Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 2.0: ಬದುಕುವ ‘ಹಕ್ಕಿ’ಗಾಗಿ! ಪ್ರಾಣ...

2.0: ಬದುಕುವ ‘ಹಕ್ಕಿ’ಗಾಗಿ! ಪ್ರಾಣ ಪಕ್ಷಿಯ ಹೋರಾಟ!

ಶಶಿಕರ ಪಾತೂರುಶಶಿಕರ ಪಾತೂರು2 Dec 2018 12:07 AM IST
share
2.0: ಬದುಕುವ ‘ಹಕ್ಕಿ’ಗಾಗಿ! ಪ್ರಾಣ ಪಕ್ಷಿಯ ಹೋರಾಟ!

ರಜನಿಕಾಂತ್ ಚಿತ್ರಗಳೆಂದರೇನೇ ಪ್ರೇಕ್ಷಕರಲ್ಲಿ ನಿರೀಕ್ಷೆ ಅಧಿಕವಾಗಿರುತ್ತದೆ. ಅದರಲ್ಲಿ ಕೂಡ ‘ಎಂದಿರನ್’ ಬಳಿಕ ಅದರ ಎರಡನೇ ಭಾಗವಾಗಿ ಬರುತ್ತಿರುವ ಕಾರಣ ಬಹು ನಿರೀಕ್ಷೆಯ ಚಿತ್ರವಾಗಿ 2.0 ತೆರೆಗೆ ಬಂದಿದೆ.

ಟ್ರೇಲರ್‌ನಲ್ಲಿ ಕಂಡಂತೆ ಮೊಬೈಲ್ ಫೋನ್‌ಗಳು ಹಠಾತ್ತಾಗಿ ಮಾಯವಾಗುವುದೇ ಚಿತ್ರದ ಮೊದಲ ಆಕರ್ಷಣೆ. ಆದರೆ ಹಾಗೆ ಮಾಯವಾದ ಮೊಬೈಲ್ ಗಳು ಎಲ್ಲಿ ಹೋಗುತ್ತವೆ ಎನ್ನುವಲ್ಲಿಂದ ಚಿತ್ರದ ಕತೆ ಕುತೂಹಲಕಾರಿಯಾಗಿ ಸಾಗುತ್ತದೆ. ಹಾಗೆ ಮೊಬೈಲ್ ಫೋನ್‌ಗಳು ಕಾಣೆಯಾಗುವುದು ಮಾತ್ರವಲ್ಲ, ಕಾಣೆಯಾದ ಫೋನ್‌ಗಳ ಸ್ಥಾನದಲ್ಲಿ ಹೊಸದನ್ನು ತರಿಸುವವರ ಕೊಲೆ ನಡೆಯುತ್ತದೆ. ಈ ಕೊಲೆಗಳನ್ನು ಕೂಡ ಮೊಬೈಲ್‌ಗಳೇ ಮಾಡುತ್ತವೆ. ಅದರ ವಿರುದ್ಧ ಹೋರಾಟಕ್ಕೆ ರಾಜ್ಯವು ಮಿಲಿಟರಿಯನ್ನು ಬಳಸುತ್ತದೆ. ಆದರೆ ಅದನ್ನು ರೋಬೋ ಮೂಲಕವೇ ಎದುರಿಸಬೇಕು ಎನ್ನುವ ವಿಜ್ಞಾನಿ ವಸೀಗರನ್ ಮಾತುಗಳಿಗೆ ಕೊನೆಗೂ ಮನ್ನಣೆ ಸಿಗುತ್ತದೆ. ರೋಬೋ ಹೇಗೆ ಎದುರಿಸುತ್ತದೆ ಎನ್ನುವುದು ಚಿತ್ರದ ಆಕರ್ಷಣೆಯಾದರೆ ಈ ಘಟನೆಯ ಹಿಂದಿರುವ ಪಕ್ಷಿರಾಜನ್ ಕುರಿತಾದ ಮಾಹಿತಿ ಚಿತ್ರದ ಸಂದೇಶವನ್ನು ಸಾರುತ್ತದೆ.

