Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ
  4. ಮಾಲ್ಕಮ್ ಎಕ್ಸ್ ಸಿಡಿ ನುಡಿಗಳು

ಮಾಲ್ಕಮ್ ಎಕ್ಸ್ ಸಿಡಿ ನುಡಿಗಳು

ಪುತ್ತಿಗೆಪುತ್ತಿಗೆ8 Dec 2018 5:06 PM IST
share
ಮಾಲ್ಕಮ್ ಎಕ್ಸ್ ಸಿಡಿ ನುಡಿಗಳು

►ಸತತವಾಗಿ ಅಮಾನುಷ ಹಿಂಸೆಗೆ ತುತ್ತಾಗುತ್ತಾ ಬಂದಿರುವವರಿಗೆ ಅಹಿಂಸೆಯನ್ನು ಉಪದೇಶಿಸುವುದು ಅಪರಾಧವಾಗಿದೆ.

►ಪ್ರತಿಕೂಲ ಸನ್ನಿವೇಶದಷ್ಟು ಫಲಕಾರಿಯಾದದ್ದು ಬೇರೇನಿಲ್ಲ. ಪ್ರತಿಯೊಂದು ಸೋಲು, ಪ್ರತಿಯೊಂದು ನಿರಾಶೆ ಮತ್ತು ಪ್ರತಿಯೊಂದು ನಷ್ಟದ ಹಿಂದೆ, ಮುಂದಿನ ಬಾರಿ ನಿರ್ವಹಣೆಯನ್ನು ಹೇಗೆ ಸುಧಾರಿಸಬಹುದು ಎಂಬ ಪಾಠ ಅಡಗಿರುತ್ತದೆ.

►ಶಿಕ್ಷಣವೆಂಬುದು ನಾಳೆಯ ಜಗತ್ತಿಗಿರುವ ಪಾಸ್ ಪೋರ್ಟ್ ಇದ್ದಂತೆ. ಇಂದು ಯಾರು ನಾಳೆಗಾಗಿ ಸಿದ್ಧತೆ ನಡೆಸುತ್ತಾರೋ, ನಾಳೆಯು ಅವರದಾಗಿರುತ್ತದೆ.

►ಕೆಲವು ಬಿಳಿಯರು ಸಾಮೂಹಿಕವಾಗಿ ಎಲ್ಲ ಕರಿಯರನ್ನು ಅಪರಾಧಿಗಳಾಗಿ ಕಾಣುತ್ತಿರುವುದು ಎಷ್ಟು ತಪ್ಪೋ, ಎಲ್ಲ ಬಿಳಿಯರು ಅಪರಾಧಿಗಳೆಂದು ನಂಬುವುದೂ ಅಷ್ಟೇ ತಪ್ಪು ಎಂಬ ಪಾಠವನ್ನು ನನಗೆ ಕಳಿಸಿದ್ದು ಇಸ್ಲಾಮ್ ಧರ್ಮ.

►ಬೇರುಗಳಿಲ್ಲದ ಮರ ಸತ್ತುಹೋಗುತ್ತದೆ. ಹಾಗೆಯೇ ತಮ್ಮ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬೇರುಗಳ ಪರಿಚಯ ಇಲ್ಲದವರು ಸತ್ತ ಸಮುದಾಯವಾಗುತ್ತಾರೆ.

►ಅಮೆರಿಕನ್ ಸಮಾಜವು ಇಸ್ಲಾಮ್ ಧರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ತನ್ನ ಸಮಾಜದಿಂದ ಜನಾಂಗವಾದವನ್ನು ಸಂಪೂರ್ಣ ಅಳಿಸಿಹಾಕಬಲ್ಲ ಧರ್ಮ ಅದೊಂದೇ. ನಾನು ಮುಸ್ಲಿಮ್ ಜಗತ್ತಿನ ಉದ್ದಗಲಕ್ಕೂ ತಿರುಗಾಡಿದ್ದೇನೆ.

