Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ
  4. ಇಮಾಮ್ ಶಾಫಿಈ (ರ) ಅವರ ಕೆಲವು ಅಮೂಲ್ಯ...

ಇಮಾಮ್ ಶಾಫಿಈ (ರ) ಅವರ ಕೆಲವು ಅಮೂಲ್ಯ ಹಿತನುಡಿಗಳು

ಬೆಳಕಿನ ಬೀಜ

ಅನುವಾದ: ಸನದ್ ಪುತ್ತಿಗೆಅನುವಾದ: ಸನದ್ ಪುತ್ತಿಗೆ5 Dec 2018 6:21 PM IST
share
ಇಮಾಮ್ ಶಾಫಿಈ (ರ) ಅವರ ಕೆಲವು ಅಮೂಲ್ಯ ಹಿತನುಡಿಗಳು

ಅಬೂ ಅಬ್ದುಲ್ಲಾಹ್ ಮುಹಮ್ಮದ್ ಇಬ್ನು ಇದ್ರೀಸ್ ಶಾಫಿಈ (ರ) ಅವರು ಇಸ್ಲಾಮ್ ಧರ್ಮ ಶಾಸ್ತ್ರದ ಮುಂಚೂಣಿಯ ವಿದ್ವಾಂಸರಲ್ಲೊಬ್ಬರು. ಅವರು ಮೂಲತಃ ಫೆಲೆಸ್ತೀನ್‌ನಲ್ಲಿದ್ದ ಅಸ್ಕಲಾನ್ (ಸದ್ಯ ದಕ್ಷಿಣ ಇಸ್ರೇಲ್‌ನಲ್ಲಿರುವ Ashkelon )ನಲ್ಲಿ ಕ್ರಿ.ಶ. 767ರಲ್ಲಿ ಜನಿಸಿ ಕ್ರಿ.ಶ. 820ರಲ್ಲಿ ನಿಧನರಾದರು. ಅವರೊಬ್ಬ ಶ್ರೇಷ್ಠ ಭಾಷಣಕಾರರೂ, ಬರಹಗಾರರೂ ಕವಿಯೂ ಆಗಿದ್ದರು.

ನಿಮ್ಮ ನಾಲಿಗೆಯು ನಿಮ್ಮ ಮನಸ್ಸಿನ ಹೊಲವಾಗಿರುತ್ತದೆ. ನೀವು ನಿಮ್ಮ ಮನದಲ್ಲಿ ಏನನ್ನು ಬೀಜವಾಗಿ ಬಿತ್ತುವಿರೋ ಅದರ ಫಲವೇ ಮಾತಿನ ರೂಪದಲ್ಲಿ ನಾಲಿಗೆಯ ಮೂಲಕ ಪ್ರಕಟವಾಗುತ್ತದೆ.

‘‘ಸಂಕಷ್ಟಗಳೆದುರು ಸಹನೆ ತೋರದವನಿಗೆ ಮರಣದ ಹೊರತು ಬೇರಾವುದರಿಂದಲೂ ಪ್ರಯೋಜನವಾಗುವುದಿಲ್ಲ.’’

ನಿಮ್ಮ ಮುಂದೆ ಇನ್ನೊಬ್ಬರನ್ನು ದೂಷಿಸುವವನು ಇನ್ನೊಬ್ಬರ ಮುಂದೆ ನಿಮ್ಮನ್ನು ದೂಷಿಸದೇ ಇರುವುದಿಲ್ಲ.

ನಿಮ್ಮ ಮಿತ್ರನಾಗಿದ್ದಾಗ ನಿಮ್ಮನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಮುಂದೆ ನಿಮ್ಮಲ್ಲಿ ಇಲ್ಲದ ಗುಣಗಳನ್ನು ಪ್ರಸ್ತಾಪಿಸಿ ಹೊಗಳುವವನು. ನಿಮ್ಮ ಶತ್ರುವಾದಾಗ, ಇನ್ನೊಬ್ಬನನ್ನು ಸಂತೋಷ ಪಡಿಸಲಿಕ್ಕಾಗಿ ಅವನ ಮುಂದೆ, ನಿಮ್ಮಲ್ಲಿ ಇಲ್ಲದ ದೋಷಗಳನ್ನು ಪ್ರಸ್ತಾಪಿಸುವನು.

ಮೂರು ಕೆಲಸಗಳು ಕಠಿಣವಾಗಿವೆ: 1. ದಾರಿದ್ರವಿರುವಾಗ ಔದಾರ್ಯ ತೋರುವುದು, 2. ಏಕಾಂತದಲ್ಲಿ ಧರ್ಮ ನಿಷ್ಠನಾಗಿರುವುದು. 3. ಶಿಕ್ಷೆ ಅಥವಾ ಬಹುಮಾನ ಕೊಡಬಲ್ಲವರ ಮುಂದೆ ಸತ್ಯ ಹೇಳುವುದು.

