Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಥೆನ್ಸ್‌ನ ಅಂಗಳದಲ್ಲಿ...

ಅಥೆನ್ಸ್‌ನ ಅಂಗಳದಲ್ಲಿ...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ4 Dec 2018 12:09 AM IST
share
ಅಥೆನ್ಸ್‌ನ ಅಂಗಳದಲ್ಲಿ...

ರಾಜಕೀಯ ನಾಯಕರಲ್ಲಿ ಅಡಗೂರು ಎಚ್. ವಿಶ್ವನಾಥ್ ಅವರದು ಭಿನ್ನ ವ್ಯಕ್ತಿತ್ವ. ರಾಜಕೀಯದೊಳಗಿದ್ದೂ ತನ್ನ ಸೃಜನಶೀಲ ಮನಸ್ಸನ್ನು ಉಳಿಸಿಕೊಂಡವರು ವಿಶ್ವನಾಥ್. ವೈಚಾರಿಕ ಕಣ್ಣುಗಳ ಮೂಲಕ ಸಮಾಜವನ್ನು ನೋಡುತ್ತಾ ಬಂದವರು. ಅವರ ‘ಹಳ್ಳಿ ಹಕ್ಕಿಯ ಹಾಡು’ ಆತ್ಮಕತೆ ರಾಜಕೀಯವಾಗಿ ಸಾಕಷ್ಟು ಸುದ್ದಿ ಮಾಡಿತ್ತು. ನಿಬಿಡ ರಾಜಕೀಯದಲ್ಲಿ ಮಗ್ನರಾಗಿದ್ದೂ ಓದು ಮತ್ತು ಬರಹಗಳ ಆಸಕ್ತಿಯನ್ನು ಉಳಿಸಿಕೊಂಡವರು. ಈ ನಿಟ್ಟಿನಲ್ಲಿ ‘ಸಂಸತ್ ಯಾತ್ರೆಯ ಕಥೆ-ಅಥೆನ್ಸ್‌ನ ರಾಜ್ಯಾಡಳಿತ’ ರಾಜಕಾರಣಿಯಾಗಿ ಅವರು ಕನ್ನಡಕ್ಕೆ ಕೊಟ್ಟ ಅಪರೂಪದ ಕೊಡುಗೆ.
 ಈ ಹಿಂದೆ ಇಂಗ್ಲೆಂಡ್‌ನ ಸಂಸತ್ ಕಲಾಪ, ರಚನೆ, ವಿದ್ಯಮಾನ, ಸಮಾಚಾರಗಳ ಕುರಿತಾದ ಪುಸ್ತಕ ‘ದಿ. ಟಾಕಿಂಗ್ ಶಾಪ್’ ಕೃತಿಯನ್ನು ನೀಡಿದ್ದ ವಿಶ್ವನಾಥ್ ಅವರು ಇದೀಗ ಅವರು ಗ್ರೀಸ್‌ಗೆ ತೆರಳಿ ಅಲ್ಲಿನ ಅಪಾರ ಮಾಹಿತಿಗಳನ್ನು ಓದುಗರ ಜೊತೆಗೆ ಹಂಚಿಕೊಂಡಿದ್ದಾರೆ. ಗ್ರೀಸ್ ಸಂಸ್ಕೃತಿ ಭಾರತದ ಸಂಸ್ಕೃತಿಗಿಂತಲೂ ಪುರಾತನವಾದುದು. ಪ್ರಜಾಸತ್ತೆಗೂ ಗ್ರೀಸ್‌ಗೂ ಇರುವ ಸಂಬಂಧ ಅನುಪಮ. ವಿಶ್ವದ ರಾಜಕೀಯ ಬೆಳವಣಿಗೆಗಳಿಗೆ ಗ್ರೀಸ್‌ನ ಕೊಡುಗೆ ಅಪಾರ. ಇಂಗ್ಲೆಂಡ್‌ನ ಸಂಸತ್‌ನ ಕುರಿತಂತೆ ಪ್ರಕಟಿಸಿದ ಲೇಖನವೇ ಈ ಕೃತಿಯ ರಚನೆಗೂ ಸ್ಫೂರ್ತಿ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಗ್ರೀಸ್‌ನ ಸಂಸತ್‌ನ್ನು ಅಧ್ಯಯನ ಮಾಡುವುದಕ್ಕಾಗಿಯೇ ಲೇಖಕರು ಆ ದೇಶಕ್ಕೆ ಪ್ರವಾಸ ಬೆಳೆಸಿದರು. ಇಲ್ಲಿ ತಾನು ಕಂಡದ್ದನ್ನಷ್ಟೇ ಬರೆಯದೇ, ಗ್ರೀಸ್‌ನ ಇತಿಹಾಸ, ಸಾಂಸ್ಕೃತಿಕ ಮತ್ತು ರಾಜಕೀಯ ಮುಖಗಳನ್ನು ಅಧ್ಯಯನ ಮಾಡಿ ಬರೆದಿದ್ದಾರೆ. ಮೊದಲ ಅಧ್ಯಾಯದಲ್ಲಿ ಗ್ರೀಸ್‌ನ ಚರಿತ್ರೆಯನ್ನು