲಾಮಿಕ್ ಸೆಮಿನರಿ ‘ಭಯೋತ್ಪಾದನೆಯ ದೇವಾಲಯ’: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ](https://www.varthabharati.in/sites/default/files/images/articles/2018/11/29/165710.jpg)
ಶಹರಣಪುರ, ನ. 29: ಉತ್ತರಪ್ರದೇಶದ ಶಹರಣಪುರ ಜಿಲ್ಲೆಯಲ್ಲಿ ಇರುವ ದಾರುಲ್ ಉಲೂಮ್ ದೇವ್ ಬಂದ್ ಇಸ್ಲಾಂ ಶಿಕ್ಷಣ ಸಂಸ್ಥೆಯನ್ನು ‘ಭಯೋತ್ಪಾದನೆಯ ದೇವಾಲಯ’ ಎಂದು ಕರೆಯುವ ಮೂಲಕ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿವಾದಕ್ಕೆ ಒಳಗಾಗಿದ್ದಾರೆ.
“ಈ ಹಿಂದೆ ದಿಯೋಬಂದ್ಗೆ ದಿಯೋವ್ರಾಂತ್ ಎಂಬ ಹೆಸರಿತ್ತು. ನನಗೆ ಈ ಸ್ಥಳದ ಬಗ್ಗೆ ಏನೂ ಗೊತ್ತಿಲ್ಲ. ಇದು ಬಾಘ್ದಾದಿ (ಐಸಿಸ್ ನಾಯಕ) ಹಾಗೂ ಮುಂಬೈ ಭಯೋತ್ಪಾದಕ ದಾಳಿ ನಡೆಸಿದ ಸಂಚುಗಾರ, ಜಮಾತ್ ಉದ್ ದಾವಾದ ವರಿಷ್ಠ ಹಾಫಿಝ್ ಸಯೀದ್ನಂತಹ ವ್ಯಕ್ತಿಗಳನ್ನು ಸೃಷ್ಟಿಸುತ್ತಿದೆ. ಈ ಸ್ಥಳ ಕಲಿಕೆಗೆ ಇರುವ ದೇವಾಲಯ ಎಂದು ನಾನು ಭಾವಿಸಲಾರೆ. ಸತ್ಯವೇನೆಂದರೆ, ಇದು ಭಯೋತ್ಪಾದನೆಯ ದೇವಾಲಯ” ಎಂದು ಸಿಂಗ್ ಬುಧವಾರ ಸ್ವಾಮಿ ಬ್ರಹ್ಮಾನಂದರ ಸರಸ್ವತಿ ಅವರನ್ನು ಅವರ ಆಶ್ರಮದಲ್ಲಿ ಭೇಟಿಯಾದ ಸಂದರ್ಭ ಹೇಳಿದ್ದಾರೆ.
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಒಡೆತನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಂದೂಡಿರುವುದಕ್ಕೆ ಸಂಬಂಧಿಸಿ, ಮುಸ್ಲಿಮರಿಗೆ ಕಠಿಣ ಎಚ್ಚರಿಕೆ ನೀಡಿರುವ ಸಿಂಗ್, ಹಿಂದೂಗಳ ತಾಳ್ಮೆಯನ್ನು ಪರಿಶೀಲಿಸಬೇಡಿ ಎಂದಿದ್ದಾರೆ.
“ನೀವು ಇಲ್ಲಿ ಮೂರು ಲಕ್ಷ ಮಸೀದಿಗಳನ್ನು ಇಲ್ಲಿ ಕಟ್ಟಿದ್ದೀರಿ. ಯಾರೊಬ್ಬರೂ ನಿಮ್ಮನ್ನು ತಡೆಯಲಿಲ್ಲ. ಆದರೆ, ಈಗ ಹಿಂದೂಗಳ ತಾಳ್ಮೆಯನ್ನು ಪರಿಶೀಲಿಸಬೇಡಿ. ರಾಮ ನಮ್ಮ ನಂಬಿಕೆ. ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗುವುದು” ಎಂದು ಸಿಂಗ್ ಹೇಳಿದ್ದಾರೆ.