ಎಂದೂ ಅನಗತ್ಯ ಮಾತನ್ನು ಆಡಬೇಡಿ. ನಿಮ್ಮ ಮಾತು ನಿಮ್ಮ ಮನದೊಳಗೆ ಇರುವ ತನಕ ನೀವು ಅದರ ಮಾಲಕರಾಗಿರುತ್ತೀರಿ. ನಿಮ್ಮ ಮಾತು ನಿಮ್ಮ ಬಾಯಿಂದ ಹೊರಗೆ ಬಂದು ಬಿಟ್ಟಿತೆಂದರೆ ಅದು ನಿಮ್ಮ ಮಾಲಕನಾಗಿ ಬಿಡುತ್ತದೆ.

ದೇವರು ತನಗೆ ಜ್ಞಾನದ ಜ್ಯೋತಿಯನ್ನು ದಯಪಾಲಿಸಬೇಕು ಎಂದು ಬಯಸುವವನು 1. ಸಾಧ್ಯವಾದಷ್ಟು ಏಕಾಂತದಲ್ಲಿರಲಿ, 2. ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆಗೊಳಿಸಲಿ, 3. ಮೂರ್ಖರ ಸಂಘ ತೊರೆಯಲಿ, 4. ಅನ್ಯಾಯವೆಸಗುವ ವಿದ್ವಾಂಸರಿಂದ ದೂರ ಉಳಿಯಲಿ.

ನೀನು ಸತ್ಕರ್ಮವನ್ನು ಹಿಟ್ಟಾಗಿಸು ಮತ್ತು ಜ್ಞಾನವನ್ನು ಉಪ್ಪಾಗಿಸು (ಜ್ಞಾನಕ್ಕಿಂತ ಸತ್ಕರ್ಮದ ಪ್ರಮಾಣ ಹೆಚ್ಚಿರಲಿ) ಎಂದು ಇಮಾಮ್ ಮಾಲಿಕ್ (ರ) ಅವರು ನನಗೆ ಉಪದೇಶಿಸಿದ್ದರು.

ವಿದ್ವಾಂಸರು, ತಮ್ಮ ಒಡೆಯನಿಗೆ (ದೇವರಿಗೆ) ಮಾತ್ರ ತಿಳಿದಿರುವ ಹಲವು ಸತ್ಕರ್ಮಗಳನ್ನು ಮಾಡಿರಬೇಕು. ಎಲ್ಲ ಜನರ ಮುಂದೆ ಪ್ರಕಟವಾಗಿ ಬಿಟ್ಟಿರುವ ಜ್ಞಾನವಾಗಲಿ ಕರ್ಮವಾಗಲಿ ಪರಲೋಕದಲ್ಲಿ ಹೆಚ್ಚು ಉಪಯುಕ್ತವಾಗಿರುವುದಿಲ್ಲ.

ನಿಮ್ಮ ಚಿತ್ತವನ್ನು ನೀವು ಸದಾ ಸತ್ಯದಲ್ಲಿ ನಿರತವಾಗಿಡದಿದ್ದರೆ ಅದು ನಿಮ್ಮನ್ನು ಅಸತ್ಯದಲ್ಲಿ ನಿರತವಾಗಿಡುವುದು. ಮನುಷ್ಯನನ್ನು ನಿಯಂತ್ರಿಸುವುದು, ಪ್ರಾಣಿಗಳನ್ನು ನಿಯಂತ್ರಿಸುವುದಕ್ಕಿಂತ ತುಂಬಾ ಕಷ್ಟದ ಕೆಲಸ.

ಸದಾ ದ್ವೇಷಿಸುತ್ತಿರುವವನು ಮತ್ತು ಅಸೂಯೆ ಪಡುತ್ತಿರುವವನು ಎಂದೂ ಸುಖವಾಗಿರುವುದಿಲ್ಲ.

ಯಾರ ಬುದ್ಧಿಯು ಅವನನ್ನು ಕೆಟ್ಟ ಕಾರ್ಯಗಳಿಂದ ತಡೆದಿಡುತ್ತದೋ ಅವನೇ ನಿಜವಾದ ಬುದ್ಧಿವಂತ.

share
ಅನುವಾದ: ಸನದ್ ಪುತ್ತಿಗೆ
ಅನುವಾದ: ಸನದ್ ಪುತ್ತಿಗೆ
Next Story
X