ಆತ್ಮೀಯ ಮಿತ್ರ ನಮ್ಮಿಂದ ಅಗಲಿದಂತಾಗಿದೆ; ಕೇಂದ್ರ ಸಚಿವ ಅರುಣ್ ಜೇಟ್ಲಿ
ಅನಂತ್ ಕುಮಾರ್ ಶ್ರದ್ಧಾಂಜಲಿ ಸಭೆ
![ಆತ್ಮೀಯ ಮಿತ್ರ ನಮ್ಮಿಂದ ಅಗಲಿದಂತಾಗಿದೆ; ಕೇಂದ್ರ ಸಚಿವ ಅರುಣ್ ಜೇಟ್ಲಿ ಆತ್ಮೀಯ ಮಿತ್ರ ನಮ್ಮಿಂದ ಅಗಲಿದಂತಾಗಿದೆ; ಕೇಂದ್ರ ಸಚಿವ ಅರುಣ್ ಜೇಟ್ಲಿ](/images/placeholder.jpg)
ಬೆಂಗಳೂರು, ನ. 29: ಅನಂತ್ ಕುಮಾರ್ ಅವರ ಅಕಾಲಿಕ ಮರಣದಿಂದ ಕೇವಲ ಒಬ್ಬ ಸಂಸದ, ಒಬ್ಬ ಸಚಿವನನ್ನು ಮಾತ್ರ ಕಳೆದುಕೊಂಡಿಲ್ಲ. ಬದಲಿಗೆ ಒಬ್ಬ ಆತ್ಮೀಯ ಮಿತ್ರ ನಮ್ಮಿಂದ ಅಗಲಿದಂತಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅನಂತ್ ಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮಗೆ ಅತ್ಯಂತ ಹತ್ತಿರವಾದವರು ದೂರವಾದಾಗ ಉಂಟಾಗುವ ನೋವು ಸಹಿಸಲು ಅಸಾಧ್ಯ ಎಂದರು.
ಅನಂತ್ ಕುಮಾರ್ ಕೇಂದ್ರ ಮಟ್ಟದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದು ಬಿಜೆಪಿ ಅವಿಭಾಜ್ಯ ಅಂಗವಾಗಿದ್ದರು. ಅವರು ಚಿಕ್ಕವಯಸ್ಸಿನಲ್ಲೇ ರಾಜಕಾರಣಕ್ಕೆ ಬಂದಿದ್ದರು. ಆದರೆ, ವಿಧಿ ಅವರನ್ನು ಬಹಳ ಬೇಗ ಕರೆದುಕೊಂಡಿದೆ ಎಂದು ಜೇಟ್ಲಿ ಬೇಸರ ವ್ಯಕ್ತಪಡಿಸಿದರು.
ಅನಂತ್ಕುಮಾರ್ ಹಾಗೂ ನನ್ನ ನಡುವೆ ರಾಜಕೀಯ ಸಂಬಂಧವನ್ನೂ ಮೀರಿದ ಸ್ನೇಹವಿತ್ತು. ವಕೀಲ ವೃತ್ತಿ ಮಾಡುತ್ತಿದ್ದ ವೇಳೆ ನಾನು ಬೆಂಗಳೂರಿಗೆ ಬರುವಾಗಲೆಲ್ಲಾ ಮೊದಲೇ ಅವರಿಗೆ ತಿಳಿಸುತ್ತಿದ್ದೆ. ನಾನು ಬೆಂಗಳೂರಿಗೆ ಬಂದಿಳಿಯುವ ಮೊದಲೇ ಹೊಟೇಲ್ ರೂಮಿಗೆ ಬಂದು ನನಗಾಗಿ ಕಾಯುತ್ತಿದ್ದರು ಎಂದು ತಮ್ಮ ಸ್ನೇಹವನ್ನು ನೆನಪು ಮಾಡಿಕೊಂಡರು.