ಕಾಫಿನಾಡಿನಲ್ಲಿ ಧೂಳೆಬ್ಬಿಸಿದ ಐಎನ್ಆರ್ ಸಿ ರ್ಯಾಲಿ: ಕಡೂರು ಕರ್ಣ ಚಾಂಪಿಯನ್

ಚಿಕ್ಕಮಗಳೂರು, ಡಿ.2: ಕಾಫಿ ಡೇ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ ಅಂಗವಾಗಿ ನಗರದ ಅಂಬರ್ ವ್ಯಾಲಿ ಶಾಲಾ ಮೈದಾನದಲ್ಲಿ ನಡೆದ ಕಾರುಗಳ ರ್ಯಾಲಿ ರ್ಯಾಲಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಮೂರು ದಿನಗಳ ಕಾಲ ಶರವೇಗದಲ್ಲಿ ಚಲಿಸುತ್ತಿದ್ದ ಕಾರುಗಳು ಕಾಫಿನಾಡಿನಲ್ಲಿ ಅಕ್ಷರಶಃ ಧೂಳೆಬ್ಬಿಸಿ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಚಿಕ್ಕಮಗಳೂರು ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ನೇತೃತ್ವದಲ್ಲಿ, ಕಾಫಿ ಡೇ ಪ್ರಾಯೋಜಕತ್ವದಲ್ಲಿ ನಡೆದ ಐಎನ್ಆರ್ಸಿ ಚಾಂಪಿಯನ್ಶಿಪ್ನ ನಾಲ್ಕನೇ ಹಂತದ ರ್ಯಾಲಿಗೆ ಗುರುವಾರ ಸಂಜೆ ಚಾಲನೆ ನೀಡಲಾಗಿತ್ತು. ಶುಕ್ರವಾರ ಹಾಗೂ ಶನಿವಾರ ಅಂಬರ್ ವ್ಯಾಲಿ ಶಾಲಾ ಮೈದಾನದಲ್ಲಿ ರೇಸ್ ಕಾರುಗಳ ಝೇಂಕಾರದ ಸದ್ದು ಸೇರಿದ್ದ ಸಾವಿರಾರು ರ್ಯಾಲಿ ಪ್ರಿಯರ ಮೈರೋಮಾಂಚನಗೊಂಡಿತು. ರವಿವಾರ ಅಂತಿಮ ದಿನದ ಪಂದ್ಯದಲ್ಲಿ ಕರ್ಣ ಕಡೂರು ಅವರು ಐಎನ್ಆರ್ಸಿ ರ್ಯಾಲಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಹಿಂದಿನ ಮೂರು ಸುತ್ತುಗಳಲ್ಲಿ 61 ಅಂಕಗಳನ್ನು ಪಡೆದಿದ್ದ ಮಹೇಂದ್ರ ಅಡ್ವೆಂಚರ್ಸ್ ತಂಡದ ಅಮಿತ್ರಜತ್ ಘೋಶ್ ಹಾಗೂ ಸಹ ಚಾಲಕ ಆಶ್ವಿನ್ ನಾಯಕ್ ಈ ರ್ಯಾಲಿಯಲ್ಲಿ ಅಗ್ರಸ್ಥಾನದೊಂದಿಗೆ ಕಣಕ್ಕಿಳಿದಿದ್ದರು. 50 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದ ಹೆಸರಾಂತ ಅಂತಾರಾಷ್ಟ್ರೀಯ ಕಾರ್ ರ್ಯಾಲಿ ಪಟು ಗೌರವ್ ಗಿಲ್ ಹಾಗೂ ಮೂಸಾ ಷರೀಫ್ ಅಗ್ರಸ್ಥಾನದಲ್ಲಿದ್ದವರನ್ನು ಹಿಮ್ಮೆಟ್ಟಿಸುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದ್ದಿದ್ದರೇ, ಐಎನ್ಆರ್ಸಿಯ 3 ಸುತ್ತುಗಳ ನಂತರ ಮೂರನೇ ಸ್ಥಾನದಲ್ಲಿದ್ದ ಕರ್ಣ ಕಡೂರು ಹಾಗೂ ಕಾಂತರಾಜ್ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದ್ದರು.
ಅಂತಿಮವಾಗಿ ಮೊದಲ ದಿನ ಐಎನ್ಆರ್ಸಿ ರ್ಯಾಲಿಯಲ್ಲಿ ಗೌರವ್ ಗಿಲ್ಲ ಹಾಗೂ ಸಹಚಾಲಕ ಮೂಸಾ ಶರೀಪ್ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಅಮಿತ್ರಜತ್ ಘೋಶ್ ಹಾಗೂ ಸಹ ಚಾಲಕ ಆಶ್ವಿನ್ ನಾಯಕ್ ಇದ್ದರು. ಮೂರನೇ ಸ್ಥಾನದಲ್ಲಿದ್ದ ಕರ್ಣ ಕಡೂರು ಹಾಗೂ ಕಾಂತರಾಜ್ ಸ್ಥಾನ ಪಡೆದಿದ್ದರು. ಶನಿವಾರ ನಡೆದ ಅಂತಿಮ ದಿನದ ರ್ಯಾಲಿಯಲ್ಲಿ ಗೌರವ್ಗಿಲ್ ಹಾಗೂ ಮೂಸಾ ಶರೀಫ್ ಅವರ ಕಾರು ತಾಂತ್ರಿಕ ಕಾಣದಿಂದ ಕೈಕೊಟ್ಟಿದ್ದರಿಂದ ಅವರು ರ್ಯಾಲಿಯ ಕೆಲ ಸುತ್ತ ಬಾಕಿ ಇರುವಂತೆಯೇ ಸ್ಪರ್ಧೆಯಿಂದ ನಿವೃತ್ತರಾಗುವಂತಾಯಿತು. ರವಿವಾರ ನಡೆದ ಅಂತಿಮ ದಿನದ ರ್ಯಾಲಿಯ ಅಂತ್ಯದ ವೇಳೆ ಕಡೂರು ಕರ್ಣ ಅವರು ಎನ್ಆರ್ಸಿ ರ್ಯಾಲಿಯ 4ನೇ ಸುತ್ತಿನಲ್ಲಿ ಮೊದಲ ಸ್ಥಾನದೊಂದಿಗೆ ಚಾಂಪಿಯನ್ ಆದರು.