ಅವಲೋಕಿಸುತ್ತಾರೆ. ಹತ್ತು ಸಾವಿರ ವರ್ಷಗಳ ಹಿಂದಿ ಗ್ರೀಕ್ ಹೇಗೆ ಬೆಳೆಯಿತು, ಅಲ್ಲಿನ ಸಂಸ್ಕೃತಿ, ರಾಜಕೀಯ ಹೇಗೆ ರೂಪುಗೊಂಡಿತು ಎನ್ನುವುದನ್ನು ಪರಿಚಯಿಸುತ್ತಾರೆ. ಗ್ರೀಸ್‌ನ ವೈಭವವನ್ನು ಪರಿಚಯಿಸುತ್ತಲೇ, ‘ಕಾಲದ ತಿರುಗಣೆಯಲ್ಲಿ ಸಾಗಿ ಬಂದ ವ್ಯವಸ್ಥೆಯೊಂದರ ಉಗಮ ಸ್ಥಳದಲ್ಲೇ ನಿರಾಶೆಯ ಕಾರ್ಮೋಡಗಳು ಕವಿದಿದೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. ಎರಡನೇ ಅಧ್ಯಾಯದಲ್ಲಿ ಗ್ರೀಕ್ ಜನರು ಮತ್ತು ಅವರ ನಂಬಿಕೆಗಳ ಬಗ್ಗೆ ವಿವರಗಳಿವೆ. ಭಾರತದಲ್ಲಿರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ದೇವತೆಗಳು ಗ್ರೀಕ್‌ನಲ್ಲಿದ್ದಾರೆ. ಅಲ್ಲಿನ ಧಾರ್ಮಿಕ ನಂಬಿಕೆಗಳು ಸಂಸ್ಕೃತಿಯ ತಳಹದಿಯಲ್ಲಿ ನಿಂತಿರುವುದನ್ನು ಗುರುತಿಸುತ್ತಾರೆ. ಹಾಗೆಯೇ ಗ್ರೀಕರ ಜನಪದ, ಅಲ್ಲಿನ ಸಮಾಜ, ಮನೆಗಳು, ಅವರ ಅಲಂಕಾರ, ಸೌಂದರ್ಯ ಪ್ರಜ್ಞೆಗಳನ್ನು ಕೃತಿ ಸವರುತ್ತಾ ಹೋಗುತ್ತದೆ. ರಂಗಭೂಮಿ, ನಾಟಕ ಸಂಸ್ಕೃತಿಗಾಗಿ ಒಂದು ಅಧ್ಯಾಯವನ್ನು ಮೀಸಲಿರಿಸಿದ್ದಾರೆ. ಚುನಾವಣೆಗಳ ಇತಿಹಾಸ, ಮತಪೆಟ್ಟಿಗೆ, ಮತಎಣಿಕೆ ಇತ್ಯಾದಿ ಕುತೂಹಲಕಾರಿ ವಿವರಗಳು ಈ ಕೃತಿಯಲ್ಲಿ ದೊರಕುತ್ತವೆ. ‘ದಿ ಹೆಲಿನಿಕ್ ಪಾರ್ಲಿಮೆಂಟ್’ ನ ಕತೆಯನ್ನು ಹೇಳುತ್ತಾ ನವ ಅಥೆನ್ಸ್‌ನ ಪರಿಚಯವನ್ನು ಮಾಡಿಕೊಡುತ್ತಾರೆ.
 ಗ್ರೀಸ್‌ನ ರಾಜಕೀಯ ಅರಳಿರುವುದು ಅಲ್ಲಿನ ಸಾಂಸ್ಕೃತಿಕ ತಳಹದಿಯ ಮೇಲೆ ಎನ್ನುವುದನ್ನು ಈ ಕೃತಿ ಹೇಳುತ್ತದೆ. ಇದು ಖಂಡಿತವಾಗಿಯೂ ಬರೇ ರಾಜಕೀಯ ಕೃತಿಯಲ್ಲ. ನಾವೆಲ್ಲ ತಿಳಿದುಕೊಳ್ಳಬೇಕಾದ ಗ್ರೀಸ್‌ನ ಸಾಂಸ್ಕೃತಿಕ, ಸಾಮಾಜಿಕ ವಿವರಗಳುಳ್ಳ ಕೃತಿ. ನಮ್ಮ ವರ್ತಮಾನವನ್ನು ಗ್ರೀಸ್ ಎನ್ನುವ ಕನ್ನಡಿಯಲ್ಲಿ ನೋಡಿಕೊಳ್ಳಬೇಕಾಗಿದೆ. ವಿಶ್ವ ಗ್ರೀಸ್‌ಗೆ ಖಂಡಿತವಾಗಿಯೂ ಋಣಿಯಾಗಿರಬೇಕಾಗಿದೆ. ಹಳ್ಳಿ ಹಕ್ಕಿ ಪ್ರಕಾಶನ, ಮೈಸೂರು ಈ ಕೃತಿಯನ್ನು ಹೊರತಂದಿದೆ. 100 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.

share
-ಕಾರುಣ್ಯ
-ಕಾರುಣ್ಯ
Next Story
X