►ಅಮೆರಿಕದಲ್ಲಿ ಇದ್ದಿದ್ದರೆ ‘ಬಿಳಿಯ’ ಎಂದು ಕರೆಯಲ್ಪಡಬಹುದಾಗಿದ್ದ ಅನೇಕ ಮಂದಿಯನ್ನು ಭೇಟಿಯಾಗಿದ್ದೇನೆ, ಅವರ ಜೊತೆ ಮಾತನಾಡಿದ್ದೇನೆ ಮತ್ತು ಅವರ ಜೊತೆ ಭೋಜನ ಮಾಡಿದ್ದೇನೆ. ಆದರೆ ಇಸ್ಲಾಮ್ ಧರ್ಮವು ’ಬಿಳಿಯ’ ಎಂಬ ಮಾನಸಿಕತೆಯನ್ನೇ ಅವರಿಂದ ಕಿತ್ತುಕೊಂಡಿದೆ.

►ನೀವು ಸ್ವಾತಂತ್ರಕ್ಕಾಗಿ ಸಾಯಲು ಸಿದ್ಧರಿಲ್ಲವೇ? ಹಾಗಾದರೆ ಸ್ವಾತಂತ್ರ ಎಂಬ ಪದವನ್ನು ನಿಮ್ಮ ಶಬ್ದಕೋಶದಿಂದ ಕಿತ್ತೆಸೆಯಿರಿ.

►ನೀವು ಸತ್ಯವನ್ನು ಕಾಣಲಾಗದಷ್ಟು ದೇಶಪ್ರೇಮದಲ್ಲಿ ಕುರುಡಾಗಬಾರದು. ತಪ್ಪು ಮಾತನ್ನು ಯಾರು ಆಡಿದರೂ ಅದು ತಪ್ಪೇ. ಅಸೂಯೆಯು ಮನುಷ್ಯನನ್ನು ಕುರುಡಾಗಿಸಿ ಬಿಡುತ್ತದೆ. ಸ್ಪಷ್ಟವಾಗಿ ಚಿಂತಿಸುವುದನ್ನೇ ಅದು ಅಸಾಧ್ಯವಾಗಿಸಿ ಬಿಡುತ್ತದೆ.

►ಮಾಧ್ಯಮವೆಂಬುದು ಇಂದಿನ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಮುಗ್ಧರನ್ನು ಅಪರಾಧಿಗಳಾಗಿ ಬಿಂಬಿಸುವ ಮತ್ತು ಅಪರಾಧಿಗಳನ್ನು ಮುಗ್ಧರಾಗಿ ಬಿಂಬಿಸುವ ಶಕ್ತಿ ಮಾಧ್ಯಮಕ್ಕೆ ಇದೆ. ಅದುವೇ ನಿಜವಾದ ಶಕ್ತಿ. ಅದನ್ನು ಬಳಸಿಕೊಂಡು ಮಾಧ್ಯಮವು ಜನತೆಯ ಮನಸ್ಸುಗಳನ್ನು ನಿಯಂತ್ರಿಸುತ್ತಲಿರುತ್ತವೆ.

►ಇನ್ನೊಬ್ಬರು ನಿಮ್ಮ ಹಾಗೆ ಆಲೋಚಿಸುತ್ತಿಲ್ಲ ಅಥವಾ ನೀವು ಮಾಡಿದ್ದನ್ನು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಯಾರನ್ನಾದರೂ ಖಂಡಿಸಲು ಆತುರ ಪಡಬೇಡಿ. ಇಂದು ನಿಮಗೇನು ತಿಳಿದಿದೆಯೋ ಅದು ನಿಮಗೆ ತಿಳಿಯದಿದ್ದ ಕಾಲವೊಂದಿತ್ತು.

share
ಪುತ್ತಿಗೆ
ಪುತ್ತಿಗೆ
Next Story
X