2.0ನಲ್ಲಿ ರಜನಿಕಾಂತ್ ನಿರೀಕ್ಷೆಯಂತೆ ಎಂದಿರನ್ ಚಿತ್ರದ ನಾಯಕ ವಸೀಗರನ್ ಪಾತ್ರದಲ್ಲಿ ಮುಂದುವರಿದಿದ್ದಾರೆ. ಜೊತೆಗೆ ಈ ಬಾರಿ ಚಿಟ್ಟಿ ಜೊತೆಗೆ ಕುಟ್ಟಿ (ಮಿನಿ ರೋಬೋ)ಯಾಗಿಯೂ ರಜನಿ ಬಹುರೂಪದಲ್ಲಿ ರಂಜಿಸಿದ್ದಾರೆ. ಅವರ ಇತರ ಚಿತ್ರಗಳಿಗೆ ಹೋಲಿಸಿದರೆ ಹಾಡು ಮತ್ತು ಪಂಚಿಂಗ್ ಸಂಭಾಷಣೆಗಳ ಕೊರತೆ ಕಾಣುತ್ತದೆ. ಜೊತೆಗೆ ವಸೀಗರನ್ ಸಹಾಯಕಿಯಾಗಿ ಆ್ಯಮಿಜಾಕ್ಸನ್ ನಿರ್ವಹಿಸಿರುವ ನಿಲಾ ಪಾತ್ರ ಕೂಡ ರೋಬೊ ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ನಿರ್ದೇಶಕರು ಎಡವಿದಂತಿದೆ. ಆದರೆ ಒಟ್ಟು ಚಿತ್ರದ ಆಶಯವಾದ ಮೊಬೈಲ್ ಸಮಸ್ಯೆ ಮತ್ತು ಅದರ ವಿರುದ್ಧದ ಹೋರಾಟ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಎನ್ನುವುದು ಸತ್ಯ. ಬಹುಶಃ ಅದೇ ಕಾರಣದಿಂದಲೇ ಇರಬಹುದು ಎಲ್ಲವನ್ನೂ ಡೀಟೈಲಾಗಿ ನೀಡುವ ನಿರ್ದೇಶಕ ಶಂಕರ್ ಈ ಬಾರಿ ಕತೆಯೊಳಗಿನ ರಾಜಕೀಯ ಮತ್ತು ಆಡಳಿತದ ಅಡೆತಡೆಗಳಿಗಿಂತ ಗ್ರಾಫಿಕ್ ಯುದ್ಧದತ್ತ ಹೆಚ್ಚು ಗಮನ ಕೇಂದ್ರೀಕರಿಸಿದಂತಿದೆ. ಹಕ್ಕಿಗಳ ಮೇಲೆ ಪ್ರೀತಿ ತೋರಿಸುವ ಪಕ್ಷಿರಾಜನ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆಗೆ ಮೊಬೈಲ್‌ಗಳ ರಾಶಿಯಂತೆ ಪ್ರಶಸ್ತಿಗಳ ಮಳೆ ಬಂದರೆ ಅಚ್ಚರಿಯೇನಿಲ್ಲ. ಅವರ ಪಾತ್ರದ ಹಿನ್ನೆಲೆಯ ವಿವರಣೆ ಕೂಡ ಅಪ್ಯಾಯಮಾನ.

ಸದಾ ಭ್ರಷ್ಟಾಚಾರದ ವಿರುದ್ಧ ಸಿನೆಮಾ ಮಾಡುವ ಶಂಕರ್ ಈ ಬಾರಿಯೂ ಅಂಥದೇ ಒಂದು ವಿಷಯವನ್ನು ಕತೆಯಾಗಿಸಿದ್ದಾರೆ. ಅದರಲ್ಲಿ ಕೂಡಾ ಮೊಬೈಲ್ ಫೋನ್‌ಗೆ ಸಂಬಂಧಿಸಿರುವ ಸಮಸ್ಯೆಯಾಗಿರುವ ಕಾರಣ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ತಮ್ಮದೇ ತಮ್ಮದೇ ಕತೆ ಎಂಬ ರೀತಿಯಲ್ಲಿ ಚಿತ್ರ ನೋಡಲು ಸಾಧ್ಯವಾಗುತ್ತದೆ. ಚಿತ್ರ ನೋಡಿದ ಪ್ರತಿಯೊಬ್ಬರು ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿದರೆ ಅಲ್ಲಿಗೆ ಇಂಥದೊಂದು ಚಿತ್ರ ತೆರೆಗೆ ಬಂದಿದ್ದು ಸಾರ್ಥಕ ಎನ್ನಬಹುದು.


ತಾರಾಗಣ: ರಜನಿಕಾಂತ್, ಅಕ್ಷಯ್ ಕುಮಾರ್,
ಆ್ಯಮಿ ಜಾಕ್ಸನ್
ನಿರ್ದೇಶನ: ಎಸ್. ಶಂಕರ್
ನಿರ್ಮಾಣ: ಸುಭಾಸ್ಕರನ್

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X