Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕನ್ನಡದಲ್ಲಿ ಐನ್‌ಸ್ಟೀನ್ ಇನ್ನಷ್ಟು...

ಕನ್ನಡದಲ್ಲಿ ಐನ್‌ಸ್ಟೀನ್ ಇನ್ನಷ್ಟು...

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ10 Dec 2018 12:02 AM IST
share
ಕನ್ನಡದಲ್ಲಿ ಐನ್‌ಸ್ಟೀನ್ ಇನ್ನಷ್ಟು...

ಐನ್‌ಸ್ಟೀನ್‌ನನ್ನು ನಾವು ಸ್ಮರಿಸುವುದು ಕೇವಲ ವಿಜ್ಞಾನಿ ಎನ್ನುವ ಕಾರಣಕ್ಕಾಗಿಯಲ್ಲ, ಆತ ಅದರಾಚೆಗೆ ಮಹಾ ಮಾನವತಾವಾದಿಯೂ ಹೌದು. ಆದುದ ರಿಂದಲೇ ಐನ್‌ಸ್ಟೀನ್ ಬರಹಗಳು ವಿಜ್ಞಾನ ಮತ್ತು ವಿಚಾರಗಳೆರಡರ ಸಮನ್ವಯವಾಗಿವೆ. ಇಂದು ಐನ್‌ಸ್ಟೀನ್ ಬರಹಗಳು ವಿಶ್ವವ್ಯಾಪಿಯಾಗಲು ಇದೂ ಮುಖ್ಯ ಕಾರಣ. ಕನ್ನಡಕ್ಕೆ ಐನ್‌ಸ್ಟೀನ್ ಬರಹ ಹೊಸತೇನಲ್ಲ. ಆದರೆ ಆತನ ಚಿಂತನೆಗಳು ವರ್ತಮಾನಕ್ಕೆ ಹೆಚ್ಚು ಪ್ರಸ್ತುತವಾಗುತ್ತಿದೆ. ಆದುದರಿಂದ ಆತನ ಬರಹಗಳು ಬೇರೆ ಬೇರೆ ರೂಪಗಳಲ್ಲಿ ಮತ್ತೆ ಮತ್ತೆ ನಮ್ಮ ನಡುವೆ ಹರಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಮ್‌ಗ್ರೀನ್ ಅವರು ಸಂಪಾದಿಸಿದ ‘ಅಲ್ಬರ್ಟ್ ಐನ್‌ಸ್ಟೀನ್: ಆಯ್ದ ಬರಹಗಳು’ ಕೃತಿಯ ಭಾಷಾಂತರ ನಮಗೆ ಮುಖ್ಯವೆನಿಸುತ್ತದೆ. ವಿಜಯ ನಾಗ್ ಜಿ. ಅವರು ಇದನ್ನು ಕನ್ನಡಕ್ಕೆ ತರುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ‘‘ವ್ಯಕ್ತಿಯನ್ನು ಹೆಳವನನ್ನಾಗಿಸುವುದೇ ಬಂಡವಾಳಶಾಹಿತ್ವದ ಘೋರವಾದ ದುಷ್ಕೃತ್ಯವಾಗಿದೆ’’ ಎಂಬ ಐನ್‌ಸ್ಟೀನ್ ನಿಲುವು ಮತ್ತು ಅವರ ದೂರಗಾಮಿ ಚಿಂತನೆ ಇಂದು ಹೆಚ್ಚು ಸ್ಪಷ್ಟವಾಗುತ್ತಿದೆ. ಅವರು ಅಂದು ಹೇಳಿದ್ದು, ಇಂದು ನಿಜವಾಗುತ್ತಿದೆ.

ಕೃತಿಯನ್ನು ಒಟ್ಟು ಆರುಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗ, ರಾಷ್ಟ್ರೀಯತೆ ಮತ್ತು ಅದನ್ನು ಸುತ್ತುವರಿದ ಚಟುವಟಿಕೆಗಳನ್ನು ಚರ್ಚಿಸುತ್ತದೆ. ಶಾಂತಿವಾದ, ಸೇನಾಡಳಿತ, ಫ್ಯಾಶಿಸಂ, ಶಾಂತಿವಾದಿಯ ಸವಾಲುಗಳ ಕುರಿತಂತೆ ಇಲ್ಲಿ ಐನ್‌ಸ್ಟೀನ್ ಮಾತನಾಡುತ್ತಾರೆ. ರಾಷ್ಟ್ರೀಯತೆಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ‘ಅದು ಮಾನವ ಜನಾಂಗಕ್ಕೆ ಅಂಟಿದ ದಡಾರ’’ ಎಂದು ಅಭಿಪ್ರಾಯ ಪಡುತ್ತಾರೆ. ಮಿಲಿಟರಿ ಆಡಳಿತವನ್ನು ‘ನಾಗರಿಕತೆಗೆ ಹೊಕ್ಕಿದ ಪ್ಲೇಗ್‌ನ ಕುರುಹು’ ಎಂದು ಟೀಕಿಸುತ್ತಾರೆ. ಐನ್‌ಸ್ಟೀನ್ ಚಿಂತನೆಗಳನ್ನು ನಮ್ಮದಾಗಿಸಿಕೊಂಡಂತೆ, ಅತ್ಯಂತ ಮಾನವೀಯವಾದ ಅವರ ರಾಜಕೀಯ ಒಳನೋಟ ನಮ್ಮಲ್ಲಿ ಅಚ್ಚರಿ ಉಂಟು ಮಾಡುತ್ತದೆ.ವಿಶ್ವಸಂಸ್ಥೆಗೆ ಅವರು ಬರೆದ ಪತ್ರಗಳೂ ಅವರ ರಾಜಕೀಯ ನಿಲುವುಗಳನ್ನು ಸ್ಪಷ್ಟಪಡಿಸುತ್ತದೆ. ಬಂಡವಾಳಶಾಹಿತ್ವ ಮತ್ತು ಸಮಾಜವಾದವನ್ನು ಚರ್ಚಿಸುತ್ತಾ ವಿಶ್ವದ ಆರ್ಥಿಕ ಸಂಕಷ್ಟಗಳ ಕಾರಣಗಳನ್ನು ಅವರು ಶೋಧಿಸುತ್ತಾರೆ. ಮಾನವ ಹಕ್ಕು ಹಾಗೂ ನಾಗರಿಕ ಹಕ್ಕುಗಳ ಕಾಳಜಿಯೂ ಇಲ್ಲಿರುವ ಅವರ ಬರಹಗಳಲ್ಲಿವೆ. ಅಲ್ಪಸಂಖ್ಯಾತರು, ನಿಗ್ರೋಗಳ ಪ್ರಶ್ನೆಗಳು, ಮಾನವ ಹಕ್ಕುಗಳ ಕುರಿತ ಅವರ ಬರಹಗಳು ಇಂದು ಹೆಚ್ಚು ಅನ್ವಯವಾಗುವಂತಹದ್ದು.
ಅನುವಾದ ಓದುಗನನ್ನು ನಿರಾಳವಾಗಿ ತಲುಪದೇ ಇರುವುದಕ್ಕೆ ಅನುವಾದಕರ ಕನ್ನಡ ತುಸು ತೊಡಕಕಾಗುತ್ತದೆ. ಇಂಗ್ಲಿಷ್ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳನ್ನು ಕೊಡುವಲ್ಲಿ ಅನುವಾದಕರು ಅಲ್ಲಲ್ಲಿ ಎಡವುತ್ತಾರೆ. ಇದು ವಾಕ್ಯಗಳನ್ನು ಗೊಂದಲಗೊಳಿಸುತ್ತಾ ಹೋಗುತ್ತದೆ. ಸಂವಹನ ಮೈಸೂರು ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 100. ಮುಖಬೆಲೆ 80 ರೂಪಾಯಿ. ಆಸಕ್ತರು 9480559969 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X